ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Tuesday 6 December 2011

Why this Facebook ri....

ವೈ ದಿಸ್ ಕೊಲವೇರಿ ಹಾಡಿನ ಟ್ಯೂನ್ ಗೆ ಕನ್ನಡ ಸಾಹಿತ್ಯ.....
ಫ್ರೆಂಡ್ಸ್ ಇದು ನನ್ನ ಮೊದಲ ಪ್ರಯತ್ನ... ಸಾಹಿತ್ಯ ಮತ್ತು ಹಿನ್ನಲೆಗಾಯನ ನಂದೇ (ಮಂಜು.ಎಂ.ದೊಡ್ಡಮನಿ) ನನಗೆ ಹಾಡೋಕೆ ಬರೋದಿಲ್ಲ ಆದ್ರು ಟ್ರೈ ಮಾಡಿದಿನಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.....

~$ಮರೀಚಿಕೆ$~




Thursday 22 September 2011

"ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ"




ನಂಬಲು ಆಗುತ್ತಿಲ್ಲ ಒಂದೇ ಒಂದುವಾರದಲ್ಲಿ ಏನೆಲ್ಲ ಆಗಿ ಹೋಯಿತು ನನ್ನ ಜೀವನದಲ್ಲಿ , ಎಲ್ಲಾ ಒಂದು ಕೆಟ್ಟ ಕನಸು ಅಂದು ಕೊಂಡು ನಿದ್ದೆಯಿಂದ ಎದ್ದು ಬಿಡೋಣ ಅಂತ ಅನಿಸುತ್ತೆ ಅಜ್ಜಿ, ಆದರೆ ಅದೆಲ್ಲವೂ ವಾಸ್ತವ ಅನಿಸಿದಾಗ ಆದ ನೋವು ಅಷ್ಟಿಷ್ಟಲ್ಲ . ಅಷ್ಟೊಂದು ಅವಸರವೆನಿತ್ತು ಅಜ್ಜಿ ಒಂದು ಮಾತು ಹೇಳದೆ ನಿದ್ರೆಯಿಂದ ಚಿರ ನಿದ್ರೆಗೆ ಜಾರುವಷ್ಟು...! 

ಹೇಳದೆ ಹೋದೆ ನೀ ಯಾರಿಗೂ
ನಿದ್ರೆಗೂ ಚಿರ ನಿದ್ರೆಗೂ 
ಇರುವ ಅಂತರವ 
ತಿಳಿಸುವ ನೆಪದಲ್ಲಿ
ತಿರುಗಿ ಬಾರದ ಊರಿಗೆ..! 

(My grand mother )
ಅಪ್ಪ ಕೈಬಿಟ್ಟಾಗ ಜೀವನಕ್ಕೆ ಹೆದರಲಿಲ್ಲ, ಮಾಮ ದೂರಾದಾಗ ಅತಿ ದುಃಖದಲ್ಲಿ ಮುಳುಗಲಿಲ್ಲ, ಕೆಲಸವಿಲ್ಲದೇ ಕೆಲಸಕ್ಕಾಗಿ ಅಲೆಯುವಾಗ ವಿಚಲಿತನಾಗಲಿಲ್ಲ ಆದರೆ ಅಂದು ನಡು ರಾತ್ರಿ ಬಂದ ನೀ ತಿರುಗಿ ಬಾರದ ದಾರಿಯಲ್ಲಿ ಒಬ್ಬಳೇ ಹೋದೆ ಅನ್ನೋ ಒಂದು ಭಯಂಕರ ಫೋನ್ ಕಾಲ್ ಗೆ ನಾ ಕಟ್ಟಿದ್ದ ಎಲ್ಲಾ ಕನಸುಗಳು ಆಸೆಗಳು ನನ್ನಲ್ಲಿನ ಆಸಕ್ತಿ ಉತ್ಸಾಹಗಳು ಕ್ಷಣಾರ್ಧದಲ್ಲೇ ತಡೆಯಲಾಗದ ನೋವಿನ ಸುನಾಮಿಯಲ್ಲಿ ಕೊಚ್ಚಿ ಹೋದವು..!  ಎಂದೋ ಆಗುವ ಪ್ರಪಂಚದ ಅಂತ್ಯ ಆಗಬಾರದೇಕೆ ಈ ಕ್ಷಣವೇ ಅಂತ ಅನಿಸಿದ್ದು  ವಿಜಯನಗರ ಬಸ್ ಸ್ಟಾಪ್ ನಲ್ಲಿ ರಾತ್ರಿ ಒಂದು ಗಂಟೆಗೆ ಮಜೆಸ್ಟಿಕ್ ಬಸ್ ಗಾಗಿ ಕಾದು ಕೂತಾಗ....! 

ಉಕ್ಕಿ ಬರುವ ದುಃಖವ 
ತಡೆದು ಕೂತೆ ನಾನು 
ನಿನ್ನ ನೋಡೋ ಅವಸರದಿ 
ಎಷ್ಟು ಮೈಲಿಗಳ ದೂರದಲ್ಲಿ....! 

ಇನ್ನೂ ನೆನಪಿದೆ ಅಜ್ಜಿ ನನಗಾಗಿ ನೀ ಪಟ್ಟ ಕಷ್ಟ ಸುಡೋ ಬಿಸಿಲಲ್ಲಿ ನಡು ರಾತ್ರಿ ಕತ್ತಲಲ್ಲಿ ಅದು ಎಷ್ಟು ಬಾರಿ ನನ್ನ ಹೊತ್ತುಕೊಂಡು ಆಸ್ಪತ್ರೆಯ ಮೆಟ್ಟಿಲ್ಲು ಹತ್ತಿದ್ದಿ, ಅದೆಷ್ಟು ದೇವರಿಗೆ ಹರಕೆಗಳನ್ನೂ ಹೊತ್ತು ಪೂಜೆ ಸಲ್ಲಿಸಿದ್ದಿ,  ಈಗ್ಲೂ ನೀನಿಲ್ಲ ಅಂತ ಅಂದುಕೊಂಡರೆ ತುಂಬಾ ನೋವಾಗುತ್ತೆ, ಸಮುದ್ರದ ಮಧ್ಯೆ ನಾ ನಿಂತ ಹಡಗು ಧಿಡಿರನೆ ಮುಳುಗಿ ಹೋದರೆ ದಡ ತಲುಪುವುದಾದರೂ ಹೇಗೆ..? ನೀನೆಲ್ಲೋ ಇದ್ದೀಯ ನನ್ನ ಕಾಯುತ್ತಿದ್ದಿಯ, ಹುಟ್ಟು ಹಾಕಿ ತಲುಪಿಸಬೇಕಾದ ದಡಕ್ಕೆ ನನ್ನನ್ನು ತಲುಪಿಸುತ್ತಿಯಾ ಅನ್ನೋ ನಂಬಿಕೆ ನನಗೆ ಅಂದಿಗೂ ಇಂದಿಗೂ ಇದ್ದೆ ಇದೇ..!  

ನೀನಿರುವೆ ಅನ್ನೋ 
ಕಹಿ ನಂಬಿಕೆ ಸಾಕು 
ಆಳೆತ್ತರದ ಅಲೆಗಳ ದಾಟಿ
ಕನಸುಗಳ ದೋಣಿ ಮುಳುಗದಂತೆ 
ನಾವಿಕನಾಗಿ ದಡ ಸೇರುವೆ...! 

ನೀನಿದ್ದಗೆಲ್ಲ ಹೇಳ್ತಾ ಇದ್ದೆ ಅಜ್ಜಿ "ಪ್ರತಿ ದಿನ ದೇವರ ಫೋಟೋಗೆ ಕೈ ಮುಗಿ ಅಂತ ಬಟ್ ಈಗ ಅಮ್ಮ ಹೇಳ್ತಾಳೆ ಅಜ್ಜಿ ಫೋಟೋಗೆ ಕೈ ಮುಗಿದು ಹೋಗು ಅಂತ" ಕಾಲಾಯ ತಸ್ಮೈ ನಮಃ  ಅನ್ನೋದು ಇದಕ್ಕೇನಾ...? ಮಮತೆ ಪ್ರೀತಿ ವಾತ್ಸಲ್ಯ ಸಂಕಟ ನೋವು ಕಣ್ಣಿರು ದುಃಖ ಇವುಗಳ ಮೌಲ್ಯ ಈಗ ನನಗೆ ಅರಿವಾಗಿದೆ ಅಜ್ಜಿ, ದುಃಖದಲ್ಲಿ ಇದ್ದ ನನ್ನ ಎಲ್ಲಾ ಸ್ನೇಹಿತರಿಗೂ ನಾನು ಸಾಂತ್ವಾನ ಈಜಿ ಆಗಿ ಹೇಳ್ತಾ ಇದ್ದೆ ಬಟ್ ಅದನ್ನ ಅನುಭವಿದಾಗಲೇ ನನಗೆ ಗೊತ್ತಾಗಿದ್ದು "ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ" ಅಂತ.

ನೀನಿಲ್ಲದ ಮನೆಯಲ್ಲಿ 
ನಿಲ್ಲಲಾರದ ಕಣ್ಣಿರು 
ತುತ್ತು ತುತ್ತಿಗೂ ನಿನ್ನ ನೆನಪು
ಬಂದು ಹೋಗು ಅಜ್ಜಿ ಮತ್ತೆ ಒಮ್ಮೆ
ಮಡಿಲಲ್ಲಿ ನಾ ಮಲಗಿ ನಿದ್ರಿಸುವೆ...! 



ಪ್ರೀತಿಯಿಂದ
ದೊಡ್ಡಮನಿ.ಎಂ.ಮಂಜುನಾಥ
~$ಮರೀಚಿಕೆ$~

Thursday 8 September 2011

"ದಚ್ಚು"

ತುಂಬಾ ದಿನಗಳಾಗಿತ್ತು ಬರೆದು...! ನನ್ನ ಕವನ ಸಂಕಲನ ಬಿಡುಗಡೆಯ ಖುಷಿಯಲ್ಲಿ ಕಳೆದು ಹೋಗಿದ್ದೆ ಮತ್ತೆ ಈಗ ಬೇಡವೆಂದರೂ ಮನಸ್ಸು ಬರೆಯುವಂತೆ ಒತ್ತಯಿಸುತ್ತಿದ್ದೆ ಏನನ್ನ ಬರೆಯಲಿ ....? ಬೆಂಗಳೊರಿನ ಬ್ಯುಸಿ ಲೈಫ್ ನಲ್ಲಿ...! ಆದರು ಬರೆಯ ಹೊರಟ್ಟಿದ್ದೇನೆ ಮತ್ತೊಂದು ಹೊಸ ಬ್ಲಾಗ್ ನಲ್ಲಿ ಬನ್ನಿ ಒಮ್ಮೆ ಭೇಟಿ ಕೊಡಿ ನನ್ನ "ದಚ್ಚು" ಅನ್ನೋ ಬ್ಲಾಗ್ ಗೆ...

"ದಚ್ಚು"ವಿಗಾಗಿ ಈ ಕೆಳಗಿನ ಲಿಂಕ್ ನೋಡಿ 
http://dacchudoddamani.blogspot.com
  

ಪ್ರೀತಿಯಿಂದ 
~$ಮರೀಚಿಕೆ$~

Wednesday 24 August 2011

ಪುಸ್ತಕಗಳ ಬಿಡುಗಡೆಯ ಸಂತಸದ ಕ್ಷಣಗಳ ಕೆಲವು ಫೋಟೋಗಳು..!


ಬೆಂಗಳೂರು : ದಿನಾಕ 21.08.2011 ರಂದು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ದೊಡ್ಡಮನಿ ಎಂ.ಮಂಜುನಾಥ ಅವರ "ಮಂಜು ಕರಗುವ ಮುನ್ನ" ಕವನ ಸಂಕಲನದ ಜೊತೆ ರೂಪ ಎಲ್ ರಾವ್ ಅವರ ಪ್ರೀತಿ ಏನೆನ್ನಲ್ಲಿ ನಿನ್ನ..? ಹಾಗೂ ಸುದೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕಗಳನ್ನ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ, ಸಾಹಿತಿ ರಮೇಶ್ ಕಾಮತ್ ಹಾಗೂ ಚಿತ್ರ ಸಾಹಿತಿ ಹೃದಯ ಶಿವ ಅವರುಗಳು ಏಕಕಾಲದಲ್ಲಿ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ತೆಗೆದ ಕೆಲವು ಭಾವ ಚಿತ್ರಗಳು ನಿಮಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೆ ಫೋಟೋ ಕ್ಲಿಕಿಸಿದ ಪ್ರಕಾಶ್ ಸರ್ ಶಿವು ಸರ್ ಬಾಲು ಸರ್ ಮತ್ತು ಗುರುಪ್ರಸಾದ, ಮಲ್ಲಿಕಾರ್ಜುನ್ ಸರ್ ಎಲ್ಲರಿಗೂ ತುಂಬಾ ಥ್ಯಾಕ್ಸ್ ...!







Tuesday 16 August 2011

3 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ..!



"ಯಾವುದೇ ಯಾರದೇ ಪುಸ್ತಕ ಬಿಡುಗಡೆ ಸಮಾರಂಭಗಳ ಆಹ್ವಾನಕ್ಕೆ ಕಾಯಬೇಡಿ

ನಿಸ್ವಾರ್ಥತೆ ಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಏಕೆಂದರೆ ಅದು ಸಾಹಿತ್ಯಲೋಕಕ್ಕೆ

ನೀವು ನೀಡುವ ಅತಿ ದೊಡ್ಡ ಗೌರವ"

~$ಮರೀಚಿಕೆ$~




ಬ್ಲಾಗ್ ಲೋಕದ ಎಲ್ಲಾ ಸಜ್ಜನರಿಗೂ ಈ ಚಿಕ್ಕವನ ಚಿಕ್ಕ ನಮಸ್ಕಾರಗಳು...!

ತುಂಬಾ ದಿನಗಳ ನನ್ನ ಕನಸು ಇದೀಗ ನೆರವೇರುತ್ತಿದೆ ಎಂದೋ ಹೊರಬರ ಬೇಕಿದ್ದ ನನ್ನ ಕವನ ಸಂಕಲನದ ಪುಸ್ತಕ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ತಡವಾಗಲು ಕಾರಣ ನನ್ನ ಮೊಂಡತ...! ಹೌದು ನನ್ನ ಕಲ್ಪನೆಗೆ ತಕ್ಕ ಹಾಗೆ ಪುಸ್ತಕವನ್ನ ಹೊರತರಬೇಕು ಪುಸ್ತಕದಲ್ಲಿ ಹೊಸತನ ತುಂಬಬೇಕು ಅನ್ನೋ ಹಠದಲ್ಲಿ ನಾನು ಇಷ್ಟು ದಿನ ನನ್ನ ಕನಸನ್ನ ನನ್ನಲ್ಲಿ ಇಟ್ಟು ಕಾಪಾಡಿದೆ ಕೊನೆಗೆ ಎಲ್ಲಾ ನನ್ನ ಕನಸುಗಳು ಮಂಜಿನಂತೆ ಕರಗುವ ಮುನ್ನ ಕೆ.ಗಣೇಶ್ ಕೋಡೂರು" ಹಾಗೂ "ಬೆನಕ ಬುಕ್ ಬ್ಯಾಂಕ್"ನ ಬಳಗ ಮುಂದೆ ಬಂದು ನನ್ನ ಕಲ್ಪನೆಗಳಿಗೆ ಸ್ಪಂದಿಸಿ ಇಂದು "ಮಂಜು ಕರಗುವ ಮುನ್ನ" ಅನ್ನೋ ಹೆಸರಿನಡಿ ಕನ್ನಡ ಸಾಹಿತ್ಯ ಲೋಕದ ಹಿತಿಹಾಸದಲ್ಲೇ ವಿನೂತನ (Different) ಅನಿಸೋ ಪುಸ್ತಕವನ್ನ ಲೋಕಾರ್ಪಣೆ ಮಾಡಲು ಸಹಕರಿಸಿದ್ದಾರೆ ಅವರಿಗೆ ಈ ಮೂಲಕ ಒಂದು ಚಿಕ್ಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ..!

ಹಾಗೆಯೇ ನಮ್ಮ ನಿಮ್ಮೆಲ್ಲರ ಬ್ಲಾಗ್ ಲೋಕದ ವಿಜ್ಞಾನಿ ಜ್ಞಾನಿ ಡಾಕ್ಟರ್ ಅಜಾದ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ ಅಲ್ಲದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಪಾತ್ರ ಅಪಾರ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಹಾಗೆ ಖ್ಯಾತ ಕವಿ ಮತ್ತು ಸಿನಿಮಾ ಸಾಹಿತಿ ಹೃದಯ ಶಿವ ಅವರು ಬೆನ್ನುಡಿ ಬರೆದು ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ ಅವರಿಗೂ ಕೂಡ ಅನಂತ ವಂದನೆಗಳು.

ಇನ್ನೂ ನನ್ನ ಎಲ್ಲಾ ಕವನಗಳಲ್ಲೂ ಓದಿ ಪ್ರೋತ್ಸಹಿಸಿ ಕವಿಯಾಗಿಸಿದ ಬಜ್ಜ್. ಆರ್ಕುಟ್ , ಫೇಸ್ ಬುಕ್ ಅಲ್ಲದೆ ಎಸ್.ಎಂ.ಎಸ್. ಗೆಳೆಯ ಗೆಳತಿಯರೆಲ್ಲರಿಗೂ ನಾನು ಚಿರಋಣಿ...!

ಅಂದಹಾಗೆ ನನ್ನ ಕವನ ಸಂಕಲನ "ಮಂಜು ಕರಗುವ ಮುನ್ನ" ಮತ್ತು ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?" ಅಲ್ಲದೆ ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕಗಳು ಏಕಕಾಲದಲ್ಲಿ ಲೋಕಾರ್ಪಣೆ ಹೊಂದಲಿವೆ ತಾವೆಲ್ಲರೂ ಬಂದು ಕಾರ್ಯಕ್ರಮವನ್ನ ಯಶಸ್ವೀ ಆಗಿ ನಡೆಸಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ...! ಬರ್ತಿರ ಅಲ್ವ...!

ಈ ಕಾರ್ಯಕ್ರಮಕ್ಕೆ ಸಹಕರಿಸಿ ನಮ್ಮನೆಲ್ಲ ಹುರಿದುಂಬಿಸುತ್ತಿರುವ ಕೆ.ಶಿವು ಸರ್ ಅವರಿಗೂ ಒಂದು ಥ್ಯಾಂಕ್ಸ್ ಹೇಳ್ದೆ ಇರೋಕೆ ಆಗುತ್ತಾ....? ತುಂಬಾ ಧನ್ಯವಾದಗಳು ಶಿವು ಸರ್ ನಿಮ್ಮ ಬ್ಯುಸಿ ಲೈಫ್ ನಲ್ಲೂ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ತುಂಬಾ ಸಹಕರಿಸಿದ್ದಿರ ನಿಮಗೆ ನನ್ನ ಕಡೆಯಿಂದ ಚಿಕ್ಕ ಧನ್ಯವಾದ..!

ದಿನಾಂಕ : 21.08.2011. (ಭಾನುವಾರ ಆಗಸ್ಟ್ 2011)
ಸಮಯ : ಬೆಳಗ್ಗೆ 10:30
ಸ್ಥಳ : ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರು.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9742495837

ನಿಮ್ಮ ಆಗಮನದ ನಿರೀಕ್ಷೆಯಲ್ಲಿ
~$ಮರೀಚಿಕೆ$~

ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ"

ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?"

"ಮಂಜು ಕರಗುವ ಮುನ್ನ"

Friday 5 August 2011

ಮಂಜು ಕರಗುವ ಮುನ್ನ ಪುಸ್ತಕದ ಬಗ್ಗೆ "ಮಾನಸ" ಪತ್ರಿಕೆಯಲ್ಲಿ

"ಮಾನಸ" ಪತ್ರಿಕೆಯ ಸಂಪಾದಕರಾದ ಕೆ. ಗಣೇಶಕೋಡೂರು ರವರು ಮನತುಂಬಿ ನನ್ನ  "ಮಂಜು ಕರಗುವ ಮುನ್ನ" ಕವನಸಂಕಲನದ ಬಗ್ಗೆ "ಮಾನಸ" ಪತ್ರಿಕೆಯಲ್ಲಿ ಬರೆದಿದ್ದರೆ.... ಒಮ್ಮೆ ನೀವು ಓದಿ......! 



Tuesday 2 August 2011

"ಮಂಜು ಕರಗುವ ಮುನ್ನ"


"ಪುಸ್ತಕಗಳ ಇತಿಹಾಸದಲ್ಲೇ (ನನಗೆ ತಿಳಿದ ಮಟ್ಟಿಗೆ) ವಿನೂತನ ಮಾದರಿಯ ಕವನ ಸಂಕಲನದ ಪುಸ್ತಕ ಸದ್ಯದಲ್ಲೇ ನಿಮ್ಮ ಕೈಗಳಲ್ಲಿ " 

ಚಲನಚಿತ್ರ ಸಾಹಿತಿ ಹೃದಯ ಶಿವ ಅವರ ಬೆನ್ನುಡಿ & ಡಾಕ್ಟರ್ ಅಜಾದ್ ಅವರ ಮುನ್ನುಡಿ ಹೊಂದಿರುವ "ಮಂಜು ಕರಗುವ ಮುನ್ನ" ಕವನ ಸಂಕಲನ...!

ಎಂದಿನಂತೆ ಸ್ವಾಗತಿಸಿ ಹರಸಿ ಹಾರೈಸಿ ಆಶೀರ್ವದಿಸಿ ಪ್ರೋತ್ಸಹಿಸಿ ...! 

  ಪ್ರೀತಿಯಿಂದ
~$ಮರೀಚಿಕೆ$~


Tuesday 3 May 2011

"ರೀಲ್ ಹುಡುಗಿಯ ಜೊತೆ ರೈಲ್ ಹುಡುಗ"


ರೈಲ್ ಗೂ ನನಗು ಬಿಡದ ನಂಟು ಅನಿಸುತ್ತೆ ನಾನು ಹೆಚ್ಚು ರೈಲ್ ಗೆ, ರೈಲ್ವೆ ಸ್ಟೇಷನ್ ಗೆ ಹೋಗೋದಿಲ್ಲ ಅತಿ ವಿರಳ ಯಾವಾಗಾದ್ರೂ ಅಪರೂಪಕ್ಕೆ ಅಂತ ಹೋದ್ರೆ ಏನಾದ್ರು ಒಂದು ಘಟನೆಗಳು ನಡೆದೇ ನಡೆಯುತ್ತೆ ಅದರಲ್ಲಿ ಸಂಶಯನೇ ಇಲ್ಲಾ...! 


ಹಿಂದೇ ಒಮ್ಮೆ ನಿಮ್ಮ ಜೊತೆ ರೈಲ್ ನಲ್ಲಿ ನನಗೆ ಆಕಸ್ಮಾತ್ ಸಿಕ್ಕ ಒಂದು ಹುಡುಗಿಯ ಭಾವನೆಗಳನ್ನ ಹೊತ್ತು ನಿಮ್ಮ ಮುಂದೆ ಬಂದಿದ್ದೆ ಅದು ಮನಕರಗುವ, ಕಣ್ಣ ಹನಿ ಕಣ್ಣಿಂದ ಜಾರುವ ಒಂದು ಸಣ್ಣ ಕಥೆ ಆದ್ರೆ ಈಗ ನಿಮ್ಮ ಮುಂದೆ ತಂದಿರೋದು ತಲೆ ಹರಟೆ ಹುಡುಗ ಹುಡುಗಿಯ ಪಕ್ಕ 420 ಕಥೆ ಓದಿ...! 

ಆಕೆ ಒಳ್ಳೆ ಗೆಳತಿ..!  ನಾನು ಒಳ್ಳೆ ಗೆಳೆಯ..! ಅದ್ರಲ್ಲಿ ಡೌಟ್ ಇಲ್ಲಾ..! 

ಆಕೆ ತುಂಬಾ ಸಾಫ್ಟ್ ...! ನಾನು ತುಂಬಾನೇ ಸಾಫ್ಟ್ ..! ಅದರಲ್ಲೂ ಡೌಟ್ ಇಲ್ಲಾ..! 

ಆಕೆ ಒಳ್ಳೆ ಹುಡುಗಿ...!  ನಾನು ಒಳ್ಳೆ >>>>>ಬೇಡ ಬಿಡಿ ಕಿವಿಗೆ ಒಳ್ಳೇದಲ್ಲ ...! 

ಈ ರೈಲು, ಈ ಭಾನುವಾರಗಳಿಗೆ ನನ್ನ ಕಂಡ್ರೆ ತುಂಬಾ ಇಷ್ಟ ಅನಿಸುತ್ತೆ , ನಾನು ಬರೆಯೋ ಎಲ್ಲಾ ಲೇಖನಗಳು  ಹೆಚ್ಚು ಭಾನುವಾರದ್ದೆ ಆಗಿರುತ್ತೆ ಆಶ್ಚರ್ಯ ಅಲ್ವ..! 

ಅವತ್ತು ಭಾನುವಾರ ಬೆಳಗ್ಗೆ ಎದ್ದು ನನ್ನ ಫ್ರೆಂಡ್ ಜೊತೆ ಯಾವದಾದ್ರು ಒಂದು ಕನ್ನಡ ಸಿನಿಮಾ ನೋಡೋಕೆ ಹೋಗೋಣ ಅಂತ ಇದ್ದೆ ಆದ್ರೆ ನನ್ನ ಫ್ರೆಂಡ್ ಅದು ಯಾವ ಹುಡುಗಿ ಕೈಗೆ ಕೊಟ್ಟು ಬಂದಿದ್ನೋ ಏನೋ ಚಂಡಾಟ ಆಡೋಕೆ ಅವನ ಮನಸನ್ನಯಾಕೋ ಬೇಡ ಮೂಡ ಇಲ್ಲ ಅಂದ, ಸರಿ ಅಂತ ನಾನು ಸುಮ್ನಾದೆ ಆಮೇಲೆ ಸ್ನಾನ ಮಾಡಿ ಫುಲ್ ಡ್ರಿಂ ಆಗಿ ಯಾರನ್ನೋ ಮೀಟ್ ಮಾಡೋಕೆ ಅಂತ ಮೆಜೆಸ್ಟಿಕ್ ಕಡೆ ಹೋದೆ ಅವರನ್ನು ಮೀಟ್ ಮಾಡಿ ಬರುವಾಗ ಎರಡು ಗೊಂಬೆಗಳನ್ನ (Teddy bear) ತಗೊಂಡಿದ್ದೆ ಒಂದು ದೊಡ್ಡದು ಇನ್ನೊಂದು ಸ್ವಲ್ಪ ಚಿಕ್ಕದು ತುಂಬಾ ಮುದ್ದಾಗಿದ್ವು. ಹಾಗೂ ಹೀಗೂ ಟೈಮ್ ಪಾಸು ಮಾಡಿಕೊಂಡು ರೂಮ್ ಗೆ ಬರೋಣ ಅಂತ ಟೈಮ್ ನೋಡ್ಕೊಂಡೆ 1 ಘಂಟೆ 45 ನಿಮಿಷ ಆಗಿತ್ತು ಅವಾಗ ನಾನು ಮೆಜೆಸ್ಟಿಕ್ ನಲ್ಲಿ ಇದ್ದೆ ಅದು ಯಾಕೋ ನನ್ನ ಗಮನ ನನ್ನ ಫ್ರೆಂಡ್ ಅದೇ "ರೀಲ್ ಹುಡುಗಿ" ಕಡೆ ಹೋಯ್ತು ಅವಳು ಇರೋದು ಚನ್ನೈ ನಲ್ಲಿ ಬೆಂಗಳೂರಿಂದ ಚನ್ನೈಗೆ ಹೋಗಿ ಸ್ವಲ್ಪ ದಿನ ಆಯ್ತು ತುಂಬಾ ಒಳ್ಳೆ ಫ್ರೆಂಡ್ ಅಲ್ದೆ ಆರ್ಕುಟ್ ಫ್ರೆಂಡ್  ಅವಳ ಪರಿಚಯ ನನಗೆ ತುಂಬಾ ಇತ್ತು ಒಂದೆರಡು ಸಲ ಅವಳು ಬೆಂಗಳೂರ್ ನಲ್ಲಿ ಇದ್ದಾಗ ಮೀಟ್ ಕೊಡ ಆಗಿದ್ದೆ, ಪಾನಿ ಪೂರಿ ಸಹ ಜೊತೆಗೆ ತಿಂದಿದ್ವಿ....! ಅದರಲ್ಲೂ ಪುಟ್ಬಾತ್ ಮೇಲೆ ಸಿಗೋ ಪಾನಿ ಪೂರಿ ಅಂದ್ರೆ ಪ್ರಾಣ ಅವಳಿಗೆ. ನನ್ನ ಫ್ರೆಂಡ್ಸ್ ಎಲ್ಲಾ ನನ್ನ ಮಂಜು ಅಂತ ಇಲ್ಲಾ ಬಾಬು ಅಂತ ( ನನ್ನ ಮತ್ತೊಂದು ಹೆಸರು "ಬಾಬು" ಅದು ಕೇವಲ ದಾವಣಗೆರೆಯಲ್ಲಿ ಮಾತ್ರ ಪ್ರಚಲಿತ ) ಇನ್ನು ಕೆಲವರು ನನಗೆ ಅವರಿಗೆ ಇಷ್ಟ ಬಂದ ರೀತಿ ಕರೀತಾರೆ ಅವೆಲ್ಲ ಅವರರವರ ಆಸೆ, ಇಚ್ಛೆ, ಪ್ರೀತಿ ನಾನು ಯಾರಿಗೂ ಏನು ಹೇಳೋಲ್ಲ ನಿಮ್ ಇಷ್ಟ ಬಂದ ರೀತಿ ಕರೀರಿ ಅಂತೀನಿ ಆದ್ರೆ ಈ "ರೀಲ್ ಹುಡುಗಿ" ನನಗೆ ಇಟ್ಟ ಹೆಸರು ಅಂದ್ರೆ "ಕಂದಾ" ಅಂತ, ನಾನು ಯಾವಾಗಲೇ  ಮೆಸೇಜ್ ಮಾಡ್ಲಿ ಯಾವಾಗಲೇ ಕಾಲ್ ಮಾಡ್ಲಿ ಕಂದಾ ಅಂತ ಹೇಳ್ದೆ ಮಾತು ಆಕೆ ಬಾಯಿಂದ ಹೊರಡೋಲ್ಲ ಅದಕ್ಕೆ ನಾನು ಆಕೆಗೆ ಕಂದಾ ಅಂತಾನೆ ಕರೆಯೋದು. ಈಗ್ಲೂ ನಾನು ಫೋನ್ ನಲ್ಲಿ ಮಾತಾಡುವಾಗ ಕೆಲವರ ಜೊತೆ ಕಂದಾ ಅಂತಾನೆ ಮಾತಾಡ್ತಾ ಇರ್ತೀನಿ, ನನ್ನ ಜೊತೆ ಮಾತಾಡೋ ಆರ್ಕುಟ್ ಫ್ರೆಂಡ್ಸ್ ಗೆ ಫೇಸ್ ಬುಕ್ ಫ್ರೆಂಡ್ಸ್ ಗೆ ಅದರ ಅನುಭವ ತುಂಬಾನೇ ಆಗಿದೆ ಅನಿಸುತ್ತೆ ಅಲ್ವ ..! 

"ಅಳಿಯದ  ನೆನಪುಗಳ
ತಂಗಾಳಿಯೇ ನೀ ಕಂದಾ
ಪೆದ್ದು ಪೆದ್ದು ಮಾತುಗಳ  
ಚಂದದ ನಗುವು ನೀ ಕಂದಾ 
ನನ್ನ ನಿನ್ನ ಪವಿತ್ರ ಸ್ನೇಹಕೆ 
ನೀ ಇಟ್ಟ ಹೆಸರು "ಕಂದಾ"

ಅಯ್ಯೋ ನಾನು ಏನೋ ಹೇಳೋಕೆ ಹೋಗಿ ಏನೇನೊ ಹೇಳ್ತಾ ಇದೀನಿ ಅಲ್ವ ..! ಹಲೋ ಯಾರು ಹಾಗಂತ ಹೇಳಿದ್ದು ನಾನು ಹೇಳ್ಬೇಕಾಗಿರೋದನ್ನೇ ಹೇಳ್ತಾ ಇದೀನಿ ಹ್ಹ... ಹ್ಹ... ಹ್ಹ... ಓಕೆ ಓಕೆ ಈಗ ಸೀದಾ ವಿಷಯಕ್ಕೆ ಬರೋಣ ಅದೇನೋ ಹೇಳ್ತಾ ಇದ್ನಲ್ಲ ಹಾ.. ಹಾ.. ಹಾ.. ಈಗ ನೆನಪಾಯ್ತು ಅದೇ ಅವತ್ತು ಭಾನುವಾರ ಟೈಮ್ ನೋಡಿಕೊಂಡೆ ಆಗಲೇ 1 ಘಂಟೆ 45 ನಿಮಿಷ ಆಗಿತ್ತು ಅವಾಗ್ಲೇ ನಾನು ಮೆಜೆಸ್ಟಿಕ್ ನಲ್ಲಿ ಇದ್ದೆ  ಅವಾಗ ಈ ಹುಡುಗಿ ನೆನಪಾದ್ಲು ತಕ್ಷಣ ಕಾಲ್ ಮಾಡಿ ಬಿಟ್ಟೆ 

ರೈಲ್ ಹುಡುಗ (ಅಂದ್ರೆ ನಾನು) :- ಹೈ ಕಂದಾ 

ರೀಲ್ ಹುಡುಗಿ (ಅಂದ್ರೆ ಅವಳು) :- ಹೈ ಕಂದಾ ಹೇಗಿದ್ದೀಯ  ?

ರೈಲ್  :- ಫೈನ ನೀನು ಹೇಗಿದ್ದೀಯ ಕಂದಾ ?

ರೀಲ್  :- ಪರವಾಗಿಲ್ಲ ಕಣೋ ಚನ್ನಾಗಿದಿನಿ 

ರೈಲ್   :-  ಮತ್ತೆ ಬೆಂಗಳೂರ್ಗೆ ಬಂದ್ರೆ ಮೀಟ್ ಆಗ್ತೀನಿ ಅಂದಿದ್ದೆ ಎಲ್ಲಿದಿಯ ಈಗ 

ರೀಲ್   :-  ಸಾರೀ ಕಣೋ ಟೈಮ್ ಆಗ್ಲಿಲ್ಲ ಈಗ ಹೊರಡುತ್ತಾ ಇದೀನಿ ಮಜೆಸ್ಟಿಕ್ ನಲ್ಲಿ ಚನ್ನೈ ಟ್ರೈ ನಲ್ಲಿ ಇದೀನಿ 

ರೈಲ್   :-  ನಿಜನಾ ಕಂದಾ ರೀಲ್ ಏನು ಬಿಡ್ತಿಲ್ಲ ತಾನೇ 

ರೀಲ್   :-  ಅಯ್ಯೋ ಇಲ್ಲಾ ಕಣೋ ನಿಜವಾಗಲು ಬೇಕಾದರೆ ಬಂದು ನೋಡು 

ರೈಲ್   :-  ಸರಿ ತಾಳು ಬರ್ತೀನಿ ಗೊತ್ತಾಗುತ್ತೆ ರೀಲೋ ರಿಯಲ್ಲೋ ಅಂತ 

ರೀಲ್   :-  ಏನ್ ತಮಾಷೆ ಮಾಡ್ತಿಯ ಎಲ್ಲಿದಿಯ ನೀನು ಈಗ ?

ರೈಲ್   :-  ಇಲ್ಲಾ ಕಂದಾ ಮಜೆಸ್ಟಿಕ್ ನಲ್ಲಿ ಇದೀನಿ 10 ನಿಮಿಷದಲ್ಲಿ ನಿನ್ ಹತ್ರ ಬರ್ತೀನಿ ನೋಡ್ತಾ ಇರು 

ರೀಲ್   :-  ಹೌದೇನೋ ಬೇಗಾ ಬಾರೋ ನನಗೆ ಫುಲ್ ಖುಷಿ ಆಗ್ತಾ ಇದೇ ಬೇಗ ಬೇಗ ಬಾ 2 ಘಂಟೆಗೆ ಟ್ರೈನ್ 
             ಹೊರಡುತ್ತೆ 

ರೈಲ್   :-  ನಾನು ಬರ್ದೇ ಆ ರೈಲ್ ಮುಂದೆ ಹೋಗೋಲ್ಲ ಬರ್ತಾ ಇದೀನಿ 

ರೀಲ್   :- ಓಕೆ ಓಕೆ ಬೇಗ ಬಾ 

ನೋಡಿ ಚೈಂಜ್ ಕತೆ :-  ನೋಡೋಕೆ ಆಗೋಲ್ಲ ಓದಿ ;-)

ಸರಿ ನಾನು ಶಿವ ಅಂತ ಮೆಜೆಸ್ಟಿಕ್ ನಿಂದ ಆ ಕ್ರೌಡ್ ನಲ್ಲಿ ಹಾಗೂ ಹೀಗೂ ನುಗ್ಗಿ ತಳ್ಳಿ ಒಂದೇ ಉಸಿರಲ್ಲಿ ರೈಲ್ವೆ ಸ್ಟೇಷನ್ ಉಳಗೆ ಹೋದೆ ರೈಲ್ ಹೊರಡೋಕೆ ಟೈಮ್ ಹತ್ರ ಬಂದಿತ್ತು ಸರಿ ಇನ್ನೇನು ಒಳಗೆ ಹೋಗೋಣ ಅಂತ ಅನ್ಕೊಂಡೆ ತಕ್ಷಣ ನೆನಪಾಯ್ತು ಉಳಗೆ ಹೋಗೋಕೆ ಫ್ಲಾಟ್ ಫಾರಂ ಟಿಕೆಟ್ ತಗೋ ಬೇಕು ಅಂತ ಹ್ಮಂ ತಗೊಳೋಣ ಅಂತ ನೋಡಿದ್ರೆ ಫ್ಲಾಟ್ ಫಾರಂ ಟಿಕೆಟ್  ತಗೊಳೋಕೆ ನಿಂತಿದ್ದ ಜನರ ಕ್ಯೂ ನೋಡಿ ತಲೆ ಗಿರ್  ಅಂತು ಹಂಗು ಹಿಂಗು ಕ್ಯೂ ನಲ್ಲಿ ಮಧ್ಯಕ್ಕೆ ಹೋಗಿ ಸೇರ್ಕೊಂಡೆ ಸದ್ಯ ಯಾರು ಏನು ಅನ್ಲಿಲ್ಲ ಇನ್ನೇನು ಟಿಕೆಟ್ ತಗೋಬೇಕು ಅಂತ ಜೆಬ್ ಗೆ ಕೈ ಹಾಕಿ ನೂರ್ರು ನೋಟು ಕೊಟ್ಟು ಒಂದು ಫ್ಲಾಟ್ ಫಾರಂ ಟಿಕೆಟ್ ಕೊಡಿ ಅಂದೇ  ಆ  ಟಿಕೆಟ್ ಕೊಡೊ ಮೇಡಂ ಚೈಂಜ್  ಇಲ್ಲಾ ಚೈಂಜ್ ಕೊಡಿ ಅಂದ್ಲು ನನ್ನ ಬಟ್ಟೆ ಬಿಚ್ಚಿ ಹುಡುಕಿದರು ನನ್ನ ಹತ್ರ ಚೈಂಜ್  ಇರ್ಲಿಲ್ಲ, ರಿಕ್ವೆಸ್ಟ್ ಮಾಡಿಕೊಂಡರು ಚೈಂಜ್ ಇಲ್ಲಾ ಅಂತ ಮುಲಾಜಿಲ್ದೆ ಹೇಳಿದ್ರು ತಕ್ಷಣ ತಲೆ ಓಡಿಸಿ ಪಕ್ಕದಲ್ಲೇ ಒಂದು ಅಂಗಡಿಗೆ ಹೋಗಿ "Coca Cola" ಕೊಡಿ ಆಫ್ ಲೀಟರ್ ಅಂದೇ ಅವನು ಸರ್ Cola ಇಲ್ಲಾ "Miranda" ಇದೇ ಅಂತ ರಾಗ ತಗ್ದಾ ಅಯ್ಯೋ ಯಾವ್ದೋ ಒಂದು ಬೇಗ ಕೊಡಪ್ಪ ಅಂದು ತಗೊಂಡು ಮತ್ತೆ ಕ್ಯೂ ನಿಂತು ಹಾಗೂ ಹೀಗೂ ಟಿಕೆಟ್ ತಗೊಂಡು ಒಳಗೆ ಹೋಗಿ ಮತ್ತೆ ಫೋನ್ ಮಾಡಿದೆ  

ಚಿಕ್ಕು ಬುಕ್ಕು ರೈಲು :-

ಈ ಕಡೆಯಿಂದ :- ಕಂದಾ ನಾ ಇಲ್ಲೆ ಇದೀನಿ ಚನ್ನೈ ಟ್ರೈನ್ ಹತ್ರ ಯಾವ ಬಾಕ್ಸ್ (ಬೋಗಿ)ನಲ್ಲಿ ಇದೀಯ ನೀನು

ಆ ಕಡೆಯಿಂದ :-  ಹಾಗೆ ಮುಂದೆ ಬಾರೋ ನಾ ಮುಂದೆ ಇದೀನಿ 

ಅವಳು ಹೇಳಿದ್ದು ಮುಂದೆ ಬಾ ಅಂತ,  ನಾನು ಅನ್ಕೊಂಡೆ ನನ್ನ ಮುಂದೆ ಅಂತ ಮೊದ್ಲೇ ನನಗೆ ರೈಲ್ ಗಳ ಹಿಂದೇ ಮುಂದೆ ಒಂದು ಗೊತ್ತಾಗೊಲ್ಲ ಹೋದೆ ಹೋದೆ ಹೋದೆ ಕೊನೆ ಬೋಗಿತನಕ ಹೋಗಿ ಆಮೇಲೆ ಕಾಲ್ ಮಾಡಿದೆ ಕಂದಾ ಎಲ್ಲಿದಿಯ ನಾನು ಕೊನೆಗೆ ಬಂದಿದೀನಿ ಅಷ್ಟ್ರಲ್ಲಿ ರೈಲ್ ಹೊರಡ್ತಾ ಇತ್ತು, ಸರಿ ಕಂದಾ ಮತ್ತೆ ಯಾವಾಗಾದ್ರೂ ಸಿಗೋಣ ಟ್ರೈನ್ move ಆಗ್ತಾ ಇದೆ ಅಂತ ಹೇಳೋಣ ಅಂತ ಇದ್ದೆ ಅಷ್ಟ್ರಲ್ಲಿ ಅವ್ಳು 

ಕಂದಾ :-  ಅಯ್ಯೋ ಟ್ರೈನ್ Move ಆಗ್ತಾ ಇದೇ ಬೇಗ ಬಾರೋ, 

ನಾನು :-  ಆಯ್ಯೋ ನಿನ್ನ ತಲೆ ಟ್ರೈನ್ ಹೋಗ್ತಾ ಇದೇ ಬಾ ಬಾ ಅಂದ್ರೆ ಏನ್ ಹರ್ಕೊಂಡು ಬರ್ಲಾ 

ಕಂದಾ :- ಲೇ ಟ್ರೈನ್ ಹತ್ತೋ  ಅದನ್ನ ಹೇಳಿಕೊಡಬೇಕಾ 

ನಾನು :- ಒಹ್ ಒಹ್ ಒಹ್ ನಾನೇನು ಸೂಪರ್ ಮ್ಯಾನಾ, ಸ್ಪೈಡರ್ ಮಾನ್ಯಾ  ಇಲ್ಲಾ ಫಿಲ್ಮ್ ಹೀರೋನಾ ಹೋಗೋ ಟ್ರೈನ್ ಗೆ ಹತ್ತೋಕೆ 

ಕಂದಾ :- ಲೋ ಅವರಿಗಿಂತ ನೀನೇನು ಕಮ್ಮಿಯಿಲ್ಲ ಬೇಗ ಹತ್ತೋ 

ಈ ಥರ ಡೈಲಾಗ್ ಕೇಳಿದ್ಮೇಲೆ ಹೇಗ್ರಿ ಸುಮ್ನೆ ಇರ್ಲಿ ಆಗಿದ್ದು ಆಗ್ಲಿ ಅಂತ ಹೋಗ್ತಾ ಇರೋ ರೈಲ್ ಗೆ ಹತ್ತಿಕೊಂಡೆ  

( ಹಾಗೆ ಇಮೇಜ್ ಮಾಡಿಕೊಳ್ಳಿ ರವಿಚಂದ್ರನ್ ಯಾರೇ ನೀನು ಚಲುವೆ ಫಿಲ್ಮ್ ನಲ್ಲಿ  ಹೋಗ್ತಾ ಇರೋ ಟ್ರೈನ್ ಗೆ ಹತ್ತೋ ಹಾಗೆ ಜೊತೆಗೆ ಬ್ಯಾಕ್ ಗ್ರೌಂಡ್ ನಲ್ಲಿ ಮ್ಯೂಸಿಕ್

ಹೇಳಿ ಕೇಳಿ ಚನ್ನೈ ಗೆ ಹೋಗ್ತಾ ಇರೋ ರೈಲು, ಟಾರ್ಚ್ ಹಾಕಿ ಹುಡುಕಿದರು ಕನ್ನಡಿಗರ ಮುಖಗಳು ಒಂದು ಕಾಣೋಲ್ಲ ನಾನೂ ಅಪ್ಪಟ ಕನ್ನಡಿಗ  ಅಷ್ಟೊಂದು ಜನಗಳಲ್ಲಿ ನಾನೊಬ್ಬನೇ "ವೀರ ಕನ್ನಡಿಗ" ಹಾಗೂ ಹೀಗೂ ಎಲ್ಲರನ್ನು ಸರ್ಸ್ಕೊಂಡು ಮುಂದಿನ ಬೋಗಿ ಗೆ ಹೋಗೋಣ ಅಂತ ಹೋಗ್ತಾ ಇದ್ದೆ  ಎಲ್ಲಿ ತನಕ ಹೋಗೋಕೆ ಸಾದ್ಯ ಎರಡು ಬೋಗಿ ದಾಟಿದ್ದೆ ಹೆಚ್ಚು ಮುಂದೆ ಹೋಗೋಕೆ ದಾರಿ ಇರ್ಲಿಲ್ಲ..! ಸರಿ ಒಳ್ಳೆ ಪಜೀತಿ ಆಯ್ತಲ್ಲ ಅನ್ಕೊಂಡೆ ಮತ್ತೆ ಕಾಲ್ ಮಾಡಿದೆ ಅದೇನೋ ಹೇಳ್ತಾರಲ್ಲ ಪಾಪಿ ಸಮುದ್ರಕ್ಕೊಂದ್ರು ....... ಓಲ್ಡ್ ಗಾದೆ ಬೇಡ ನ್ಯೂ ಗಾದೆ ಕೇಳಿ "ಪಾಪಿ ಟವರ್ ಹತ್ತಿದ್ರು ಚೊಟ್ಟುದ್ದ ಸಿಗ್ನಲ್" ಅನ್ನೋ ಹಾಗೆ ಅವಳಿಗೆ ಕಾಲ್ ಮಾಡೋಕೆ ಸಿಗ್ನಲ್ ಸಿಗ್ಲಿಲ್ಲ ರೀ ನನ್ನ ಚಿಂತೆಲಿ ನಾನು ಇದ್ರೆ ಪಕ್ಕದಲ್ಲಿ ಯಾರೋ ಸರ್ ಸರ್ 10 ರೂಪಾಯಿ ಕೊಡಿ ತುಂಬಾ ದೂರ ಹೋಗ್ಬೇಕು ದುಡ್ಡು ಕಳ್ದು ಹೋಗಿದೆ ಅಂದ ಅದು ಅಲ್ಪ ಸ್ವಲ್ಪ ಕನ್ನಡದಲ್ಲಿ, ಜೀವ ಬಂತು ನನಗೆ ಅನ್ಕೊಂಡೆ ಆದ್ರು 10 ರುಪಾಯಿ ಕೇಳ್ತಾ ಇದಾನೆ ನೋಡೋಕೆ ಕಷ್ಟದಲ್ಲಿ ಇರ್ಬೇಕು ಅನಿಸ್ತು ಅಲ್ದೆ ಕೆಲವರಿಗೆ ಇದೇ ಕೆಲಸ ಸುಳ್ಳು ಹೇಳಿ ದುಡ್ಡು ತಗೋಳೋದು ನಾನು ಮುಂದೆ ಮಾತಾಡೋಕೆ ಹೋಗಲಿಲ್ಲ ಆದ್ರೆ ಅವನು ಬಿಡಲಿಲ್ಲ ತಲೆ ಕೆಟ್ಟು 10 ರೂಪಾಯಿ ಕೊಟ್ಟು  ಮುಂದೆ ಯಾವ ಸ್ಟಾಪ್ ಇದೇ ಅಂದೇ ಅವನು ಸರ್ ಸದ್ಯಕ್ಕೆ ಯಾವದೇ ಸ್ಟಾಪ್ ಇಲ್ಲಾ ಅಂದ ಒಹ್ "ಚಿಟ್ಟೆ ಹಿಂದೇ ಬಂದು ಕೆಟ್ಟೆ" ಅನ್ಕೊಂಡೆ ಅಷ್ಟ್ರಲ್ಲಿ ಮತ್ತೆ ಅವಳೇ ಕಾಲ್ ಮಾಡಿದ್ಲು ತಪ್ಪು ತಪ್ಪು ಮಿಸ್ ಕಾಲ್ ಮತ್ತೆ ನಾನು ಮಾಡಿ ಹೇಳ್ದೆ ಅಯ್ಯೋ ಹತ್ತಿರ ಯಾವದೇ ಸ್ಟಾಪ್ ಇಲ್ವಂತೆ ಮುಂದೆ ಏನ್ ಮಾಡ್ಬೇಕು ಅಂದೇ ಅಯ್ಯೋ ಯಾರೋ ಹೇಳಿದ್ದು ಇದೇ ಇನ್ನೊಂದು ಹತ್ತು ನಿಮಿಷ ಬರುತ್ತೆ ಇಳಿದು ಬಿಟ್ಟು ಬೇಗ ಬೇಗ ಮುಂದೆ ಬಾ ಆಯ್ತಾ ಅಂದು ಕಟ್ ಮಾಡಿದ್ಲು ಸರಿ ಏನ್ ಮಾಡೋಕೆ ಆಗುತ್ತೆ ಅಂತ ಹೊರಗಡೆ ನೋಡ್ತಾ ನಿಂತಿದ್ದೆ 

ಟಿಕೆಟು ರಹಿತ ಪ್ರಯಾಣ ದಂಡಕ್ಕೆ ಆಹ್ವಾನ :-) 

ಪಕ್ಕದಲ್ಲಿ ಯಾರೋ ಏನೋ ಮಾತಾಡ್ತಾ ಇದ್ರೂ ನಾನು ಕೇಳಿದ್ರು ಕೇಳ್ದೆ ಇರು ಥರ ಇದ್ದೆ ಯಾಕಂದ್ರೆ ಅದು ತಮಿಳು ಅವರು ಮಾತಾಡುವಾಗ ನಡುವೆ ನಡುವೆ ಟಿಕೆಟ್ ಚೆಕ್ಕಿಂಗ್.....! ಟಿಕೆಟ್ ಚೆಕ್ಕಿಂಗ್....! ಅವಾಗ್ಲೇ ನನಗೆ ಹೊಳೆದಿದ್ದು ನನ್ನ ಹತ್ರ ಫ್ಲಾಟ್ ಫಾರಂ ಟಿಕೆಟ್ ಮಾತ್ರ ಇರುದು ಚನ್ನೈ ಟಿಕೆಟ್ ಅಲ್ಲಾ ಅಂತ ಅಪ್ಪಿ ತಪ್ಪಿ ಚೆಕ್ಕಿಂಗ್ ಆಫೀಸೆರ್ ಬಂದ್ರೆ ನನ್  ಕತೆ ಮುಗಿತು ಅನ್ಕೊಂಡೆ ಏನ್ ಮಾಡೋಕೆ ಆಗೋಲ್ಲ ನೀರಿಗೆ ಇಳಿದಿದಿನಿ ಈಜ್ಲೇ ಬೇಕು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ ಅಷ್ಟರಲ್ಲಿ ಟ್ರೈನ್ ಸ್ಲೋ ಆಗ್ತಾ ಇತ್ತು ಸ್ವಲ್ಪ ಕುಶಿ ಆಯ್ತು ಸ್ಟಾಪ್ ಬಂತು ಟ್ರೈನ್ ಇಂದ ಇಳಿದು ತಡ ಮಾಡಿದ್ರೆ ಕಷ್ಟ ಅಂತ ಮುಂದೆ ಮುಂದೆ ಓಡ್ತಾ ಇದ್ದೆ  ಸುಳ್ಳು ಸುಳ್ಳು ಹಂಗಂತ ನಾನು ಅನ್ಕೊಂಡಿದ್ದೆ ಅಲ್ಲಿ ಕ್ರೌಡ್ ನಲ್ಲಿ ಎಲ್ಲಾ ಟ್ರೈನ್  ಹತ್ತೊರ್ ನನ್ನ ಓಡೋಕೆ ಬಿಡ್ತಾ ಇರ್ಲಿಲ್ಲ ಆದ್ರು ಕಷ್ಟ ಪಟ್ಟು ಸೆಲ್ ಫೋನ್ ನಲ್ಲಿ ಮಾತಾಡ್ತಾ ಮಾತಾಡ್ತಾ ಹೋದೆ ಅಂತು ಇಂತೂ ಕಂದಾ ಟ್ರೈನ್ ಡೋರ್ ಹತ್ರ ನಿಂತು ಇದ್ಲು ಇನ್ನೇನು ಹತ್ರ ಹೋಗ್ಬೇಕು ಮತ್ತೆ ಟ್ರೈನ್ Move ಆಯ್ತು  ಒಳ್ಳೆ ಕಥೆ ಆಯ್ತಾ ಅಲ್ಲಾ ಅನ್ಕೊಂಡು ಕೈಯಲ್ಲಿ ಇದ್ದ  Miranda ಬಾಟ್ಲು ಕೊಟ್ಟು ಸರಿ ಕಂದಾ ಬೈ ಮತ್ತೆ ಫೋನ್ ಮಾಡ್ತೀನಿ ಅಂದೇ ಅವಳು ಬಾಟ್ಲು ತಗೋಳೋದು ಬಿಟ್ಟು ನನ್ನ  ಹತ್ತೋ ಬೇಗ ಅಂತ ಕೈ ಕೊಟ್ಳು ಹುಡುಗಿ  ಕೈ ಕೊಡ್ತಾಳೆ ಅಂದ್ರೆ ಬಿಡೋದು ಉಂಟಾ ಹಿಡ್ಕೊಂಡೆ ಟ್ರೈನ್ ಫಾಸ್ಟ ಆಗಿ move  ಆಗ್ತಾ ಇತ್ತು  ಅದರಲ್ಲೂ ಹತ್ತಿಕೊಂಡೆ ಅಲ್ಲಿಂದ ಸೀದಾ ಅವಳಿದ್ದ ಸೀಟ್ ಗೆ ಹೋಗಿ ಕೂತುಕೊಂಡು ಕೈಯಲ್ಲಿದ್ದ ಬಾಟಲು ತಗೊಂಡು ತೃಪ್ತಿ ಆಗೋ ತನಕ ಕುಡುದು ಎರಡು ಗೊಂಬೆಗಳನ್ನ (Teddy bear) ಅವಳ ಕೈಗೆ ಇಟ್ಟು "ನನ್ನೇನು ಚನ್ನೈ ಗೆ ಕರ್ಕೊಂಡು ಹೋಗೋ ಪ್ಲಾನ್ ಮಾಡಿದಿಯ ಹೇಗೆ" ಅಂದೇ ಹ್ಹ ಹ್ಹ ಹ್ಹ ಇಲ್ಲಾ ಬಾ ನೆಕ್ಷ್ಟ್ ಸ್ಟಾಪ್ ನಲ್ಲಿ ಇಳಿಯುವಂತೆ ಅಂತ ಎದ್ದು ಬರೋದ್ರಲ್ಲಿ ಸ್ಟಾಪ್ ಬಂತು ನಿಜ ಹೇಳ್ಬೇಕು ಅಂದ್ರೆ ಸ್ಟಾಪ್ ಅಲ್ವೇ ಅಲ್ಲ...! ಸ್ಟಾಪ್ಗಿಂತ ಮುಂಚೆನೇ ರೈಲ್ ನಿಂತಿತ್ತು ನಾನು ಅಬ್ಬೇಪಾರಿ ಥರ ಇಳಿದು ಯಾವ ಕಡೆ ಹೋದ್ರೆ ಮಜೆಸ್ಟಿಕ್ ಸಿಗುತ್ತೆ ಅಂತ ಯೋಚನೆ ಮಾಡ್ತಾ ಮಾಡ್ತಾ ನನ್ನ ಕಂದಾಗೆ ಟಾಟ ಮಾಡ್ತಾ ಮಾಡ್ತಾ ಅಂತು ಇಂತೂ ಹೇಗೋ ರೂಮ್ ಸೇರಿದೆ ..!

Moral of the story :- ಚಿಟ್ಟೆ ಸಹವಾಸ ಸಂಡೇ ಫುಲ್ ವನವಾಸ...! 



   ~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837   

Thursday 14 April 2011

ಸಂಜೆ ಮಳೆಯ ಹುಡುಗಿ..!





ರಿಬೇಕು ಅಂದುಕೊಂಡ ಕೆಲವು ನೆನಪುಗಳು ಪದೇ ಪದೇ ನೆನಪಾಗ್ತಾ ಈ ಮನಸ್ಸನ್ನ ಕೆಣಕಿ ಕಾಡುತ್ತವೆ. ಕೆಲವು ಪ್ರತಿಬಿಂಬಗಳು ಹೀಗೆ,  ನನ್ನಿಂದ ಅವಳು ದೂರ ಆದ್ಲು  ! ತಪ್ಪು ತಪ್ಪು ನನ್ನಿಂದ ಅವ್ಳು ದೂರ ಆಗ್ಲಿಲ್ಲ ಅವಳಿಂದ ನಾನೇ ದೂರ ಆದೆ, ಆದ್ರೆ ಅವಳ ನೆನಪುಗಳನ್ನ ಮಾತ್ರ ನಾ ದೂರ ಮಾಡೊಕಾಗ್ಲಿಲ್ಲ ಯಾಕಂದ್ರೆ 

"ನೆನಪುಗಳು 
ಪಾಪಾಸ್ ಕಳ್ಳಿಯಂತೆ
ಅವು ಬರಡು ಭೂಮಿಯನ್ನು
ಬಿಡೋದಿಲ್ಲ"

 ಇನ್ನು ಈ ಸಣ್ಣ ಹೃದಯನ ಬಿಡುತ್ತಾ ಹೇಳಿ ?  ಅದ್ರಲ್ಲೂ ನನ್ನಂತ ಮೃದು ಹೃದಯನ  ಬಿಡೋದುಂಟ. ಅವನ್ಯಾರೋ ತಲೆಕೆಟ್ಟು ಈ ಹೃದಯಕ್ಕೆ ಕೈ ಹಾಕಿ ಪರ ಪರ ಅಂತ ಕೆರ್ಕೊಂಡು ಬಿಟ್ನಂತೆ ಪಾಪ ಅಲ್ವ ! ಕೊನೆಗೆ ಅದರ ನೋವು ತಾಳಕಾಗ್ದೆ "ಪ್ರೀತಿ ಮಧುರ ತ್ಯಾಗ ಅಮರ" ಅಂದನಂತೆ, ಈ ಪ್ರೀತಿನೆ ಹೀಗೆ ಯಾವ ಕಾಫಿ ಶಾಪ್ ನಲ್ಲಿ ಶುರುವಾಗಿ ಯಾವ ವೈನ್ ಶಾಪ್ ನಲ್ಲಿ ಕೊನೆಯಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ ಅಲ್ವ !

ಅಯ್ಯೋ ಬಿಡಿ ನಮಗ್ಯಾಕೆ ಬೇರೆಯವರ ಲವ್ ಸ್ಟೋರಿ :-) 

  ಅದೇಕೋ ಇವತ್ತು ಈ ಮುಸ್ಸಂಜೆ ಮಳೆಲಿ ಆ ಹುಡುಗಿ ನೆನಪಾದ್ಲು, ನಾನು ಅವಳ ಊರಲ್ಲಿ ಅವಳ ಜೊತೆ ಕಳೆದ ದಿನಗಳೆಲ್ಲ ಮತ್ತೆ ಈ ತುಂತುರು ಮಳೆಲಿ ಕಣ್ಣ ಮುಂದೆ ನಿಲ್ತಾ ಇದ್ವು ಯಾಕಂದ್ರೆ ಈ ತುಂತುರು ಮಳೆಯಲ್ಲೇ ಅವಳು ನನಗೆ ಸಿಕ್ಕಿದ್ದು.


"ಬಿರುಸಿನಿಂದ ಸುರಿಯುತಿತ್ತು

ತುಂತುರು ಮಳೆ

ಮೋಡದ ತುದಿಯಲಿ  

ಕೇಳುತಿತ್ತು ಒಲವಿನ ಕರೆ

ತನು ಮನವೆಲ್ಲ ತೊಯ್ದು 

ನಡುಗುತಿತ್ತು ಅವಳ ಕೆನ್ನೆ

ಕೊಡೆ ಹಿಡಿದು ಮೇಲು ನಕ್ಕ

ಹುಡುಗಿ ನೀ ನನ್ನವಳೇ ? ? ?"

( ನಮ್ಮಪ್ಪನಾಣೆ ಅಲ್ಲಾ ಅನಿಸುತ್ತೆ ...! )

ಆ ಸಂಜೆ ಅವಳು ನನಗೆ ಸಿಗದೇ ಇದ್ದಿದ್ರೆ ನನ್ನ ಬದುಕಲ್ಲಿ ಬರೋ ಪ್ರತಿ ಸಂಜೆಗಳಿಗೆ ಅರ್ಥನೇ ಇರ್ತಿರ್ಲಿಲ್ಲ ಅನಿಸುತ್ತೆ ! ಹ್ಹ... ಹ್ಹ... ಹ್ಹ...  ಆ ಥರ ಅನ್ಕೊಂಡ್ರೆ ನನ್ನ ಅಂತ ಮೂರ್ಖ ಈ ಭೂಮಿಮೇಲೆ ಯಾರು ಸಿಗೋಲ್ಲ..! ಅದಕ್ಕೆ ನನ್ನ ಆರ್ಕುಟ್ ಫ್ರೆಂಡ್ ಒಬ್ಳು ಹೇಳ್ತಾ ಇದ್ಲು ನಿಂದು ಕಲ್ಲು ಹೃದಯ ಕಣೋ ಅಂತ :-) ಅದು ನಿಜವಾಗಲು ನಿಜ :-) 

-:ಕಥೆ ಈಗ ಪ್ರಾರಂಭ :-  ಮಳೆಯಲ್ಲೇ ಮಳೆಯಾದ ಮನಸ್ಸು ;-

ಅವತ್ತು ಸಂಜೆ ಸರಿಯಾಗಿ ಐದು ಘಂಟೆ ನಾನು ನನ್ನ ಸ್ನೇಹಿತರು college ಮುಗಿಸಿಕೊಂಡು busಗಾಗಿ  ಕಾಯ್ತಾ ಇದ್ವಿ, ತುಂತುರು ಮಳೆ ಬೇರೆ ಬಸ್ ತಂಗುದಾಣ ಬೇರೆ ಇರ್ಲಿಲ್ಲ ಆಸರೆಗಾಗಿ ಮರದ ಪಕ್ಕ ಹರಟೆ ಹೊಡೆಯುತ್ತ  ನಿಂತುಕೊಂಡು ಇದ್ವಿ ಅವಳು ಅವಳ Friends ಜೊತೆ ನಾವು ನಿಂತಿದ್ದ ಮರದ ಪಕ್ಕ ಬಂದು ನಿಂತಕೊಂಡು ನನ್ನೇ ನೋಡ್ತಾ ಇದ್ಲು ..!  ಅದನ್ನ ನನ್ನ ಗೆಳೆಯ ಉಮೇಶ್ ನೋಡಿ ಲೇ,,,,, ಮಂಜು ಆ ಹುಡುಗಿ ನಿನಗೆ ಗೊತ್ತೇನೋ ಅಂತ ಕೇಳ್ದ ಯಾರೋ!  ಅಂತ ತಿರುಗಿ ನೋಡಿ ಇಲ್ಲಾ ಕಣೋ ಗೊತ್ತಿಲ್ಲ ,,,,, ಯಾಕೆ ? ಅಂದೇ ಯಾಕು ಇಲ್ಲ ತುಂಬಾ ಹೊತ್ತಿಂದ ಅವಳು ನಿನ್ನೆ ನೋಡ್ತಾ ಇದ್ಲು ಅದಕ್ಕೆ ಕೇಳಿದೆ ಅಂದ ಅಷ್ಟರಲ್ಲಿ ನಾನು ಹೋಗಬೇಕಾದ Bus ಬಂತು ಮಳೆ ತುಂಬಾ ಜೋರಾಗಿ ಬರ್ತಾ ಇತ್ತು ನಾನು ಬಸ್ ಹತ್ತಬೇಕು ಅಂತ ಹೋದಾಗ ಹಿಂದಿನಿಂದ ಯಾರೋ ನನ್ನ ಕರೆದಹಾಗೆ ಆಯ್ತು ತಿರುಗಿ ನೋಡಿದಾಗ ಅಚ್ಚರಿ ಕಾದಿತ್ತು ಅಬ್ಬಾ !! ಅಂತಹ ಚಳಿಯಲ್ಲೂ ಮೈ ಬಿಸಿಯಾಗಿ ಬೆವರು ಮಳೆ ನೀರಿನೊಂದಿಗೆ ಬೆರೆತು ಹೋಯ್ತು "ಮಳೆಯಲ್ಲಿ ಹೆಚ್ಚು ನೆನಿಬೇಡಿ ಶೀತವಾಗುತ್ತೆ" ಅಂತ ಹೇಳಿ ಕೊಡೆ ಹಿಡಿದುಕೊಂಡು ನನ್ನ ಜೊತೆ ಬಸ್ ಹತ್ತಿದ್ದು ಅವಳೇನಾ ? 

(ಹೌದು ಇಷ್ಟೋತ್ತು ನನ್ನ ನೋಡ್ತಾ ನಿಂತಿದ್ದ ಅದೇ ಹುಡುಗಿ "ಸಂಜೆ ಮಳೆಯ ಹುಡುಗಿ" ) 

ಅಲ್ಲಿಂದ 15 ನಿಮಿಷಗಳ ಪಯಣದಲ್ಲಿ ನಾನು ಅವಳ ಪರಿಚಯ ಮಾಡಿಕೊಳ್ಳುವಂತಹ ಸಾಹಸಕ್ಕೆ ಕೈಹಾಕಲಿಲ್ಲ,  ನಾನು ಇಳಿಯುವ ಸ್ಟಾಪ್ ಬಂತು ಇಳಿದು ಕೊಂಡು ಹೊರಟೆ, ಅವಳನ್ನ ನಾ ತಿರುಗಿ ಸಹ ನೋಡಲಿಲ್ಲ, ಆದರೆ ಅವಳು ನನ್ನ ಹಿಂದೆಯೇ ಬರ್ತಾ ಇರೋದು ಅವಳು ನನ್ನ ಮತ್ತೆ ಮಾತಾಡಿಸಿದಾಗಲೇ ಗೊತ್ತಾಗಿದ್ದು, ಅದೆಷ್ಟು ಬೇಗ ನನ್ನ ಪರಿಚಯ ಮಾಡಿಕೊಂಡಳು.


ನೀನು ಯಾರೋ
ನಾನು ಯಾರೋ
ನಡುವೆ ಎಷ್ಟೋ ಅಂತರ !

ಆದರು

ಬಯಸಿತೇಕೆ ನಿನ್ನ ಮನವು
ನನ್ನ ಮನದ ಪರಿಚಯ !!!,,,,,,,,

"ಕಟ್ಟಿಕೊಂಡ ಕನಸುಗಳ ನಡುವೆ ಸುಟ್ಟುಹೋದ ಅವಳ ಪ್ರೀತಿ"

ನೀನು ಸಹ ಅದೇ ಊರಿನವಳು ಅಂತ ನನಗೆ ಗೊತ್ತಾಗಿದ್ದೇ ಅಂದು, ಹೌದು,,, ಊರಿಗೆ ಹೊಸಬರ ಅಂತ ನೀ ಕೇಳಿದೆಯಲ್ಲ ಅದು ನಿಜ ನಾನು ನಿಮ್ಮ ಊರಿಗೆ ಬಂದು ಕೇವಲ ಎರಡು ತಿಂಗಳು ಕಳೆದಿತ್ತು ನನ್ನ ವಿದ್ಯಾಭ್ಯಾಸ ಮುಂದುವರೆಸಲು ನಿಮ್ಮ ಊರಿಗೆ ಬಂದು ನೆಲೆಸಿದ್ದೆ, ಅದು ಬಿಡು ನನ್ನದು ಒಂದು ಹಳೆಯ Flashback. ನೀ ಯಾವತ್ತು ನನ್ನ ಬಗ್ಗೆ ನನ್ನ ಜೀವನದ ಬಗ್ಗೆ ವಿಚಾರಿಸಲಿಲ್ಲ ಅದು ನೀನು ಮಾಡಿದ ಒಂದು ದೊಡ್ಡ ತಪ್ಪು!, ಅದೇಕೆ ನನ್ನ ಮೇಲೆ ನಿನಗೆ ಅಷ್ಟೊಂದು ಆಸಕ್ತಿ ಅಂತ ಗೊತ್ತಿಲ್ಲ  ನಾನು ಇಲ್ಲದ ಸಮಯ ನೋಡಿ ಯಾವುದೊ ಪುಸ್ತಕ ಕೇಳುವ ನೆಪದಲ್ಲಿ  ನನ್ನ ಮನೆಗೆ ಬಂದು ನನ್ನ ಅಮ್ಮ, ಅಕ್ಕ ನನ್ನ ತಮ್ಮ ಎಲ್ಲರನ್ನೂ ಪರಿಚಯ ಮಾಡಿಕೊಂಡು ಹೋದೆಯಲ್ಲ ನಿಜಕ್ಕೋ ನಿನ್ನ ಮೆಚ್ಚಲೇ ಬೇಕು ಅಲ್ವ . 

ಮೆಚ್ಚಿಕೊಂಡೆ
ಹಚ್ಚಿಕೊಂಡೆ
ನಿನ್ನನೆಕೋ ಕಾಣೆನು!

ನಿದ್ದೆಯಲ್ಲೂ
ವಿದ್ಯೆಯಲ್ಲೂ
ನಿನ್ನ ಕಂಡು ಕಾಣೆನು!

ಕನಸಿನಲ್ಲೂ
ಮನಸಿನಲ್ಲೂ
ಮರೆತು ನಿನ್ನ ಮರೆಯೇನು ! 

     ಕಂದಾ ನಿನಗೆ ನೆನಪಿದೆಯಾ ಅವತ್ತು ನಿನ್ನ Birthday ಇತ್ತು ನೀನು  ನನಗೋಸ್ಕರ ಗಣೇಶನ ದೇವಸ್ಥಾನದಲ್ಲಿ ಕಾಯ್ತಾ ಇದ್ದೆ But ನಾ ಮಾತ್ರ ಬರ್ಲಿಲ್ಲ  ನನಗೆ ಗೋತ್ತು ನನ್ನ ಮೇಲೆ ನಿನಗೆ ತುಂಬಾ ಕೋಪ ಇದೆ ಅಂತ, ನಾನೂ ಬರಬೇಕು,,,, ನಿನಗೆ wish ಮಾಡ್ಬೇಕು ಅಂತನೇ  ಇದ್ದೆ ಆದ್ರೆ  ಯಾವುದೂ ಕಾರಣದಿಂದ ನಿನ್ನ ನೋಡೋಕೆ ಆಗ್ಲಿಲ್ಲ ,Please ಬೇಜಾರ್ ಮಾಡ್ಕೋಬೇಡ.

 ನೀನು ನನಗೆ ಪರಿಚಯ ಆದ ದಿನದಿಂದ ಪ್ರತಿ ಸಂಜೆ ಆ ಮಳೆಲಿ ನಿನ್ನ ಜೊತೆ ನೆನೆಯುತ್ತ  ಅದೆಷ್ಟು ಹೊತ್ತು ಮಾತಾಡ್ತಾ ಇದ್ವಿ ನಿನಗೆ ನೆನಪಿದೆನ,  ನನಗಂತೂ ಈ ಬೆಂಗಳೂರ್ ಮುಸ್ಸಂಜೆ ಮಳೆಲಿ ನಿನ್ನ ನೆನಸಿಕೊಂಡ್ರೆ  ಇಗ್ಲು ನೀನೆ ನನ್ನ ಪಕ್ಕ ಇದ್ದೀಯ ಅನಿಸುತ್ತೆ  ಏಕೆಂದರೆ ನನಗಂತ ಉಳಿದಿರೋದು ನೀನು ಕೊಟ್ಟ ಆ ಮುಸ್ಸಂಜೆ ನೆನೆಪುಗಳು ಮಾತ್ರ. ಅದೆಷ್ಟು ಚನ್ನಾಗಿ ನೀ ನನ್ನ ಆಗಾಗ "ಮಂಜು" ಅಂತ  ಕರಿತಾ ಇದ್ದೆ  ಈ ಮಂಜು ಅಂದ್ರೆ ಅಷ್ಟೊಂದು ಇಷ್ಟನಾ, ಹುಚ್ಚಿ ಕಣೇ ನೀನು ಮಂಜು ಸ್ವಲ್ಪ ಬಿಸಿಲು ಬಿದ್ರೆ ಕೈಗೆ ಸಿಗದೇ ಕರಗಿ ಹೋಗ್ತಾನೆ ಅನ್ನೋದು ಗೊತ್ತಿರ್ಲಿಲ್ವ ? ? .

ಎಲ್ಲಾ ಹುಡುಗ್ರು ತನ್ನ ಹುಡುಗಿಗಾಗಿ ಕಾದ್ರೆ ನೀನು ಮಾತ್ರ ನನಗೋಸ್ಕರ ಪ್ರತಿ ಸಂಜೆ ಕಾಯ್ತಾ ಇದ್ದೆಲ್ಲ 
ಅದು ಯಾಕೆ ? ? ? 

ನಾನಿನ್ನ ತುಂಬಾ ಪ್ರೀತಿಸ್ತೀನಿ ಅಂದು ನನ್ನ ಮೈಯಲ್ಲಿ ವಿಧ್ಯುತ್ ಸಂಚಲನ ಮಾಡಿಸಿದೆ ಅಲ್ವ 
ಅದು ಯಾಕೆ ? ? ?

ನಿನ್ನ   ಎಲ್ಲಾ ನೋವುಗಳಿಗೆ ಸ್ಪಂದಿಸಿ ಸಾಂತ್ವಾನ ಹೇಳಿ ನಿನ್ನ ನಗುಸ್ತ ಇದ್ದ ನನ್ನ ಒಳ್ಳೆ ಫ್ರೆಂಡ್ ಅಂದು 
ಲವ್ ಯೌ ಅಂದ್ಯಲ್ಲ ಅದು ಯಾಕೆ ? 

ಈ ಪ್ರಶ್ನೆಗಳಿಗೆ ಉತ್ತರ ನನಗೆ ಸಿಗೋಲ್ಲ ಅಂತ ಗೊತ್ತು ಯಾಕದ್ರೆ ನೀ ನನ್ನ ಲವ್ ಮಾಡ್ತಾ ಇದೀನಿ ನಿನ್ನ ಒಪಿನಿಯನ್ ತಿಳಿಸು ಅಂದ ಆ ತುಂತುರು ಮಳೆಯ ಸಂಜೆಯಿಂದನೆ ನಾ ನಿನ್ನಿಂದ ತುಂಬಾ ತುಂಬಾನೇ ದೂರಾದೆ ಒಂದು ದಿನ ಟೈಮ್ ಕೊಡು ಅಂದು ಇಂದಿಗೂ ನಿನ್ನ ಕೈಸಿಗದ "ಮರೀಚಿಕೆ" ಆದೆ ,  ಅದರಲ್ಲಿ ನನ್ನ ತಪ್ಪು ಏನು ಇಲ್ಲಾ ಎಲ್ಲಾ ನಿನ್ನಿಂದ ಅಷ್ಟೇ...! 

ನಿಜ ನನ್ನ ಮುಗ್ಧತೆ, ಮಗುವಿನ ಹೃದಯ, ನನ್ನ ನಗು ಇವೆಲ್ಲ ನಿನಗೆ ಇಷ್ಟ ಅಂತ ಗೊತ್ತು, ಇಷ್ಟ ಪಟ್ಟಿದೆಲ್ಲ ನಮಗೆ ಸಿಗುತ್ತಾ ? ಕಷ್ಟ ಅಲ್ವ..! 

ನಿನ್ನ ನೆನಪುಗಳಿಗೆ ಇಂದಿಗೆ ಐದಾರು ವರ್ಷಗಳೇ ಉರುಳಿವೆ ಏಪ್ರಿಲ್ 17 ನಿನ್ನ ಬರ್ತ್ಡೇ ಅದು ನನಗೆ ಗೊತ್ತಾಗಿದ್ದು,  ಒಮ್ಮೆ ನೀನು ಬರೆದು ಕೊಟ್ಟ  "ಆಟೋಗ್ರಾಪ್" ಬುಕ್ ತಗ್ದು ನೋಡ್ತಾ ಇರುವಾಗ..! 

ಈಗ್ಲೂ ನನಗೆ ತುಂಬಾ ನೆನಪಾಗೋದು ಅವತ್ತು ನೀನು ಕೇಳ್ದೆ ಅಲ್ವ ಮಂಜು ಬೆಂಗಳೊರಿಗೆ ಹೋಗಿದ್ದೆ ಅಲ್ವ  ಕೆಲಸ ಸಿಕ್ತಾ ಅಂತ ನಾನು ಇಲ್ಲಾ ಸಿಗ್ಲಿಲ್ಲ ಬೇಜಾರಾಯ್ತು ವಾಪಸ್ ಬಂದೆ ಅಂದೇ ಅದಕ್ಕೆ ನೀನು ಹೇಳ್ದೆ "ಹಾಕಿರೋ ಚಪ್ಪಲಿ ಸವಿಬೇಕು ಕಣೋ"  ಕಷ್ಟ ಪಡ್ಡೆ ಏನು ಸಿಗೋಲ್ಲ ಅಂತ, ಆ ಮಾತು ನಿಜ ಅನಿಸುತ್ತೆ ಇವತ್ತು ಇದೇ ಬೆಂಗಳೂರ್ ನಲ್ಲಿ ನಾನು ಕೆಲಸ ಮಾಡ್ತಾ ಇದೀನಿ ಒಳ್ಳೆ ಕೆಲಸ ಕೂಡ ಸಿಕ್ಕಿದೆ..! ಆದರೆ "ನನ್ನಿಂದ ನಿನಗೆ ರಿಪ್ಲೈ ಮಾತ್ರ ಸಿಕ್ಕಿಲ್ಲ......ಸಿಗೋಲ್ಲ". ಒಂದಲ್ಲ ಒಂದು ದಿನ ನೀ ನನ್ನ ಬ್ಲಾಗ್ ನೋಡ್ತೀಯ ಆಕಸ್ಮಾತ್ ನೋಡಿದ್ರೆ ಈ ಕೆಳಗಿನ ಕವನ ಓದಿ ಸರಿಯಾಗಿ ಅರ್ಥ ಮಾಡ್ಕೋ...! ನಿನಗೆ ಬೇಕಾದ ರಿಪ್ಲೈ ಇದ್ರಲ್ಲಿ ಇದೆ .



"ನಗುತಲಿರು ನಗುವಿನ ಸುಮವೇ 

ನಗಿಸೋನ ನಗುವಿನ ಜೊತೆಗೆ 
ಕರೆದಿಕೋ ಮೋಹಕ ಒಲವೇ  
ನೀನಿರುವ ಮನಸಿನ ಮನೆಗೆ
ನಾನಂತೂ ನಿನಗೆ ಮರೀಚಿಕೆ....!"

(ಇಲ್ಲಿನ ಎಲ್ಲ ಭಾವಚಿತ್ರಗಳ ಕೃಪೆ : ಅಂತರಜಾಲ)

"ಮರೆಯದಿರು ಗೆಳತಿ 
ನನ್ನ ಸವಿ ಸ್ನೇಹವ 
ಮರೆಯಲಾರೆ ಎಂದು 
ನಿನ್ನ ಜೊತೆ ಕಳೆದ ಅಮೂಲ್ಯ ಕ್ಷಣವ....! 

ಹ್ಮಂ ಹ್ಮಂ ಹ್ಮಂ ಹೀಗೆ ಹೇಳ್ತಾ ಹೋದ್ರೆ ಈ ಬರವಣೆಗೆ ಮುಗಿಯೋದಿಲ್ಲ ಇದನ್ನ ಇಲ್ಲಿಗೆ ಸ್ಟಾಪ್ ಮಾಡೋಣ ಡಿಯರ್ ಫ್ರೆಂಡ್ಸ್ ಕೊನೆದಾಗಿ ನಾನು ಏನ್ ಹೇಳೋಕೆ ಇಷ್ಟ ಪಡ್ತೀನಿ ಅಂದ್ರೆ "ಸ್ನೇಹ ಎಂದಿಗೂ ಸ್ನೇಹವಾಗಿರ್ಲಿ ಅದನ್ನ ಈ ಪ್ರೀತಿ ಪ್ರೇಮ ಅಂತ ಬದಲಾಯಿಸೋ ಪ್ರಯತ್ನ ಮಾಡ್ಬೇಡಿ....! ಪ್ರೀತಿ ಹುಟ್ಟೋಕೆ ಸ್ನೇಹ ಸಲುಗೆಗಳು ಒಂದು ರೀತಿಯಲ್ಲಿ ಕಾರಣ ಆದ್ರೆ ಎಲ್ಲಾ ಸ್ನೇಹ ನಿಮ್ಮ ಬಾಳ ಸಂಗಾತಿಯಾಗೋಲ್ಲ" 

"ನಿಮ್ಮ ಫ್ರೆಂಡ್ ಜೊತೆ ನೀವು ನಿಮ್ಮ ಎಲ್ಲಾ ರೀತಿಯ ಫೀಲಿಂಗ್ ನ ಹಚ್ಚ್ಕೋ ಬಹುದು ಬಟ್ ಅದೇ ಫ್ರೆಂಡ್ ನಿಮ್ಮ  ಜೀವನದಲ್ಲಿ ಸಂಗಾತಿ ಆಗಿ ಬಂದಾಗ  ನಿಮ್ಮೆಲ್ಲ ಫೀಲಿಗ್ ಗಳನ್ನ ಅವರ ಜೊತೆ ಶೇರ್ ಮಾಡಿಕೊಳ್ಳೋಕೆ ಆಗೋಲ್ಲ"

"ಅದೆಷ್ಟು ಜನರ ಲೈಫ್ ನಲ್ಲಿ ಇದೇ ಥರ ಎಷ್ಟೋ ಲವ್ ಅನ್ನೋ ಆಕರ್ಷಣೆ ಬಂದು ಹೋಗಿರುತ್ತೆ, ಆ ಏಜ್ ಅನ್ನೋದೇ ಹಾಗೆ ಕಣ್ಣಿಗೆ ಕಾಣೋದೆಲ್ಲ ಬೇಕು ಅನ್ನೋ ಭಾವನೆ, ಅದು ನನಗೆ ಬೇಕು ಅನ್ನೋ ಯಾತನೆ"

ಲವ್ ಅನ್ನೋ ಪದದ ಆಕರ್ಷಣೆ ಮತ್ತು ಅದ್ರಿಂದ ಉಂಟಾಗೋ ನವಿರಾದ ಸಂಚಲನ ನನ್ನಲ್ಲಿ ಹುಟ್ಟಿದ್ದೇ ಈ ಹುಡುಗಿಯ ಪ್ರೊಪೋಸ್ ಯಿಂದ ಒಂದು ಮಾತಲ್ಲಿ ಹೇಳ್ಬೇಕು ಅಂದ್ರೆ ನನ್ನ ಪ್ರೊಪೋಸ್ ಮಾಡಿದ ಮೊಟ್ಟ ಮೊದಲ ಮರೆಯದ ಗೆಳತಿ ಈ "ಸಂಜೆ ಮಳೆಯ ಹುಡುಗಿ" 

ಆಯ್ಯೋ ಬಿಡಿ ನನ್ನ ಪ್ರೊಪೋಸ್ ಗಳ ಬಗ್ಗೆ ಹೇಳ್ತಾ ಹೋದ್ರೆ ಮುಂದೆ ಓದೋಕೆ ನಿಮ್ಮ ಕಣ್ಣು ಇರಲ್ಲ ಕೇಳೋಕೆ ಕಿವಿ ಇರೋಲ್ಲ ;-)

ನಾನು ಯಾವದೇ ಲೇಖನ ಬರೆದರು ಕೊನೆಯದಾಗಿ ನನ್ನ ಕಾಡೋದು ಹೇಗೆ ಈ ಲೇಖನನ ಸಂಹಾರ (ಮುಗಿಸಬೇಕು) ಮಾಡ್ಬೇಕು ಅಂತ ಕಷ್ಟ ಆದ್ರು ಮಾಡಲೇ ಬೇಕಲ್ವ ಅದಕ್ಕೆ ಕೊನೆದಾಗಿ ಎರಡು ಲೈನ್ ಗಳಲ್ಲಿ ಈ ಲೇಖನಕ್ಕೆ ನಾಂದಿ ಹೇಳ್ತೀನಿ ಸರಿಯಾಗಿ ಓದಿ ತಿಳ್ಕೊಳ್ಳಿ..! 

"ಅಂದು ಇಂದು ಎಂದೂ ಮಂಜು ಎಂದೆಂದೂ"
ಸಿಂಗಲ್

SINGLE

ಸಿಂಗಲ್

SINGLE

ಸಿಂಗಲ್

SINGLE

ಸಿಂಗಲ್

SINGLE

ಬೇಡ ಬೇಡ ನಂಬಬೇಡಿ 

Now I am single 

But

Ready to mingle

"ಮತ್ತೆ ಸಿಗ್ತೀನಿ ರೀ ರೈಲ್ ಹುಡುಗಿ ಜೊತೆ  ಈಗಲೇ ಎಲ್ಲಾ ಟಿಕೆಟ್ ಬುಕ್ ಮಾಡಿ"


   ~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837