ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Showing posts with label ನೀ ಬರುವ ದಾರಿಯಲಿ. Show all posts
Showing posts with label ನೀ ಬರುವ ದಾರಿಯಲಿ. Show all posts

Monday, 19 November 2012

ವಿಜಯ ಕರ್ನಾಟಕದಲ್ಲೊಂದು ಲೇಖನ....





ದಿಹರಿಯದ ಬಡಪಾಯಿ ಮನಸ್ಸಿನ ಕಣ್ಣುಗಳಿಗೆ ಕಾಣೋದೆಲ್ಲ ಸುಂದರವೇ,ಆ ವಯಸ್ಸಿನ ಮನಸುಗಳೇ ಹಾಗೆ ಏನೇ ಮಾಡಿದರು ಎಷ್ಟೇ ತಡೆ ಹಿಡಿದರು ಒಲವ ಬಳ್ಳಿಯ ಎಳೆಗಳ ಮೇಲೆ ಇಬ್ಬನಿಯಂತೆ ತಬ್ಬಲು ಹಾತೊರಿಯುತ್ತವೆ, ಎಲ್ಲೊ ಒಂದು ಕಡೆ ಅವಳ /ಅವನ ಅತಿಯಾದ ಕ್ಲೊಸೆನೆಸ್, ಮಾತು, ಮಾತಿನ ಶೈಲಿ, ನಗು, ಸ್ಪರ್ಶ, ಉಡುಗೆ, ತುಂಟತನ ಇವುಗಳಿಂದ ಮನಸ್ಸು ಆಕರ್ಷಣೆಗೆ ಒಳಗಾಗುತ್ತದೆ ಇಂತಹ ಸಣ್ಣ ಸಣ್ಣ ಕ್ರಷ್ ಗಳನ್ನ ನಾವು ಸರಿಯಾಗಿ ಅರ್ಥೈಸಿಕೊಳ್ಳದೆ ಮುಂದೆ ಒಂದು ದಿನ ಐ  ಆಮ್  ಇನ್  ಲವ್ ಎಂದು ನಿರ್ಧರಿಸಿ ಬಿಡುತ್ತೇವೆ.. ಇಂತಹ ಎಷ್ಟೋ ಕ್ರಷ್ ಗಳು ನಮ್ಮಲ್ಲಿ ಮೂಡಿ ಹೇಳ ಹೆಸರಿಲ್ಲದೆ ಹೋಗಿರುತ್ತವೆ ಇಲ್ಲಿ ಎಲ್ಲಿಯೂ ನಮಗೆ ನಿಜವಾದ ಪ್ರೀತಿ ಸಿಗುವುದಿಲ್ಲ ಅದು ಕೇವಲ ಆಕರ್ಷಣೆಯ ಸೆಳೆತ ಅಷ್ಟೇ.. ಹಾಗಾದ್ರೆ ನಿಜವಾದ ಪ್ರೀತಿ ಅಂತ ಗೊತ್ತಾಗುವುದು ಹೇಗೆ ಇದಕ್ಕೆ ಉತ್ತರ ಹುಡುಕುವುದು ಕಷ್ಟಸಾದ್ಯ...

ನಿಜವಾದ ಪ್ರೀತಿ ತನ್ನ ಛಾಯೆಯನ್ನ ಹಾಗೆ ಉಳಿಸಿರುತ್ತದೆ ಅದನ್ನ ಸೂಕ್ಷ್ಮವಾಗಿ  ಗಮನಿಸುವ ಮನಸು ಬೇಕು, ಒಮ್ಮೆ ಈ ಕೆಳಗಿನ ಅಂಶಗಳನ್ನು ಓದಿ

ನಿಜವಾದ ಪ್ರೀತಿಯೆಂದರೆ ಅವಳ/ಅವನ ಮೇಲೆ ಅವನು/ಅವಳು ಇಟ್ಟಿರುವ ಅಪಾರವಾದ ನಂಬಿಕೆ

ನಿಜವಾದ ಪ್ರೀತಿಯಲ್ಲಿ ಮೋಹಕ್ಕಿಂತ ಆಸರೆಯ ನೆರಳು ಹೆಚ್ಚಾಗಿರುತ್ತದೆ

ನಿಜವಾದ ಪ್ರೀತಿಯಲ್ಲಿ ಅಧಿಕಾರದ ಬದಲು ಪ್ರಾಮಾಣಿಕತೆ ಇರುತ್ತದೆ.

ನೀನಿಲ್ಲದೆ ಬದುಕಲಾರೆ ಅನ್ನೋವುದಕ್ಕಿಂತ ಬದುಕಿದರೆ ನಿನ್ನೊಂದಿಗೆ ಮಾತ್ರ ಬದುಕುವೆ ಅನ್ನೋ ಭಾವಲಹರಿಯೇ ನಿಜವಾದ ಪ್ರೀತಿ.

ಅತಿಯಾದ ವ್ಯಾಮೋಹಕ್ಕಿಂತ ಮುಕ್ತವಾದ ಸ್ವಾತಂತ್ರವೇ ನಿಜವಾದ ಪ್ರೀತಿ.

 ಆಡುವ ಮಾತಿಗಿಂತ ನೀವು ತೆಗೆದುಕೊಳ್ಳುವ ಜವಾಬ್ದಾರಿ ಕೆಲಸಗಳಲ್ಲಿ ನಿಮ್ಮ ನಿಜ ಪ್ರೀತಿ ಕಾಣುತ್ತದೆ.

ನಿಜವಾದ ಪ್ರೀತಿ ನಿಮ್ಮನ್ನು ಯಾವುದರಿಂದಲೂ ಬಂದಿಸುವುದಿಲ್ಲ.

ಎಲ್ಲದಕ್ಕೂ ಮಿಗಿಲಾಗಿ ಪೋಸೆಸಿವ್ ನೆಸ್ ನಿಜ ಪ್ರೀತಿಯಲ್ಲಿ ಇರುವುದಿಲ್ಲ

ನಿಮ್ಮಲ್ಲಿ ಯಾವುದೇ ಬದಲಾವಣೆಯನ್ನು ಅಪೇಕ್ಷಿಸದೆ ಪ್ರೀತಿಸುವುದು ನಿಜ ಪ್ರೀತಿ.

ಕಾಮುಕತೆಯಿಲ್ಲದೆ ಮಮತೆ ವಾತ್ಸಲ್ಯ ತೋರುವ ಪ್ರೀತಿ ನಿಜವಾದ ಪ್ರೀತಿ.

ಹೀಗೆ ನೀವೇ ಹುಡುಕುತ್ತ ಹೋಗಿ ನಿಮಗೆ ಆಗಿ ಹೋಗಿರುವ ಕ್ರಷ್ ಗಳಲ್ಲಿ  ನಿಜವಾದ ಪ್ರತಿ ಯಾವ್ದು ಅಂತ ಗೊತ್ತಾಗುತ್ತದೆ...



?ಮಂಜು.ಎಂ.ದೊಡ್ಡಮನಿ.

          ದಾವಣಗೆರೆ


Sunday, 30 September 2012

ಆತ ಚಂದಿರ ಈಕೆ ನೈದಿಲೆ...!

ಕಾಲೇಜ್ ಡೈರಿ ಮಾಸ ಪತ್ರಿಕೆಯಲ್ಲಿ ಪ್ರಕಟಿತ ನನ್ನ ಲೇಖನ 


ಕೆ ಅಪ್ಪಟ ಮಲೆನಾಡಿನ ಹುಡುಗಿ, ಕಷ್ಟಗಳಲ್ಲೇ ತನ್ನ ಜೀವನವನ್ನ ಕಟ್ಟಿಕೊಂಡವಳು ತಾಯಿಯ ಮಡಿಲಲ್ಲಿ ತಂದೆ ಇಲ್ಲದೆ ಬೆಳೆದ ಅವಳು ದಿನವೂ ಕಟ್ಟುತ್ತಿದ್ದ ಕನಸುಗಳಿಗೆ ಲೆಕ್ಕವಿರಲಿಲ್ಲ.. ನಿಜ ಕನಸು ಕಟ್ಟುವ ವಯಸ್ಸೇ ಅದು.. ಕಾಲೇಜು ದಿನಗಳಲ್ಲಿ ಅವನ ಜೊತೆ ಕಟ್ಟಿದ ಕನಸುಗಳು ಇನ್ನೂ ಹಾಗೆ ಉಳಿದಿವೆ,  ಹೌದು ಅವನೆಂದರೆ ಅವನೇ ಇವಳ ಕನಸುಗಳ ನನಸಾಗಿಸೋ ಭರವಸೆ ಮೂಡಿಸಿದ ಬೇವಿನಂತ ಬದುಕಿನ ದಾರಿಯಲ್ಲಿ ಅಪರೂಪವೆಂಬಂತೆ  ಬೆಲ್ಲದ ಕಣವಾಗಿ ಸಿಕ್ಕ ಅವಳ ಭವಿಷ್ಯದ ನಾಯಕ.. ಹ್ಮಂ ಅವನೆಂದರೆ ಅವನೇ ಅವಳ ಒಂಟಿ ಬದುಕ ದೋಣಿಯ ನಾವಿಕ, 

ಮಲೆನಾಡಿನ ಸುಂದರ ದಿನಗಳು ಜೊತೆಗೆ ಚಿಟಪಟ ಮಳೆ,  ಅವನ ಪರಿಚಯ ಆಗಿದ್ದೆ ಅವಳಿಗೆ ಅಂತಹ ಚಿಟಪಟ ಮಳೆಯಲ್ಲಿ, ಕಾಲೇಜು ಮುಗಿಸಿಕೊಂಡು ಬಸ್ ಸ್ಟಾಪ್ ಗೆ ಮಳೆಯಲ್ಲಿ ತೊಯ್ದುಕೊಂಡು ಹೋಗುತ್ತಿದ್ದವವನ ಇವಳಾಗಿಗೆ ಮಾತನಾಡಿಸಿ ಒಂದೇ ಛತ್ರಿ ಯಲ್ಲಿ ಇಬ್ಬರು ನಡೆದ ದಿನದಿಂದ ಮುಂದೆ ಕೈ ಕೈ ಹಿಡಿದು ಭುಜಕ್ಕೆ ಭುಜ ತಾಗಿಸಿಕೊಂಡು ನಡೆದ ದಿನಗಳ ಲೆಕ್ಕವಿಲ್ಲ,  ಕಾಲೇಜಿಗೂ ಬಸ್ ಸ್ಟಾಪ್ ಗೂ ಹತ್ತಿರವಲ್ಲದ ಹತ್ತಿರದ ಮದ್ಯದಲ್ಲಿ  ಒಂದು ಹಳ್ಳಿಮರ ಅದಕ್ಕೆ ಸುತ್ತಲು ಕೂತು ಹರಟಲೆಂದೇ ಕಟ್ಟಿರುವ ಕಲ್ಲಿನ ಕಟ್ಟೆ, ಅಲ್ಲಿ ಪ್ರತಿ ದಿನ ಕಾಲೇಜು ಮುಗಿದ ಕೂಡಲೇ ಅವಳು ಅವನಿಗಾಗಿ ಕೂರುತ್ತಾಳೆ, ತುಸು ಹೊತ್ತು ಅವನೊಂದಿಗೆ ಚಲ್ಲಾಡಲು ಹೇಳಿ ಮಾಡಿಸಿದ ಸೂಕ್ತ ಜಾಗವೆಂದರೆ ಆ ಹಳ್ಳಿಮರದ ಕಟ್ಟೆ , ಅವನು ಕೂಡ ತಪ್ಪದೆ ಬರುತ್ತಿದ್ದ,  ಎಷ್ಟು ಧನ ಕರ ಕಾರು ಬಸ್ಸು ಸ್ನೇಹಿತರು ಊರಿನ ಜನರು ಅದೇ ದಾರಿಯಲ್ಲೇ ಹಾದು ಹೋದರು ಅದ್ಯಾವುದರ ಚಿಂತೆಯ ಗೋಜು ಇವರಿಗಿರಲಿಲ್ಲ, ಪವಿತ್ರ ಪ್ರೇಮದ ಗುಂಗಿನಲಿ ಮುಳುಗಿದ ಯಾರಿಗಾದರು ಅಷ್ಟೇ ಅಲ್ವ..!? ಜಗತ್ತೇ ಕಣ್ ಮುಚ್ಚಿರುತ್ತದೆ ಎಂಬ ಭಾವ ಅವರಲ್ಲಿ... ಇವರಿಬ್ಬರ ಪ್ರೀತಿ ಇಡಿ ಊರಿಗೆ ಗೊತ್ತಿತ್ತು ಮನೆಯವರಿಂದ ಯಾವುದೇ Restriction ಇರಲಿಲ್ಲ ಬದಲಿಗೆ ಮನೆಯವರೇ ಇಬ್ಬರ ಸಂಭಂದ ಒಪ್ಪಿ ಇಬ್ಬರ ಓದಿನ ನಂತರ ಮದುವೆ ಮಾಡಲು ತೀರ್ಮಾನಿಸಿದ್ದರು... ಅದಕ್ಕಾಗಿ ಅವಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಳು ಅಂದುಕೊಂಡಂತೆ ತಮ್ಮ ಓದಿನ ಕೊನೆಯದಿನಗಳು ಬಂದವು.. 



ವಿಧಿಯ ಪಗಡೆಯಾಟ ಶುರುವಾಗಿದ್ದೆ ಅಲ್ಲಿಂದ...
ಮನೆಯವರೆಲ್ಲ ಮದುವೆಯ ಬಗ್ಗೆ ಪ್ರಸ್ತಾಪಿಸಿದರು ಆದರೆ ಇವನು ಸಮ್ಮತಿಸಲಿಲ್ಲ, ಈಗತಾನೇ ಓದು ಮುಗಿದಿದೆ ಎಲ್ಲಾದರು ಒಂದು ಕೆಲಸ ಸಿಗುವವರೆಗೂ ಮದುವೆ ಬೇಡ, ದುಡಿಮೆ ಇಲ್ಲದೆ ಮದುವೆ ಮಾಡಿಕೊಂಡು ನಾಳೆ ಜೀವನ ಕಷ್ಟವಾದೀತು ತಂದೆ ಮಾಡಿದ ಆಸ್ತಿ ಕೂತು ತಿಂದರು ಕರಗೋದಿಲ್ಲ ಆದರು ಗಂಡಿಗೊಂದು ಕೆಲಸ ಅಂತ ಬೇಕಲ್ಲ ಅದಕ್ಕಾಗಿಯಾದರು ತಾನು ದುಡಿಯ ಬೇಕು ಎಂದೂ ಒಂದೇ  ಹಠ ಹಿಡಿದು ಕೂತ, ಅವಳ ಹೂ ಕನಸುಗಳ ಮೇಲೆ ದೊಡ್ಡ ಕಲ್ಲೇ ಬಿದ್ದಂತಾಯಿತು ಆದರು ನಿರಾಶೆಗೆ ಒಳಗಾಗದೆ ಅವನ ಮಾತಲ್ಲಿ ಸತ್ವವಿದೆ ಅವನ ನಿರ್ಧಾರ ಎಂದಿಗೂ ಸರಿಯಾಗಿರುತ್ತದೆ ಎಂದೂ ಅವಳು ತನ್ನ ಕನಸುಗಳನ್ನ ಯಾರಿಗೂ ಕಾಣದೆ ತನ್ನ ಕಣ್ಣಂಚಿನ ಹನಿಗಳಲ್ಲೇ ಬಚ್ಚಿಟ್ಟಳು. ದೊಡ್ಡವರೆಲ್ಲ ಅವನ ಮಾತಿಗೆ ತಲೆಯಾಡಿಸಿದರು. ಕೆಲವು ದಿನಗಳು ಹಾಗೆ ಕಳೆಯಿತು ಅವನ ಆಸೆಯಂತೆಯೇ ಬೆಂಗಳೂರಿನಿಂದ ಸ್ನೇಹಿತನ ಮೂಲಕ ಕೆಲಸದ ಆಹ್ವಾನ ಬಂತು ತಡಮಾಡದೆ ಅವನು ತನ್ನ ಲಗೇಜಿನೊಂದಿಗೆ ಬೆಂಗಳೂರಿಗೆ ಹೊಂಟು ನಿಂತು ಮನೆಯವರಿಗೆಲ್ಲ ನಮಸ್ಕರಿಸಿದ ಮನೆಯಿಂದ ಹೊರ ಹೋರಟು ಅವಳ ಮನೆ ಕಡೆ ಬಂದ ಅವಳು ಕಾಣಲಿಲ್ಲ ಭಾವಿ ಅತ್ತೆ-ಮಾವರಿಗೆ ನಮಸ್ಕರಿಸಿ ಅಲ್ಲಿಂದ ಸೀದಾ ಹಳ್ಳಿಮರದ ಕಟ್ಟೆಗೆ ಹೋದ ಅವನ ಊಹೇ  ಸರಿಯಾಗಿಯೇ ಇತ್ತು ಅವನಗಾಗಿ ಅವಳು ಅಲ್ಲೇ ಕಾಯುತ್ತ ಕೂತಿದ್ದಳು ಕಣ್ಣಲಿ ಪ್ರೇಮಗಂಗೆ ತುಂಬಿಕೊಂಡು.. ಅಂದು ಅವಳನ್ನ ಸಮಾಧಾನಿಸಿ ಬೇಗನೆ ಬಂದು ಬಿಡುವೆ ಚಿಂತಿಸ ಬೇಡ ಬಂದು ನಿನ್ನನ್ನು ಕರೆದುಕೊಂಡು ಹೋಗುವೆ ಎಂದೂ ಹೋದವನು ಮತ್ತೆ ಬರಲೇ ಇಲ್ಲಾ...  ದುರದೃಷ್ಟ ಅಂದು ಬೆಂಗಳೂರಿಗೆ ಹೋರಾಟ ಬಸ್ ಬೆಂಗಳೂರನ್ನು ತಲುಪಲೇ ಇಲ್ಲಾ ಡ್ರೈವೆರ್ ನ ನಿರ್ಲಕ್ಷದಿಂದ ಬಸ್ ಚಲನೆ ತಪ್ಪಿ ಕಾಣಲಾರದಷ್ಟು ಪ್ರಪಾತಕ್ಕೆ ಉರಳಿ ಬಿತ್ತು.. 

ಅತ್ತು ಅತ್ತು ಕಣ್ಣಿರು ಬತ್ತಿ ಹೋಗಿವೆ, ಊಟ ನಿದ್ದೆ ಎಲ್ಲಾ ಬಿಟ್ಟು ಗುಡಿಯೋಳಗಿನ ದೇವತೆಯಂತೆ ಇವಳು ಸುಮ್ಮನೆ ಕಾಯುತ್ತಾ ಕೂತ್ತಿದ್ದಾಳೆ ಅದೇ ಹಳ್ಳಿ ಮರದ ಕೆಳಗೆ ಅವನು ಬಂದೆ ಬರುತ್ತಾನೆಂದು ನಂಬಿ, ಅವಳ ನಂಬಿಕೆ ಹುಸಿ ಎಂಬುದು ತಿಳಿದ ವಿಷಯ ಆದರು ಕಾಯುತ್ತೇನೆಂದು ಕೂತ ಮನಸ್ಸಿಗೆ ಮತ್ತೊಂದು ಮನಸ್ಸಿನ ಅಧ್ಯಾಯದ ಅವಶ್ಯಕತೆ ಇದೇ ಅವನಿನ್ನೂ ಕೇವಲ ನೆನಪು ಅವಳ ಕಾಯುವಿಕೆ ನಿಲ್ಲಬೇಕು ಹೊಸ ಜೀವನದ ಅಧ್ಯಾಯ ಶುರುವಾಗಬೇಕು ಅಲ್ಲಿಯವರೆಗೂ ಅವಳ ಕಾಯುವಿಕೆ ನಿಲ್ಲದು ಆ ಕಾಯುವಿಕೆ ನಿಂತರು ಅವನ ನೆನಪು ಅಳಿಸದು ...  

-  ಇಲ್ಲಿ ಆತ ಚಂದಿರ ಈಕೆ ನೈದಿಲೆ, ಇವಳು ದಿನನಿತ್ಯ ಅವನಿಗಾಗಿ ಕಾಯುತ್ತಾಳೆ ಅವನು ತಪ್ಪದೆ ಬರುತ್ತಾನೆ ಒಬ್ಬರನೊಬ್ಬರು ಹೇಳಲಾರದಷ್ಟು ಪ್ರೀತಿಸುತ್ತಾರೆ ಒಂದಾಗುವ ಆಸೆಯೇಲ್ಲೇ ಕನಸು ಕಾಣುತ್ತಾರೆ ಆದರೆ ತಮ್ಮ ನಡುವೆ ಹೇಳದೆ ಕೇಳದೆ ಬರುವ ಅಮವಾಸೆಯನ್ನೇಕೆ ಮರೆಯುತ್ತಾರೆ..?  ಪ್ರೀತಿಸುವ ಹೃದಯಗಳಿಗೆ ಕಾಯುವಿಕೆಯೇನು ದೊಡ್ಡ ಮಾತಲ್ಲ... ಅದೊಂದು ಮದ್ದಿಲ್ಲದ ಕಾಯಿಲೆ..  ಆದರೆ ಎಲ್ಲಾ ಕಾಯುವಿಕೆಗೂ ಅರ್ಥವಿರಬೇಕಲ್ಲ..!? ನ್ಯಾಯ ಸಿಗಬೇಕಲ್ಲ..!? ಕೆಲವೊಮ್ಮೆ ಆ ದೇವರೇ ಕೆಲವರ ಪಾಲಿಗೆ ವೈರಿಯಾಗಿ ಎದುರು ನಿಲ್ಲುತ್ತಾನೆ.. ಪ್ರವಾಹದಲ್ಲಿ ಅಂಬಿಗನನ್ನೇ ನಂಬಿ ಕೊಂಡಾಗ ಅವನು ಕೈ ಕೊಟ್ಟರೆ ಕೊನೆಯದಾಗಿ ಕೂತ ದೋಣಿಯ ಮೇಲಾದರೂ ನಂಬಿಕೆ ಇರುತ್ತದೆ ಮುಳುಗದಂತೆ ತೇಲುಸುತ್ತದೆ ಎಂದೂ,  ಆ ದೋಣೆ ಕೂಡ ಒಂದು ದೊಡ್ಡ ಅಲೆಗೆ ಬುಡಮೇಲಾದರೆ ನಂಬಿಕೆ ಇನ್ನೆಲ್ಲಿ !?  ಈಜು ಬಂದರೆ ಅಲೆಗಳನ್ನು ಎದುರಿಸಿ ಹೇಗೋ ಉಳಿದು ಬರಬಹುದು ಆದರೆ ಸಾವೆಂಬ ಸಾವೇ ಬೆನ್ನೇರಿ ಕೂತು ಬದುಕು ನರವೇ ನೋಡೋಣ ಎಂದೂ ಸುಳಿಗೆ ಸಿಲುಕಿಸಿ ಸವಾಲು ಎಸೆದರೆ ಬದುಕುವ ಮಾತೆಲ್ಲಿ..!? 


- ದೊಡ್ಡಮನಿ.ಎಂ.ಮಂಜುನಾಥ

ದಾವಣಗೆರೆ... 

Thursday, 2 August 2012

ಅವಳು ಅವನು ಮತ್ತೆ ನಾವು...!


ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish ರವರಿಗೆ ಶುಭವಾಗಲಿ....




ಅವಳು ಅವನು ಮತ್ತೆ ನಾವು...!

-   ತುಳಸಿ ಕಟ್ಟೆಯ ಮದ್ಯೆ ಹಚ್ಚಿದ ನಂದಾ ದೀಪದಂತೆ ಅವಳ ಸಂಸಾರ. ಬದುಕೆಂದರೆ ಅವಳಿಗೆ ಅವನು ಅವನಿಗೆ ಇವಳು ಅಷ್ಟೇ... ಲೋಕದ ಯಾವ ಶಕ್ತಿಯು ಅವರನ್ನು ಬೇರ್ಪಡಿಸಲಾರದಂತ ನಿಷ್ಕಲ್ಮಶ ಪ್ರೇಮ ಅವರದು,  ಮನೆಯವರ ವಿರೋದದಿಂದ ದೇವಸ್ಥಾನದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಆದ ಅವಳ ಮದುವೆಗೆ ಇನ್ನೂ ವರ್ಷ ಕೂಡ ತುಂಬಿಲ್ಲ, ಬಾಡಿಗೆ ಮನೆಯೊಂದರ ಹೊಸ್ತಿಲ ಮೇಲೆ ತುಂಬಿಟ್ಟ ಅಕ್ಕಿಯ ಸೇರನ್ನ  ಬಲಗಾಲಲ್ಲಿ ಒದ್ದು  ದೇವರ ಕೋಣೆಯಲ್ಲಿ ದೀಪ ಹಚ್ಚಿದ ನೆನಪು ಇನ್ನೂ ಮಾಸಿಲ್ಲ, ತಾನು ಕಳೆದುಕೊಂಡ ಅಣ್ಣ ತಂಗಿ ಅಪ್ಪ ಅಮ್ಮ ಎಲ್ಲಾ ಪ್ರೀತಿಯನ್ನು ಅವನಲಿ ಕಂಡುಕೊಂಡಿದ್ದಾಳೆ , ಆಗಲೇ ಆ ಸಣ್ಣ ಮನೆಯಲಿ ತೊಟ್ಟಿಲು ತೂಗಲು ಸಿದ್ದಳಾಗಿ ನೆಮ್ಮದಿಯ ತೇರು ಎಳೆಯಲು ತಯಾರಾಗಿ ನಿಂತಿದ್ದಾಳೆ, ಅವನ ಜೊತೆ ಕಟ್ಟಿದ ಕನಸುಗಳನ್ನ ರಾಶಿ ಹಾಕಿ ಲೆಕ್ಕ ಹಾಕುತ್ತ ಸಂಜೆ ಅವನು ತರುವ ಮಲ್ಲಿಗೆಗಾಗಿ ಕಾಯುತ್ತಿದ್ದಾಳೆ..


ಸಂಜೆಯಾಗಿದೆ ಸೂರ್ಯ ಮುಳುಗುತ್ತಿದ್ದಾನೆ ಅವಳ ಕಾಯುವಿಕೆ ನಿಂತಿದೆ ಜೊತೆಗೆ ಎದೆ ಬಡಿತ ಹೆಚ್ಚಿದೆ ಅದೋ ಬೆಳ್ಳಿ ತೇರಿನಿಂದ ಅವನನ್ನು ಬಿಳಿ ವಸ್ತ್ರದಾರಿಗಳ್ಯಾರೋ ಕರೆದುಕೊಂಡು ಬರುತ್ತಿದ್ದರೆ ಬಂದವರು ಮನೆಯ ಒಳಗೆ ಮಲಗಿಸಿ ಕೈ ಕಟ್ಟಿ ನಿಂತಿದ್ದರೆ.ಅವನ ಕೈಯಲ್ಲಿ ಹರಿದು ತುಂಡಾದ ಮಲ್ಲಿಗೆ ಹೂವಿನ ಮಾಲೆ ಇನ್ನೂ ಹಾಗೆ ಇದೇ, ಮೈ ಮೇಲೆ ಅಲ್ಲಲ್ಲಿ ಕೆಂಪು ಬಣ್ಣದ  ಕಲೆಗಳು ಎದ್ದು ಕಾಣುತ್ತಿವೆ. ಅವನು ಒಂದು ಮಾತನಾಡದೆ ಶವಾಸನದಲ್ಲಿ ನಿರತನಾಗಿದ್ದಾನೆ, ಕೆಲವು ಪರಿಚಿತರು ಅವನ ಎದೆಯ ಮೇಲೆ ಹೂ ಮಾಲೆಗಳನ್ನು ಇಟ್ಟು ಕಣ್ಣೊರೆಸಿಕೊಂಡು ಹಿಂದೇ ಸರಿಯುತ್ತಿದ್ದಾರೆ, ಇವಳಿಗೆ ದಿಕ್ಕು ತೋಚದಾಗಿದೆ, ಕಣ್ಣಲ್ಲಿ ಒಂದು ಹನಿ ನೀರಿಲ್ಲ ಅಸಲಿಗೆ ಇಲ್ಲಿ ನಡೆಯುತ್ತಿರುವುದು ವಾಸ್ತವವೋ ಕನಸೋ ಒಂದು ಅವಳಿಗೆ ತಿಳಿಯದೆ ನಿಂತಲ್ಲೇ ಕುಸಿಯುತ್ತಿದ್ದಾಳೆ. ಸಂತ್ವಾನ ಹೇಳುವಂತೆ ಕೆಲವು ಗೆಳತಿಯರ ಕೈಗಳು ಅವಳ ಭುಜವನ್ನು ಹಿಡಿದಿವೆ. ಅಲ್ಲಲ್ಲಿ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ ಅವಳಿಗೆ ಅವ್ಯಾವುದರ ಅರಿವಿಲ್ಲ, ಅವನ ಈ ಸಾವಿಗೆ ಇಲ್ಲಿ ಕಾರಣಬೇಕಿಲ್ಲ ಏಕೆಂದರೆ ಅವಳಪಾಲಿಗೆ ಜಗವೇ ನಿಂತಿದೆ. 

ಇಂದಿಗೆ ಇದೆಲ್ಲ ಗತಿಸಿ ಕೆಲವು ವರ್ಷಗಳೇ ಕಳೆದಿವೆ ಅವಳ ಜೊತೆ ಅವನಿಲ್ಲ ನಿಜ ಆದರೆ ಅವನು ಕೊಟ್ಟು ಬಿಟ್ಟು ಹೋದ ಅವನ ಪ್ರತಿರೂಪ ಮನೆಯ ತುಂಬಾ ಓಡಾಡುತ್ತ ಅವಳ ನೋವು ಮರೆಸಿದೆ. ಅವಳೀಗ ಅವಳಾಗಿಲ್ಲ  ಬದಲಿಗೆ ತನ್ನೆಲ್ಲ ದುಃಖವನ್ನು ಮರೆತು ನೆನಪುಗಳ ಹೊಂಡದಲಿ ಶುಭ್ರವಾಗಿ ಮೈದೆಳೆದು ಮತ್ತೆ ತಾವರೆಯಾಗಿ ಮೂಡಿದ್ದಾಳೆ. ತಾನಾಯಿತು ತನ್ನ ಮಗುವಾಯಿತು ಟಿವಿಯ ಮೇಲೆ ಇಟ್ಟ ಅವನ ನಗುತುಂಬಿದ ಚಿತ್ತಾರವಾಯಿತು ಇವುಗಳ ಜೊತೆ ಆಸ್ತಿಕತೆಯ ಬದಕು ಅವಳಿಗೆ ಶಾಂತಿಯನ್ನು ತಂದುಕೊಟ್ಟಿದೆ. ಈಗಾಕೆ ಆಶ್ರಮವೊಂದರಲ್ಲಿ  ಸೇವೆ ಮಾಡುತ್ತಿದ್ದಾಳೆ ಭಕ್ತಿ ಪಥದ ಬಗ್ಗೆ ಪ್ರತಿನಿತ್ಯ ನೂರಾರು ಜನರಿಗೆ ಪ್ರವಚನ ನೀಡುತ್ತಿದ್ದಾಳೆ, ಅವನು ಹೋದ ಎಂದೂ ಅವಳು ಕೊರಗಲಿಲ್ಲ ತನ್ನ ಮಗುವಿನ ಒಳ್ಳೆ ಭವಿಷ್ಯಕ್ಕೆ ದಾರಿಯಾಗುತ್ತಿದ್ದಾಳೆ ನೂರಾರು ನಿರಾಶ್ರಿತರಿಗೆ ಆಶ್ರಯ ನೀಡಿ ಅವರ ಕಷ್ಟ ಸುಖಗಳಲ್ಲಿ ಬಾಗಿಯಾಗುತ್ತಿದ್ದಾಳೆ,  ತನಗಾಗಿ ಅಲ್ಲಾ ತನ್ನ ಪ್ರೀತಿಸುವ ಮಗುವಿಗಾಗಿ ತನ್ನ ಪ್ರೀತಿಯಿಂದ ಸುತ್ತುವ ಆಶ್ರಮದ ಜನರಿಗಾಗಿ ಅವಳು ಶ್ರಮಿಸುತ್ತಿದ್ದಾಳೆ ಅವರಿಗಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡಿದ್ದಾಳೆ. 



- ಅವಳ ಈ ಕಥೆ ಕೇಳಿದರೆ ನಿಜ ಅನಿಸುತ್ತದಲ್ಲವ "ಈಗ ಇದದ್ದು ಕ್ಷಣಾರ್ಧದಲ್ಲಿ ಇರುವುದಿಲ್ಲ ಪ್ರೀತಿಸಿ ಆರಾಧಿಸಿ ಪೂಜಿಸೋ ಅಮೂಲ್ಯವಾದ ವಸ್ತು ಕೆಲವೊಮ್ಮೆ ನಮ್ಮಿಂದ ಹೇಳಲಾರದಷ್ಟು ದೂರ ಸಾಗುತ್ತದೆ, ಅದೆಷ್ಟೋ ಭಾವುಕ ಮನಸುಗಳ ಬಾಳಿನಲಿ ಈ ಮಾತು ನಿಜವಾಗಿರುತ್ತದೆ ಇದು ನಿಜ ಕೂಡ, ಜೀವನವೇ ಹೀಗೆ ಅಂದುಕೊಂಡಂತೆ ಏನು ಸಾಗಲು ಬಿಡುವುದಿಲ್ಲ, ಬೇಕೆಂದುಕೊಂಡದನ್ನು ಕೊಡುವುದಿಲ್ಲ ಊಹೆಗೂ ಮೀರಿದ ತಿರಿವುಗಳಿಗೆ ನಮ್ಮನ್ನು ತಂದು ನಿಲ್ಲಿಸಿ ತಾನು ಕೇಕೆ ಹಾಕಿ ಘಹಗಹಿಸಿ ನಗುತ್ತದೆ. ಯಾರನ್ನ ದೂರುವುದು ಯಾರಿಗೆ ಹಿಡಿಶಾಪ ಹಾಕುವುದು ಹೇಗೆ ಹಣೆಬರಹ ಬರೆದ ಬರಹಗಾರನನ್ನ ಹುಡುಕಿ ತಿದ್ದು ಎಂದೂ ಬೇಡುವುದು... ಇಂತಹ ಇಲ್ಲಸಲ್ಲದ ಪ್ರಶ್ನೆಗಳನ್ನ ಹುಟ್ಟುಹಾಕಿ ಉತ್ತರವಿಲ್ಲದೆ ಮುಳ್ಳುಗಳ ಹಾಸಿಗೆಯಮೇಲೆ ಮಲಗಿ ನೆಮ್ಮದಿ ಇರದೇ ಚಡಪಡಿಸುವಂತೆ ಮಾಡಿ ನಿರ್ಜೀವ ಸ್ಥಿತಿಗೆ ನಮ್ಮನ್ನು ತರುತ್ತದೆ ಈ ಜೀವನಬೆಂಬ ಜೀವನ ". ಹಾಗೆಂದು ಸುಮ್ಮನೆ ಕೂರಲು ಕೊರಗಲು ದುಃಖಕ್ಕೆ ಶರಣಾಗಲು ಆಗುತ್ತಾ..? ಬಂದದ್ದನ್ನು ಎದುರಿಸಿ ನಿಲ್ಲಬೇಕು..ಎಲ್ಲವನ್ನು ಮರೆಯಲಾಗದಿದ್ದರು ಕೆಲವೊಂದನ್ನು ಮರೆತು ಸಾಧನೆಯ ಹಾದಿ ಹಿಡಿಯಬೇಕು ವಿಧಿಯನ್ನ ಸೋಲಿಸಲಾಗದಿದ್ದರು ಬದುಕನ್ನ ಗೆಲ್ಲಬೇಕು, ದಿನ ಕಳೆದಂತೆ ನಮ್ಮ ಪಯಣದ ಕಡೆಯ ಕರೆ ಬರುತ್ತದೆ ಅಲ್ಲಿಯವರಿಗೂ ನಾವು ಅವಳಂತೆ ಬಾಳಬೇಕು..  

?ಮಂಜು.ಎಂ.ದೊಡ್ಡಮನಿ.

ದಾವಣಗೆರೆ

Wednesday, 22 December 2010

ಮರೀಚಿಕೆ...♥...♥...♥



ಮೊನ್ನೆ ಹಾವೇರಿಯಿಂದ ಪ್ರಭು ಅನ್ನೋರು ನನಗೆ ಕಾಲ್ ಮಾಡಿ ಕುಶಲೋಪರಿ ವಿಚಾರಿಸಿದರು ತುಂಬಾ ಚನ್ನಾಗಿ ಮಾತಾಡಿದ್ರು ಮಾತಾಡ್ತಾ ಮಾತಾಡ್ತಾ ಏನ್ ದೊಡ್ಡಮನಿ ನಿಮ್ಮ ಮುಂದಿನ ಲೇಖನ ಯಾವ್ದು ಅಂತ ಕೇಳಿದ್ರು ನಾನು ಹೇಳ್ದೆ ಇಲ್ಲಾ ಸರ್ ಸ್ವಲ್ಪ ಬ್ಯುಸಿ ಆಗಿದಿನಿ ಯಾವದೇ ಬ್ಲಾಗ್ ಕಡೆ ಮುಖಾ ಮಾಡಿಲ್ಲ ಟೈಮ್ ಸಿಕ್ಕಾಗ ಮಾಡ್ತೀನಿ ಅಂದೇ ಸರಿ ಸರ್ ಆದಷ್ಟು ಬೇಗ ಮುಖಾ ಮಾಡಿ ಅಂತ ಹೇಳಿದ್ರು ಆಯ್ತು ಅಂದೆ ಆಮೇಲೆ ಅವರೇ ವಿಷಯಕ್ಕೆ ಬಂದ್ರು,


ಮಂಜು ಈ ಬಿಕ್ಕಳಿಕೆ ಬಂದ್ರೆ ಯಾರೋ ನಮ್ಮನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತಾರೆ ಇದೆಲ್ಲ ನಿಜ ಅನಿಸುತ್ತಾ ನಿಮಗೆ ??????

ಪ್ರಭು ಕೇಳಿದ್ದು ಈ ಪ್ರಶ್ನೆ ಈಗ ಉತ್ತರ ಹೇಳ್ಬೇಕು ಅಲ್ವ ನಾನು ಅವರಿಗೆ ಫೋನ್ ಹೇಳಿದ ಥರ ಇಲ್ಲಿ ಹೇಳಿದ್ರೆ ಚನ್ನಾಗಿರೋಲ್ಲ ನಾನು ನನ್ನ ಬ್ಲಾಗ್ ಸ್ಟೈಲ್ ನಲ್ಲೆ ಹೇಳ್ತಾ ಹೋಗ್ತೀನಿ ಸ್ವಲ್ಪ ಕಷ್ಟ ಆದ್ರು ಇಷ್ಟಪಟ್ಟು ಓದಿ...♥...♥...♥

ಮರೀಚಿಕೆ ಈಗ ಪ್ರಾರಂಭ ...♥ ...♥ ...♥

ಹೇಮಂತ :- ಲೇ ಮಂಜು ನೀರು ಕುಡಿಯೋ ಬಿಕ್ಕಳಿಕೆ ನಿಲ್ಲುತ್ತೆ

ಉಮೇಶ :- ಲೇ.. ಹೇಮಾ ಅವ್ನು ಒಂದಲ್ಲ ಹತ್ತು ಲೋಟ ನೀರು ಕುಡಿದರು ಅವನಿಗೆ ಆ ಬಿಕ್ಕಳಿಕೆ ನಿಲ್ಲೋಲ್ಲ ಬಿಡೋ

ಹೇಮಂತ :- ಯಾಕೆ ನಿಲ್ಲಲ್ಲ ?

ಉಮೇಶ :- ಅದು ಅವನಿಗೆ ನನಗೆ ಮಾತ್ರ ಗೊತ್ತು...!

ಹೇಮಂತ :- ನನ್ನ ಮಗನೆ ತಲೇಲಿ ಹುಳ ಬಿಡಬೇಡ ಸರಿಯಾಗಿ ಹೇಳು ಅದೇನು

ಉಮೇಶ :- ನೀರು ಕುಡಿದರೆ ನಿಲ್ಲೋ ಬಿಕ್ಕಳಿಕೆ ಅಲ್ಲಾ ಅವನಿಗೆ ಬಂದಿರೋದು

ಹೇಮಂತ :- ನೀರು ಕುಡಿದನೆ ಬಿಕ್ಕಳಿಕೆ ಹೇಗೋ ನಿಲ್ಲುತ್ತೆ

ಉಮೇಶ :- ಅವನು ನೀರು ಕುಡಿದನೆ ಬಿಕ್ಕಳಿಕೆ ನುಲ್ಲುಸ್ತಾನೆ ಗೊತ್ತಾ

ಹೇಮಂತ :- ಒಹ್ ಹೌದ ಮತ್ತೆ ನಿಲ್ಲಿಸೋಕೆ ಹೇಳು ನೋಡೋಣ

ಉಮೇಶ :- ಸರಿ ನೋಡು ಈಗ, ಮಂಜಾ ಸಾಕು ನಿಲ್ಸೋ

(ಹ್ಹ ಹ್ಹ ಹ್ಹ ಅವಾಗ ನನ್ನ ಬಿಕ್ಕಳಿಕೆ ನಿಲ್ತು )

ಹೇಮಂತ :- ಲೋ ಹೇಗೋ ಸಾಧ್ಯ ಇದೆಲ್ಲ.

ನಾನು :- ಲೋ ಇಷ್ಟೇ ಕಣೋ ನಿನಗೆ ಬಿಕ್ಕಳಿಕೆ ಬಂದಾಗ ನಿನ್ನ ಯಾರೋ ನೆನಸಿಕೊಳ್ತಾ ಇರ್ತಾರೆ ಆಗ ಅವರನ್ನ ನೀನು ನೆನಪು ಮಾಡಿಕೊಂಡು ಅವರ ಹೆಸರು ಮನಸಲ್ಲೇ ಮೆಲಕು ಹಾಕು ಸಾಕು ಇಮಿಡಿಯಟ್ ನಿಲ್ಲುತ್ತೆ ಅಷ್ಟೇ

ಹೇಮಂತ :- ನನ್ನ ಮಕ್ಳ ನನ್ನೇನು ಬಕ್ರ ಅಂದುಕೊಂಡ್ರ ಇಲ್ದೆ ಇರೋದನ್ನೆಲ್ಲ ಹೇಳಿ ಡ್ರಾಮ ಮಾಡ್ತಿರ

ಉಮೇಶ :- ಅಯ್ಯೋ ಇಲ್ಲಪ್ಪ ಅದು ನಿಜಾನೆ ನಾನು ಕೆಲವೊಂದು ಸರಿ ಅದೇ ಥರ ಟ್ರೈ ಮಾಡಿದಿನಿ

ಹೇಮಂತ :- ಇಷ್ಟಕ್ಕೂ ನಮ್ಮನ ಅವರೇ ನೆನಪಿಸಿಕೊಳ್ತಾ ಇದಾರೆ ಅಂತ ಹೇಗೆ ಗೊತ್ತಾಗುತ್ತೆ ? ? ?

ನಾನು :- ನೋಡು ಈಗ ನಿನಗೆ ಬಿಕ್ಕಳಿಗೆ ಬಂತು ಅಂತ ತಿಳ್ಕ್ಕೋ ಅವಾಗ ನಿನಗೆ ಮನಸಿಗೆ ತುಂಬಾ ಹತ್ತಿರ ಅನಿಸಿರೋರ್ನ ನೆನಪು ಮಾಡೋಕೆ ಅದಾಗ ಅದೇ ನಿಲ್ಲುತ್ತೆ

ಉಮೇಶ :- ಈ ಕರಿಯಾ ಮುಂಡಾನಾ ಯಾರು ನೆನಪು ಮಾಡಿಕೊಳ್ತಾರೆ ಬಿಡೋ ಬಿಕ್ಕಳಿಕೆ ಬರೋಕೆ
(ಹೇಮಂತ್ ಗೆ ನಮ್ಮ ಕಾಲೇಜ್ ಲೆಕ್ಚರ್ ಇಟ್ಟ ಹೆಸರು ಕರಿಯಾ ಮುಂಡಾ ಅಂತ ಯಾಕಂದ್ರೆ ಅಷ್ಟೊಂದು ಬ್ಲಾಕ್ ಇದ್ದ ಅವನು, ನನಗೆ ಆ ಹೆಸರಿನ ಅರ್ಥ ಇದುವರೆಗೂ ಗೊತ್ತಾಗಿಲ್ಲ ಬಟ್ ಕರೆಯೌದ್ ಮಾತ್ರ ಯಾರು ಬಿಟ್ಟಿಲ್ಲ)

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ :- ನೀನು ಅದೇ ಆಗು

ಹೇಮಂತ :- ಹ್ಮಂ ಹೋಗ್ಲಿ ನೀನು ಬಿಕ್ಕಳಿಕೆ ಬಂದಾಗ ಯಾರನ್ನ ನೆನಪು ಮಾಡಿಕೊಳ್ತಿಯ ಅವರ ಹೆಸರು ಏನು ?

ನಾನು :- ಮರೀಚಿಕೆ..♥...♥...♥ ಅಂತ

ಹೇಮಂತ :- ಈ ಥರ ಹೆಸರು ಯಾರಾದ್ರೂ ಇಟ್ಕೋಳ್ತರ

ಉಮೇಶ :- ಯಾರು ಇಟ್ಟಿದಲ್ಲ ಅವನೇ ಇಟ್ಟಿರೋದು

ಹೇಮಂತ :- ಅಂದ್ರೆ ?

ಉಮೇಶ :- ನಿಂಗೆ ನಿಜವಾದ ಹೆಸರು ಗೊತ್ತಾಗಬಾರ್ದು ಅಂತ ಆ ಹೆಸರು ಹೇಳಿದನೆ ತಮ್ದು ತಮಟೆ ಬಾಯಿ ಅಲ್ವ ಅದಕ್ಕೆ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ್ :- ಬರ್ತೀಯ ನೀನು

ಹೇಮಂತ :- ಏನಕ್ಕೆ ?

ಉಮೇಶ :- ಹಾಳಾಗೋಕೆ ಜೊತೆಗೆ

ಹೇಮಂತ :- ಹ್ಮಂ ಹಿಂಗೆ ಇದ್ರೆ ನಿಮ್ ಜೊತೆ ನನ್ನ ಹಾಳು ಮಾಡ್ತಿರ

ಉಮೇಶ :- ಒಹ್ ! ನಾವು ಆ ಥರ ಅಲ್ಲಾ ! ನಾವು ಹುಡುಗ್ರನೆಲ್ಲ ಹಾಳು ಮಾಡೋಲ್ಲ

ನಾನು :- ಸಾಕು ನಿಲ್ಲಿಸ್ರೋ ಒಬ್ಬನಿಗಾದ್ರು ಎಂ.ಎಂ.ಇದೇನಾ

ಹೇಮಂತ :- ಎಂ.ಎಂ. ಹಾಗಂದ್ರೇನು

ನಾನು :- ಮಾನ ಮರ್ಯಾದೆ ಅಂತ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ ನಿಮ್ ಜೊತೆ ಇದ್ರೆ ನಾನು ಮೆಂಟ್ಲು ಆಗ್ತೀನಿ.

ಉಮೇಶ್ :- ಬ......ರ್ತೀ......ಯ ನೀನು..........!

ಇಲ್ಲಿದೆ ಮನಸ್ಸುಗಳ ತರಂಗ...♥...♥...♥

ಬಿಡಿ ನನ್ನ ಕಾಲೇಜ್ ಲೈಫ್ ಬಗ್ಗೆ ಹೇಳ್ತಾ ಹೋದ್ರೆ ಕೊನೇನೆ ಇರೋಲ್ಲ ಈಗ ಸೀದ ವಿಷಯಕ್ಕೆ ಬರೋಣ.

ಹೌದು ಬಿಕ್ಕಳಿಕೆ ಅನ್ನೋದೇ ಹೀಗೆ, ನಿಮ್ಮ ನಮ್ಮ ಮನೇಲಿ ಯಾರಾದ್ರೂ ಹಿರಿಯ ವಯಸ್ಸಿನೋರು ಇದ್ರೆ ಬಿಕ್ಕಳಿಕೆ ಬಂದ ತಕ್ಷಣ ಹೇಳೋ ಮಾತು ಯಾರೋ ನಿನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತ, ಕೆಲವು ಕಡೆ ಯಾರೋ ಬೈತಾ ಇದಾರೆ ಅಂತನು ಹೇಳ್ತಾರೆ.

ಇದನ್ನ ನೀವು ಮೋಡ ನಂಬಿಕೆ ಅಂತಿರ ? ಇಲ್ಲಾ ಇದು ನಿಜ ಅಂತಿರ ?

ನೀವು ಏನ್ ಅನ್ನಿ ನಾನು ಮಾತ್ರ ಇದು ಸತ್ಯ ಅಂತಾನೆ ಹೇಳೋದು ಏಕಂದ್ರೆ ನನಗೆ ತುಂಬಾನೇ ಅನುಭವವಾಗಿದೆ ಇದರಲ್ಲಿ ಒಂದು ಸಲ ಹೀಗೆ ನಮ್ಮ ಕಾಲೇಜ್ ನಲ್ಲಿ ಬಿಕ್ಕಳಿಕೆ ಶುರುವಾಯ್ತು ಹತ್ರ ನೀರು ಇರ್ಲಿಲ್ಲ ಹೊರಗಡೆ ಹೋಗಿ ನೀರು ಕುಡಿಯೋಣ ಅಂದ್ರೆ ಲೆಕ್ಚರ್ ಕ್ಲಾಸ್ ತಗೊಂಡಿದ್ರು ಕೇಳೋಕೆ ಮನಸ್ಸು ಬರ್ಲಿಲ್ಲ ಆಗಲೇ ಸ್ವಲ್ಪ ತಲೆ ಓಡಿಸಿದೆ ನನಗೆ ಇಷ್ಟವಾದವರನೆಲ್ಲ ನೆನಪು ಮಾಡಿಕೊಳ್ತಾ ಬಂದೆ ಹ್ಮಂ ಹ್ಮಂ ನಿಲ್ಲಲಿಲ್ಲ ಆಗಲೇ ಬಿಕ್ಕಳಿಕೆ ಸೌಂಡ್ ಜಾಸ್ತಿ ಆಗಿ ಕ್ಲಾಸ್ ಗೆಲ್ಲ ಕೇಳ್ತಾ ಇತ್ತು ಅಷ್ಟರಲ್ಲಿ ಒಂದು ಹೆಸರು ನನಪಿಗೆ ಬಂತು ನೋಡಿ ನೆನಸ್ಕೊಂಡು ಬಿಟ್ಟೆ ತಕ್ಷಣ ನಿಲ್ಲೋದಾ ನನ್ನ ಪುಣ್ಯಕ್ಕೆ ಆ ಹೆಸರು ಬೇಗನೆ ನೆನಪಾಯ್ತು ಇಲ್ಲಾ ಅಂದಿದ್ರೆ ಆ ಲೆಕ್ಚರ್ ಕೈಯಲ್ಲಿ ಸಿಕ್ಕಪಟ್ಟೆ ಬೈಸ್ಕೋ ಬೇಕಿತ್ತು.

ಅವತ್ತಿಂದ ಇವತ್ತಿನ ವರೆಗೂ ನನ್ನ ಬಿಕ್ಕಳಿಕೆ ತಡೆಯೋಕೆ ಆ ಹೆಸರು ಸಾಕು ಈಗ್ಲೂ ಕೆಲವೊಮ್ಮೆ ಅಮ್ಮ ನ ಜೊತೆ ಫೋನ್ ನಲ್ಲಿ ಮಾತಾಡುವಾಗ ಬಿಕ್ಕಳಿಕೆ ಬರುತ್ತೆ ಅಮ್ಮ ಹೇಳ್ತಾ ಇರ್ತಾರೆ ನೀರು ಕುಡಿಯೋ ಅಂತ ನಾನು ಆಗ ಆ ಹೆಸರು ನೆನಸಿಕೊಳ್ತಿನಿ ಬಿಕ್ಕಳಿಕೆ ನಿಲ್ಲುತ್ತೆ ಮತ್ತೆ ಅಮ್ಮ ಕೇಳ್ತಾರೆ ನೀರು ಕುಡುದ್ಯಾ ಅಂತ ಆಗ ಹೇಳ್ತೀನಿ ಇಲ್ಲಾ ಅಮ್ಮ ಯಾರನ್ನೋ ನೆನಪು ಮಾಡಿಕೊಂಡೆ ನಿಲ್ತು ಅಂತ ನಮ್ಮ ಆಮನಿಗೆ ಅಷ್ಟು ಸಾಕು ಸ್ಟಾರ್ಟ್ ಮಾಡಿಕೊಳ್ತಾರೆ "ಯಾರನ್ನ ನೆನಸ್ಕೊಂಡೆ ? " "ಎಲ್ಲಿದಾರೆ ? " "ಹುಡುಗನ ಹುಡುಗಿನ ?" ಅಂತ ಅವಕೆಲ್ಲ ಉತ್ತರ ಕೊಟ್ರೆ ಉಳಿಗಾಲ ಇಲ್ಲಾ ಅಂತ ನನಗೆ ಗೊತ್ತು ಅದಕ್ಕೆ ಬೇರೆ ಏನೇನೊ ಮಾತಾಡಿ ಟಾಪಿಕ್ ಚೇಂಜ್ ಮಾಡ್ತೀನಿ ಯಾಕೆ ಬೇಕು ಅಲ್ವ ಆ ಮರೀಚಿಕೆ..♥...♥...♥ಹೆಸರು ಹೇಳೋದು

ನಗೆ ಅನಿಸುತ್ತೆ, ನಾವು ನೀವು ಎಲ್ಲೋ ಇರ್ತಿವಿ ಫೋನ್ ನಲ್ಲಿ ಮಾತಾಡ್ತೀವಿ ಅದು ಹೇಗೆ ಸಾದ್ಯ ???? ಯಾರೋ ಫೋನ್ ಅನ್ನೋದನ್ನ ಕಂಡು ಹಿಡಿದ್ರು ಇವತ್ತು ನಾವು ನಮ್ಮಿಂದ ಎಸ್ಟೋ ದೂರ ಇರೋರ್ ಜೊತೆ ಮಾತಡ್ತಿವಿ ಇದಕ್ಕೆಲ್ಲ ಕಾರಣ ಮನುಷ್ಯನ ಬುದ್ಧಿ ಶಕ್ತಿ, ಕಣ್ಣಿಗೆ ಕಾಣದ ತರಂಗಗಳು...!

ಹಾಗೆ "ಮನುಷ್ಯ ಅನ್ನೋ ಮನುಷ್ಯನಲ್ಲಿರುವ ಮನಸ್ಸುಗಳಿಗೂ ಮನಸ್ಸು ಅಂತ ಇರುತ್ತೆ ಆ ಮನಸುಗಳು ಸಹ ಮನಸ್ಸಲ್ಲಿ ಇರೋ ಮನಸ್ಸಿನೊಂದಿಗೆ ಮನಸ್ಸು ಕೊಟ್ಟು ಮನಸಾರೆ ಮನಸ್ಸು ಬಿಚ್ಚಿ ಮಾತಾಡುತ್ತವೆ" ಆ ಮನಸ್ಸುಗಳ ನಡುವೆ ನನಗೂ ನಿಮಗೂ ಗೊತ್ತಿಲ್ದೆ ಇರೋ ಯಾವ್ದೋ ಒಂದು ಅದ್ಬುತ ಶಕ್ತಿ ತರಂಗಗಳ ಮೂಲಕ ಮನಸುಗಳ ಮಿಲನಕ್ಕೆ ನಾಂದಿಯಾಗಿದೆ....!

ನೀವು ಗಮನಿಸಿರ್ತಿರ ಅವಳಿ ಜವಳಿ ಮಕ್ಕಳು ಇದ್ರೆ ಒಬ್ಬ ಮಗುಗೆ ಜ್ವರ ಬಂದ್ರೆ ಇನ್ನೊದು ಮಗು ಎಷ್ಟೇ ದೂರ ಇದ್ರೂ ಆ ಮಗುಗು ಜ್ವರ ಬಂದಿರುತ್ತೆ ಈ ಥರ ಉದಾಹರಣೆಗಳು ಸಿನಿಮಾಗಳಲ್ಲಿ ತುಂಬಾ ಇವೆ ಅದು ನಮಗೂ ಗೊತ್ತು ಆದರೆ ಅದಕ್ಕೆ ತಜ್ಞರು ಅವರದೇ ಆದ ರೀತಿನಲ್ಲಿ ವಿವರಣೆ ನಿಡ್ತಾರೆ ಅದಕ್ಕೆ ನಾವು ವಿಜ್ಞಾನ ಅಂತಿವಿ ಅದೇ ಒಬ್ಬ ಹಳ್ಳಿಯವ ಅದರ ಬಗ್ಗೆ ತನ್ನ ಮಾತಿನಲ್ಲಿ ಸರಳವಾಗಿ ವಿವರಣೆ ಕೊಟ್ರೆ ಅದೇ ನಾವೇ ಅಜ್ಞಾನ, ಮೋಡ ನಂಬಿಕೆ ಅಂತೆಲ್ಲ ಕರಿತಿವಿ ಅಲ್ವ ..!

ಈಗ್ಲೂ ಕಾಲ ಮಿಂಚಿಲ್ಲ ನಿಮಗೂ ಬಿಕ್ಕಳಿಕೆ ಬರುತ್ತೆ ಬಂದಾಗ ಒಂದು ಸಾರಿ ನಿಮ್ಮನ್ನ ಇಷ್ಟ ಪಡೋ ಇಲ್ಲಾ ನಿಮ್ಮ ಮನಸ್ಸಲ್ಲಿರೋ ಹೆಸರನ್ನ ನೆನೆಸಿಕೊಂಡು ನೋಡಿ ಮನಸ್ಸುಗಳ ತರಂಗದ ಅರಿವು ನಿಮಗೂ ಆಗುತ್ತೆ..!

ಮನಸ್ಸಲ್ಲಿ ಇರೋರು ಅಂದ್ರೆ ಲವರ್ ಅಂತ ಎಷ್ಟೋ ಜನ ತಪ್ಪು ಕಲ್ಪನೆಯಲ್ಲಿ ಮುಳುಗಿದರೆ, ನಿಮ್ಮನ್ನ ನೆನಪು ಮಾಡಿಕೊಳ್ಳೋಕೆ ನಿಮ್ನ ಪ್ರೀತಿ ಮಾಡ್ತಾ ಇರೋರೆ ಆಗಬೇಕು ಅಂತ ಇಲ್ಲಾ ತಾಯಿ, ತಂದೆ, ಅಕ್ಕ ತಮ್ಮ ಇಲ್ಲಾ ಎಂದೋ ಬಸ್ ಸ್ಟಾಪ್ ನಲ್ಲಿ ಸಿಕ್ಕು ಪರಿಚಯ ಆಗಿ ಇವತ್ತು ನಿಮ್ ಜೊತೆ ಸಂಪರ್ಕದಲ್ಲಿ ಇಲ್ದೇ ಇರೋರು ಆಗಿರಬಹುದು, ಇಲ್ಲಾ ನಿಮ್ಮ ಕಲ್ಪನೆಯಲ್ಲಿ ಹುಟ್ಟಿಕೊಂಡ ನಿಮ್ಮ ಬಾಳ ಸಂಗಾತಿಯಾಗಿರಬಹುದು ಅಂತಹ ಪಾತ್ರಗಳಿಗೆ ನಾನು ಮರೀಚಿಕೆ..♥...♥...♥ ಅಂತ ಕರೆಯೋಕೆ ಇಷ್ಟ ಪಡ್ತೀನಿ.

"ನಾನಂತೂ ಪ್ರೇಮಿ ಅಲ್ಲಾ, ಯಾವದೇ ಪ್ರೇಮದಲ್ಲಿ ಬಿದ್ದಿಲ್ಲ , ಆದ್ರು ಮರೆಯದ ಮರೀಚಿಕೆಯ ಹೆಸರು ಮಾತ್ರ ಇನ್ನು ಮರೆತಿಲ್ಲ"
♥...♥...♥..♥...♥...♥..♥...♥...♥
ಕಣ್ಣಿಗೆ ಕಾಣದ ಓ ಮನವೇ
ನೆನಪಿನಂಗಳದ ಓ ತನುವೇ
ನೀ ಎಂದು ನೆನಪಾಗಿರು
ನೆನಪಿನ ತೋಟದ ಹೂವಾಗಿರು
ನೀ ನನ್ನ ನೆನೆದಾಗ ಬಿಕ್ಕಳಿಕೆಯ
ಮೊದಲ ಗುರುತು ನಿನಾಗಿರು
♥...♥...♥..♥...♥...♥..♥...♥...♥

ನೀನಾಗು ಎಂದು ನನ್ನ ಕೈ ಸಿಗದ ಮರೀಚಿಕೆ
ನೀನಾಗು ಎಂದು ನನ್ನ ಮರೆಯದ ಮರೀಚಿಕೆ
ನೀನಾಗು ಎಂದು ನನ್ನ ಮನತುಂಬುವ ಮರೀಚಿಕೆ...!
♥...♥...♥..♥...♥...♥..♥...♥...♥..♥...♥..♥...♥...♥..♥...♥...♥

"ಕ್ರಿಸ್ಮಸ್ ಹಬ್ಬದ ಶುಭಾಶಯಗಳೊಂದಿಗೆ"

ಇಂತಿ
ಮರೆಯಲಾರದ ಮರೀಚಿಕೆ

?
ಮಂಜು ದೊಡ್ಡಮನಿ...♥...♥..♥
9742495837

Monday, 4 October 2010

ಗೋವಿಂದನ ಗಾದೆ ಪುರಾಣ ...!





ಪಾತಿ ಕತೆ ಮುಗಿದು ಹೋಯ್ತು ಸರ್ ಬೇರೆಯೇನಾದ್ರು ಬರೀರಿ ಅಂತ ತುಂಬಾ ಫ್ರೆಂಡ್ಸ್ ಮೇಲ್ ಮಾಡಿದ್ರು ಚಾಟ್ ಮಾಡಿದ್ರು ಕಾಲ್ ಮಾಡಿ ಕೂಡ ಹೇಳಿದ್ರು ನಾನು ಅವರಿಗೆಲ್ಲ ತಾಳಿ ತಾಳಿ ಒಂದು ಮೂವತ್ತು ದಿನ ಓಡಲಿ ಆಮೇಲೆ ಏನಾದ್ರು ಬರೆಯೋಣ ಅಂತ ಹೇಳಿ ಸಮಾಧಾನ ಮಾಡಿದ್ದೆ ಈಗ ನೋಡಿ 30 ದಿನ ಆಗಿದೆ ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲಾ ಆದ್ರು ಬರಿಲೇ ಬೇಕು ಅಂತ ಇರೋ ಬರೋ ಎನರ್ಜಿನೆಲ್ಲ ಉಪಯೋಗಿಸಿ ಇದನ್ನ ಬರ್ದಿದೀನಿ ಕಾರಣ ಮೂನ್ನೆ ಯಾರೋ ನನಗೆ ಫೋನ್ ಮಾಡಿ "ಮಲ್ಟಿ ಟ್ಯಾಲೆಂಟ್ ಮಂಜು" ಅಂತ ಬಿರುದು ಕೊಟ್ರು ಅಲ್ದೆ ಯಾರೋ ಒಬ್ರು ಕಾಮೆಂಟ್ಸ್ ಕೊಡ ಹಾಕಿದ್ರು, ಈ ಕಂದಾ, ಮುದ್ದು, ಬಂಗಾರ, ಚಿನ್ನ, ರನ್ನ ಇನ್ನು ಹೇಳ್ಬೇಕು ಅಂದ್ರೆ ಪೊರ್ಕಿ, ಲೂಸು, ಮೆಂಟ್ಲು, ಪೋಲಿ ಅಂತೆಲ್ಲಾ ಕೊಟ್ಟ ಹುಡುಗೀರ ಬಿರುದುಗಳಿಗಿಂತ ಇದ್ಯಾಕೋ ಹಾರ್ಟ್ ಟಚ್ ಮಾಡ್ತು ರೀ ಅದಕ್ಕೆ ಒಂದು ಕಾನ್ಸೆಪ್ಟ್  ತಗೊಂಡು ಈ ಪುರಾಣ ಬರ್ದಿದೀನಿ. ನೀವು ಕಷ್ಟ ಪಟ್ಟಾದರು ಓದಿ ಮುಗಿಯೋ ತನಕ ಬಿಡುಬೇಡಿ ಒಂದೇ ಟೈಮ್ ಓದುಬೇಕು ಗಮನ ಇಟ್ಟು ಓದಿ ಓದುವಾಗ ಎಲ್ಲೂ ನಿಲ್ಲಿಸಬಾರ್ದು ತುಂಬಾ ಹುಷಾರು ಯಾಕಂದ್ರೆ ನಾನು ಒಂದು ನಿಮಗೆ ಪ್ರಶ್ನೆ ಕೇಳ್ತೀನಿ ಜಾಗ್ರತೆ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಇದೆ. 

     ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರಲ್ಲ ಅದು ನಿಜ ಇರ್ಬೇಕು ಕಣ್ರೀ ಆನೆ ನಡೆದದ್ದೇ ದಾರಿ ಅನ್ನೋ ಹಾಗೆ ನಮ್ಮ ಗೋವಿಂದ ನಡೆದದ್ದೇ ದಾರಿ ಯಾರು ಮಾತು ಕೇಳೋನಲ್ಲ ಅವನದೇ ಹಠ...... ಹೀಗಿರುವಾಗ ಕೆಲವೊಬ್ರು ಅವನಿಗೆ ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ ಅಂತ ಬೆನ್ನು ಹಿಂದೇ ಹೇಳ್ತಾ ಇದ್ರೂ ಅವನು ಕೇಳಿದ್ರು ಕೇಳ್ದೆ ಇರೋ ಥರ ಇರ್ತಾ ಇದ್ದಾ . ಯಾಕಂದ್ರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ? ? ? ? 

ಈಗ ನೇರವಾಗಿ ವಿಷಯಕ್ಕೆ ಬರೋಣ ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು ಅಂತ ದೊಡ್ಡವರು ಹೇಳಿದರೆ ಅಲ್ವ  ಅಲ್ದೆ  ಕೈ ಕೆಸರಾದರೆ ಬಾಯಿ ಮೊಸರು ಅಂತ ನಾನು ಚಿಕ್ಕವನಿರುವಾಗ ನಮ್ಮ ಟೀಚರ್ ಹೇಳ್ತಾ ಇದ್ರೂ  ಈಗ ನಮ್ಮ ಗೋವಿಂದ ಓದಿದ್ದು ಆಯ್ತು ಎಲ್ಲಾದ್ರು ಕೆಲಸ ಹುಡುಕೋಣ ಅಂತ ಯೋಚನೆ ಮಾಡ್ತಾ ಕೂತಿದ್ದ   ಅದೇನೋ ಹೇಳ್ತಾರಲ್ಲ ಕೆಟ್ಟು ಪಟ್ಟಣ ಸೇರು ಅಂತ ಆದರೆ ಇವನು ಇನ್ನು ಕೆಟ್ಟು ಹೋಗಿರಲಿಲ್ಲ...! ನೋಡೋಕೆ ಸಾದು ಥರ ಇದ್ದಾ, ತನ್ನ ಊರಲ್ಲಿ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ ಅವನಿಗೆ ಅದಕ್ಕೆ ಬೆಂಗಳೂರಿಗೆ ಹೋಗಿ ಏನಾದ್ರು ಮಾಡೋಣ ಅಂತ ಯೋಚನೆ ಮಾಡ್ತಾ ಇರುವಾಗಲೇ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನೋ ಹಾಗೆ ಹಾಗೋ ಹೀಗೋ ಒಬ್ಬ ಪರಿಚಯ ಆಗಿ ಗೋವಿಂದನ್ನ ಬೆಂಗಳೂರಿಗೆ ಕರ್ಕೊಂಡು ಬಂದ, ಅವ್ನೋ.... ಮಾತು ಬೆಳ್ಳಿ ಮೌನ ಬಂಗಾರ ಥರ ಹೊಸ ಜಾಗ... ಹೊಸ ಫ್ರೆಂಡ್ಸ್.... ಹೇಗೋ ಹೊಂದಿ ಕೊಂಡಿದ್ದ ಬಂದು ಸ್ವಲ್ಪ ದಿನದಲ್ಲೇ ಕೆಲಸ ಸಿಕ್ತು,  ಪಾಲಿಗೆ ಬಂದಿದ್ದು ಪಂಚಾಮೃತ ಅಲ್ವ ಸಿಕ್ಕ ಕೆಲಸ ಸರಿಯಾಗಿ ಮಾಡಿಕೊಂಡು ಹೋಗ್ತಾ ತಿಂಗಳಿಗೆ ಸರಿಯಾಗಿ ಸಂಬಳ ತಗೊಂಡು ಆರಾಮಗಿದ್ದ. ಈ ಬೆಂಗಳೂರ್ ಸಿಟಿಗೆ ಬಂದಮೇಲೆ ಅವನಿಗೆ ದುಡಿಮೆಯೇ ದುಡ್ಡಿನ ತಾಯಿ ಅನ್ನೋದು ಅರಿವಾಯ್ತು, ಅವನಾದ್ರು ಒಂದೇ ಹತ್ರ ಎಷ್ಟು ದಿನ ಅಂತ ಕೆಲಸ ಮಾಡ್ತಾನೆ ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ ಅವಂದು ಆಗಲೇ ಫುಲ್ ಕೆಲಸ ಕಲ್ತಿದ್ದ ನಯಶಾಲಿ ಆದವನು ಜಯಶಾಲಿ ಆದನು ಅಂತ  ಬೇರೆಕಡೆ ಎಲ್ಲೇ ಹೋದ್ರು ಬದುಕ್ತೀನಿ ಅನ್ನೋ ಧೈರ್ಯದಿಂದ ಬೇರೆ ಕೆಲಸಕ್ಕೆ ಸೇರ್ಕೊಂಡ. 

ರವಿ ಕಾಣದನ್ನ ಕವಿ ಕಂಡ ಅನ್ನೋ ಮಾತು ಎಷ್ಟು ನಿಜ ರೀ ಒಂದು ದಿನ ಗೋವಿಂದ ಹೊಟ್ಟೆ ತುಂಬಾ ಊಟ ಮಾಡಿ ಮಲ್ಕೊಂಡಿದ್ದ ರಾತ್ರಿ ಕನಸಲ್ಲಿ ಕಾಜೋಲ್ ಜೊತೆ ಶೂಟಿಂಗ್ ಇತ್ತು  ಐಶ್ವರ್ಯ  ಆಕಡೆ ಇಂದ ಗೋ...ಗೋ....ಗೋ... ಗೋವಿಂದಾ........... ಅಂತ ಓಡಿ ಬರ್ತಾ ಇದ್ಲು ಈ ಕಡೆ ಇಂದ ಗೋವಿಂದ .............ಐಶ್ವರ್ಯ  ಅಂತ ಓಡಿ ಬರ್ತಾ ಇದ್ದ ಇನ್ನೇನು ಇಬ್ರು ಹತ್ರ ಬಂದ್ರು ಬಂದ್ರು ಬಂದೆ ಬಿಟ್ರು ಅನ್ನೋ ಅಷ್ಟರಲ್ಲಿ  ಶಿವ ಪೂಜೆಲಿ ಕರಡಿ ಬಿಟ್ಟಂತೆ  ಅವ್ನ ಫ್ರೆಂಡ್ ಗೋವಿಂದ ಯಾಕೋ ಈ ಥರ ಕೂಗ್ತಾ ಇದೀಯ ಬೆಳಗ್ಗೆ 8 ಘಂಟೆ ಆಯ್ತು ಎದ್ದೇಳೋ ಅಂತ ಎಬ್ಬಿಸಿ ಬಿಟ್ಟ ಕಣ್ರೀ ಪಾಪ ಗೋವಿಂದನ ಕನಸು ಅಲ್ಲಿಗೆ ಮುಕ್ತಯಾ ಆಯ್ತು ಹಿಂಗಾಗಬಾರ್ದಿತ್ತು ಅಲ್ವ !  ಹೋಗ್ಲಿ ಬಿಡಿ ಅದ್ಯಾಕೆ ಈಗ ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು ನೇರ ವಿಷ್ಯಕ್ಕೆ ಬರೋಣ, ಹುಟ್ಟು ಗುಣ ಸುಟ್ರು ಹೋಗೋಲ್ಲ ಅಂತಾರೆ ಅಂತದ್ರಲ್ಲಿ ಈ ಗೋವಿಂದನಿಗೆ  ರಾತ್ರಿ ಮಲ್ಗೊವಾಗ ಒಂದು ಬೀಡಿ ಸೇದೋ ಅಭ್ಯಾಸ ಇತ್ತು ಅವತ್ತೊಂದು ದಿನ ಹೊರಗಡೆ ಹೋಗಿ ಬೀಡಿ ಸೇದೋಣ ಅಂತ ಅನ್ಕೊಂಡ ಆದ್ರೆ ತುಂಬಾ ಮಳೆ ಬರ್ತಾ ಇತ್ತು ಫ್ರೆಂಡ್ಸ್ ಎಲ್ಲಾ ಮಲ್ಕೊಂಡಿರೋದು ನೋಡಿ ತಾನು ಇದ್ದಲ್ಲೇ ಬೀಡಿ ಹಚ್ಚಿಕೊಂಡು ಸೇದುತ್ತ ಕೂತ, ಬೀಡಿ ಹಾಚ್ಚೋವಾಗಿ ಬೆಂಕಿ ಕಡ್ಡಿ ಗೀರಿ ಅದೆಲ್ಲಿ ಎಸೆದ್ನೋ ಏನೋ ಸ್ವಲ್ಪ ಹೊತ್ತಲ್ಲೇ ಇಡಿ ಮನೆಗೆ ಬೆಂಕಿ ಹತ್ತಿ ಹೋಯ್ತು ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸ್ತು ಅನ್ನೊ ಮಾತು ಜೊತೆಗಿದ್ದ ಫ್ರೆಂಡ್ಸ್ ಬಾಯಲ್ಲಿ ಬಂದ್ರು ಯಾರು ಅವನಿಗೆ ಏನು ಅನ್ಲಿಲ್ಲ ಯಾಕಂದ್ರೆ ಅವನನ್ನ ಕೆಡೋಥರ ಮಾಡಿದ್ದೆ ಅವರು. ನಾಯಿ ಬಾಲ ಯಾವತ್ತಿದ್ರೂ ಡೊಂಕು ಅಲ್ವ ಕಡ್ಡಿನ ಗುಡ್ಡ ಮಾಡೋ ಸ್ವಭಾವ ನಮ್ಮ ಗೋವಿಂದಂದು ಪಕ್ಕದ ಮನೆ ಪದ್ಮಕ್ಕನ ಮಗಳು ಕಾಲೇಜ್ ಮುಗಿಸ್ಕೊಂಡು ಬೈಕ್ ನಲ್ಲಿ ಒಬ್ಬ ಹುಡುಗನ ಜೊತೆ ಸುತ್ತೊದನ್ನ ನೋಡಿ ಸೀದಾ ಪದ್ಮಕ್ಕನ ಮನೆಗೆ ಹೋಗಿ ನಿಮ್ಮ ಮಗಳು ಇದಾಳಲ್ಲ ಅವಳು ಅದ್ಯಾರೋ ಹುಡುಗುನ್ ಜೊತೆ ಹಾಗೆ ಹೀಗೆ ಅಂತೆಲ್ಲ ಇಲ್ದೆ ಇರೋದನ್ನೆಲ್ಲ ಹೇಳಿ ಪದ್ಮಕ್ಕನ ಕೈಲಿ ನಾಯಿ ಥರ ಹೊಡಿಸ್ಕೊಂಡಿದ್ದ ಯಾಕಂದ್ರೆ ಪದ್ಮಕ್ಕನ ಮಗಳ ಜೊತೆ ಇದ್ದದ್ದು ಪದ್ಮಕ್ಕನ ಅಳಿಯ ಮಗಳಿಗೆ ಮದುವೆ ಮಾಡಿ ಇನ್ನು 3 ತಿಂಗಳು ಆಗಿರಲಿಲ್ಲ..! ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ ಇವನು ಏನಾದ್ರು ಒಂದು ಮಾಡ್ತಾ ಇರ್ತಾನೆ ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು ನಮ್ಮ ಗೋವಿಂದನಿಗೆ ಹೊಸದಲ್ಲ ಬಿಡಿ.

ಗೋವಿಂದನ ಈ ಆಟಗಳನ್ನ ನೋಡಿ ಬೆಂಗಳೂರು ಬಿಡಿಸಿ ಊರಲ್ಲಿ ಹೊಲ ಗದ್ದೆ ನೋಡ್ಕೊಂಡು ಇರು ಅಂತ ಹೇಳಿ ಅಪ್ಪ ಅಮ್ಮ ಅವನಿಗೆ ಒಂದು ಮದುವೆ ಮಾಡ್ತಾರೆ ಮದುವೆ ಆದ ಸ್ವಲ್ಪ ದಿನದಲ್ಲೇ ಹೆಣ್ಣು ಕೊಟ್ಟ ತಂದೆ ತಾಯಿ ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ ಅಂತ ಗೊತ್ತಾಗುತ್ತೆ ಹೀಗಿರುವಾಗ ಹಬ್ಬಕ್ಕೆ ಅಂತ ಹೆಂಡ್ತಿ ಜೊತೆ ಮಾವನ ಮನೆಗೆ ಹೋದ್ರೆ ಅತ್ತೆ ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಅಂತ ಮನಸ್ಸಲ್ಲೇ ಅನ್ಕೊಂಡು ಸ್ನಾನಕ್ಕೆ ಅಂತ ಬಚ್ಚಲ ಮನೆಗೆ ಕಳಿಸಿದ್ರೆ ತಾನು ಸ್ನಾನ ಮಾಡೋದು ಬಿಟ್ಟು ಹಂಚು ತಗೆದು ಪಕ್ಕದ ಮನೆಯವರು ಸ್ನಾನ ಮಾಡೋದು ನೋಡಿ ಸಿಕ್ಕು ಬಿದ್ದು ಊರೆಲ್ಲ ಸೇರಿ ಹೊಡಿಯೋಕು ಮುಂಚೆ ಹೆಂಡ್ತಿ ಕರ್ಕೊಂಡು ಹೇಳ್ದೆ ಕೇಳ್ದೆ ಊರು ಬಿಟ್ಟು ತನ್ನೂರಿಗೆ ಬಂದಿದ್ದ. ಇವನ ತರ್ಲೆಗಳನ್ನ ನೋಡಿ ನೋಡಿ ಸಾಕಾಗಿದ್ದ ಅವನ ಹೆಂಡ್ತಿಗೆ ಜೀವನ ತಾಳ ತಪ್ಪಿದ ಬಾಳು ತಾಳಲಾರದ ಗೋಳು ಆಗಿತ್ತು.

ಹಂಗು ಹಿಂಗು ಗೋವಿಂದ ಕಷ್ಟ ಪಟ್ಟು ಒಂದು ಮಗುನ ತನ್ನ ಹೆಂಡ್ತಿ ಕೈಗೆ ಕೊಟ್ಟಿದ್ದ. ಅದೋ ಗಂಡು ಮಗು ಆ ಮಗು ಬಗ್ಗೆ ಹೇಳ್ಬೇಕು ಅಂದ್ರೆ ಎಲ್ಲಾ ಗೋವಿಂದನ ಥರಾನೆ ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ ಅನ್ನೋದಕ್ಕೆ ಆ ಮಗುನೆ ಸಾಕು. ಇನ್ನು ನಮ್ಮ ಗೋವಿಂದನ ಕಂಡ್ರೆ  ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅನ್ನೋದನ್ನ ಅವನ ತಂದೆ ತಾಯಿ ಅಲ್ದೆ ಹೆಂಡ್ತಿ ಕೊಡ ನಿಜ ಮಾಡಿ ಬಿಟ್ಟಿದ್ರು ಅವನು ಬದಲಾಗೊಲ್ಲ ಅಂತ ಗೊತ್ತಿದ್ದೇ ಅವರು ಅವನಿಗೆ ಬುದ್ಧಿ ಹೇಳೋಕೆ ಹೋಗ್ತಾ ಇರ್ಲಿಲ್ಲ ಯಾಕಂದ್ರೆ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಏನೆ ಹೇಳಿದ್ರು ಉಪಯೋಗ ಇಲ್ಲಾ ಅಂತ ಸುಮ್ನೆ ಇರ್ತಾ ಇದ್ರೂ. 

ಹೋಗ್ಲಿ ಬಿಡಿ ನಿಮಗ್ಯಾಕೆ  ಆ ಮುಸಿಕಿನೊಳಗೆ ಗುದ್ದಿಸಿಕೊಳ್ಳೋ ಗೋವಿಂದನ ವಿಚಾರ ಓದಿದ್ದು ಆಯ್ತಲ್ಲ ಅವನ ಕಥೆ,  ನಾನು ನಿಮಗೆ ಮೊದ್ಲೇ ಹೇಳಿದ್ದೆ ಒಂದು ಪ್ರಶ್ನೆ ಕೇಳ್ತೀನಿ ಅಂತ ಆ ಟೈಮ್ ಬಂದಿದ್ದೆ ಈಗ ಹೇಳಿ 

1. ಈ ಪುರಾಣದಲ್ಲಿ ಒಟ್ಟು ಎಷ್ಟು ಗಾದೆಗಳು ಇವೆ ?
2. ಇಲ್ಲಿ ಇರುವ ಗಾದೆಗಳಲ್ಲಿ ಅತಿ ಚಿಕ್ಕ ಗಾದೆ ಯಾವ್ದು ?

 ಸರಿಯಾಗಿ ಹೇಳಿದ ಮೊದಲ 3 ಆತ್ಮೀಯರಿಗೆ ಸೂಕ್ತ ಬಹುಮಾನ ಇರುತ್ತೆ ಮರೆಯ ಬೇಡಿ ತ್ವರೆ ಮಾಡಿ ...!






       ನಿಮ್ಮ ಹುಡುಗ

?ದೊಡ್ಡಮನಿ.ಮಂಜು

         97424 95837

Wednesday, 8 September 2010

ಮಂಜು ಹೀಗೇನೆ ..!

ಪಂಚರಂಗಿ ಚಿತ್ರದ "ಲೈಫು ಇಷ್ಟೇನೇ" for a change
"ಮಂಜು ಹೀಗೇನೆ"



Monday, 30 August 2010

ನಾನು ಲಟ್ಟಣಿಕೆ ಮತ್ತೆ ಚಪಾತಿ..!

ದೋ ಭಾನುವಾರ ಶುದ್ಧ ಸೋಮಾರಿಗಳ ವಾರ ನಾನೋ ಮೊದ್ಲೇ ಸೋಮಾರಿ ಘಂಟೆ 11 ಆದ್ರು ಏಳೋ ದಿಲ್ಲ ಅಂತದ್ರಲ್ಲಿ ಮೊನ್ನೆ ಯಾಕೋ ಬೇಗ ಎಚ್ಚರ ಆಯ್ತು ಬೇಗ ಅಂದ್ರೆ ಎಷ್ಟು ಬೇಗ ಗೊತ್ತ ರೀ ಇನ್ನು 9 ಘಂಟೆ ಆಗಿತ್ತು ಛೇ.. ಯಾಕಪ್ಪ ಇಷ್ಟ ಬೇಗ ಎಚ್ಚರ ಆಯ್ತು ಅನ್ಕೊಂಡು ಕಣ್ಣು ಬಿಟ್ಟು ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿದು ಎದ್ದೆ, ಅವತ್ತು ನನ್ನ ಫ್ರೆಂಡ್ ರೂಮ್ ನಲ್ಲಿ ಇರ್ಲಿಲ್ಲ ಬೆಳಗ್ಗೆ ಬೆಳಗ್ಗೆನೇ ಏನೋ ವರ್ಕ್ ಇದೇ ಬರೋದು ಸಂಜೆ ಆಗುತ್ತೆ ಅಂತ ಹೋಗಿದ್ದ ಹೊಟ್ಟೆ ಯಾಕೋ ತುಂಬಾ ಹಸಿತ ಇತ್ತು ಎಲ್ಲಾ ಮುಗಿಸ್ಕೊಂಡು ಕಾಫಿ ಕುಡಿಯೋಣ ಅಂತ ಬೇಕರಿಗೆ ಹೋದೆ ಅಲ್ಲಿಂದ ಕಾಫಿ ಕುಡಿದು ಮತ್ತೆ ರೂಮ್ ಗೆ ಬಂದೆ ಸ್ನಾನ ಮಾಡೋಣ ಅಂತ ನೀರು ಕಾಯೋಕೆ ಇಡೋಣ ಅಂತಿದ್ದೆ ಹೊಟ್ಟೆ ಯಾಕೋ ತುಂಬಾನೇ ಹಸಿತ ಇತ್ತು ಹೋ ಈಗ ಸ್ನಾನ ಮಾಡೋದು ಬೇಡ ಹೋಟೆಲ್ ಗೆ ಹೋಗಿ ಏನಾದ್ರು ತಿಂದು ಬಿಟ್ಟು ಆಮೇಲೆ ಸ್ನಾನ ಮಾಡೋಣ ಅಂತ ರೂಮ್ ಬಿಟ್ಟು ಹೊರಗಡೆ ಬಂದೆ ಅದೇನ್ ತಿಳಿತೋ ಏನೋ ನನ್ನ ಬುದ್ಧಿಗೆ ಅಲ್ಲಾ ಇವತ್ತಾದ್ರೂ ಹೋಟೆಲ್ ಊಟ ಬಿಟ್ಟು ರೂಮ್ ನಲ್ಲೆ ಏನಾದ್ರು ಮಾಡಿಕೊಳ್ಳೋಣ ಅಂತ ಮನಸ್ಸು ಅನಿಸುತ್ತೆ ಅನಿಸಿದ್ಧನ ಮಾಡೋದೇ ಮಂಜು ಸ್ಟೈಲ್ ಅಲ್ವ ..! 

ಸರಿ ಏನ್ ಮಾಡೋದು ಹೊಟ್ಟೆ ಬೇರೆ ಹಸಿತ ಇದೇ ಬೇಗ ಅಗೋ ಅಂತದ್ದು ಮಾಡ್ಬೇಕು ಅಂತ ಅಂಗಡಿಗೆ ಹೋಗಿ 1 ಕೆ ಜಿ ಚಪಾತಿ ಕೊಡಿ ಅಂದೇ ಪಾಪ ಶೆಟ್ಟಿಗೆ ಬೆಳಗ್ಗೆ ಬೆಳಗ್ಗೆ ತಲೆ ಕೆಟ್ಟೋಯ್ತು ಅನಿಸುತ್ತೆ ನನ್ನ ಮಾತು ಕೇಳಿ ಆಮೇಲೆ ನಾನೇ ಸಾರೀ ಸಾರೀ ಚಪಾತಿ ಹಿಟ್ಟು ಕೊಡಿ 1 ಕೆ ಜಿ ಅಂದೇ ಆ ಆಸಾಮಿ ಏನು ಮಾತಾಡದನೆ ಕೊಟ್ರು ನಾನು ತಗೊಂಡು ಬಂದೆ ಸರಿ ಈಗ ಚಪಾತಿ ಮಾಡಬೇಕಲ ಅಂತ ಸ್ವಲ್ಪ ಚಪಾತಿ ಹಿಟ್ನ ಪಾತ್ರೆಗೆ ಹಾಕಿ ನೀರು ಹಾಕಿ ಕಲಿಸಿದೆ ನೀರು ಸ್ವಲ್ಪ ಜಾಸ್ತಿ ಆಯ್ತು ಅಂತ ಮತ್ತೆ ಹಿಟ್ಟು ಹಾಕ್ದೆ ಮತ್ತೆ ಛೆ.. ಛೆ .. ಹಿಟ್ಟು ಫುಲ್ ಗಟ್ಟಿ ಆಯ್ತು ಅಂತ ಮತ್ತೆ ನೀರು ಹಾಕಿದೆ ಹೀಗೆ ಮಾಡ್ತಾ ಮಾಡ್ತಾ ಟೈಮ್ ನೋಡಿದೆ ಆಗಲೇ 9:30 ಆಗಿತ್ತು ಹಿಟ್ನ ಚಾಕು ತಗೊಂಡು ಪೀಸ್ ಪೀಸ್ ಮಾಡಿದೆ ಅದು ೯ ಪೀಸ್ ಆಯ್ತು ಅರೆ ಒಂಬತ್ತು ಆಯ್ತಲ್ಲ ಅಂತ ಎಲ್ಲದರಲ್ಲೂ ಸ್ವಲ್ಪ ಸ್ವಲ್ಪ ತಗೊಂಡು ಮತ್ತೊಂದು ಪೀಸ್ ಮಾಡಿ ಅಲ್ಲಿಗೆ ಹತ್ತು ಪೀಸ್ ಮಾಡಿದೆ ಈಗ ಮುಂದಿನ ಕಾರ್ಯ ಪೀಸ್  ಗಳನ್ನೆಲ್ಲ ಉದ್ದುಬೇಕು ಉದ್ದೋಕೆ ಲಟ್ಟಣಿಕೆ ಮಣಿ ತಗೊಂಡೋ ಕೆಳಗಡೆ ಒಂದು ಯಾವೊದೋ ನ್ಯೂಸ್ ಪೇಪರ್  ತಗೊಂಡು ಅಗಲವಾಗಿ ಹಾಸಿ ಅದರಮೇಲೆ ಚಪಾತಿ ಮಣೆ ಇಟ್ಟೆ ( ಅಮ್ಮ ಚಪಾತಿ ಉದ್ದುವಾಗ ಚಪಾತಿ ಹಿಟ್ಟು ನೆಲದಲ್ಲಿ ಬಿಳುತ್ತೆ ಅಂತ ಆ ಥರ ಪೇಪರ್ ಹಾಕ್ತ ಇದ್ರೂ ಅದನ್ನ ನೋಡಿದ್ದ ನೆನಪು ) ಹ್ಮಂ ಮೊಬೈಲ್ ನಲ್ಲಿ ಮ್ಯೂಸಿಕ್ ಹಾಕಿದ್ದೆ ಪಲ್ಲವಿ ಅವರು " ನೀ ಇಲ್ಲದೆ ನನಗೇನಿದೆ " ಅಂತ ಹಾಡ್ತಾ ಇದ್ರೂ ಕೇಳೋಕೆ ತುಂಬಾ ಚನ್ನಾಗಿತ್ತು ಕೇಳ್ತಾ ಕೇಳ್ತಾ ಚಪಾತಿ ಉದ್ದೋಕೆ ಶುರು ಮಾಡಿದೆ. ಅವಾಗ ಟೈಮ್  ಹತ್ತು ಘಂಟೆಗೆ ಹತ್ತು ನಿಮಿಷ ಕಮ್ಮಿ ಇತ್ತು. 

ನಿಮ್ಮಾಣೆ ಕಣ್ರೀ ನಾನು ಭೂ ಪಟದಲ್ಲಿ ಯಾವ ಯಾವ ದೇಶ ಯಾವ ಯಾವ ಶೇಪ್ ನಲ್ಲಿ ಇವೆ ಅಂತ ಗೊತ್ತಿರ್ಲಿಲ್ಲ (ಭಾರತ ಶ್ರೀಲಂಕ ಬಿಟ್ಟು ) ಅದೇನು ನನ್ನ ಭಾಗ್ಯನೋ ಏನು ನಾನು ಉದ್ದಿದ ಮೊದಲ ಚಪಾತಿಯಲ್ಲಿ ಪಾಕಿಸ್ತಾನ ಎರಡನೇ ಚಪಾತಿಯಲ್ಲಿ  ಆಫ್ಘಾನಿಸ್ತಾನ ಇನ್ನೊಂದರಲ್ಲಿ ಬಾಂಗ್ಲಾದೇಶ ಮತ್ತೊಂದರಲ್ಲಿ ಅಂತು ಬಿಡಿ100% ಶ್ರೀಲಂಕಾನೇ ಆಗಿತ್ತು ಇದನೆಲ್ಲ ನೋಡಿ ಜೀವನ ಪಾವನ ಆಯ್ತು ಅನ್ಕೊಂಡೆ   ಅವನ್ನೆಲ್ಲ  ಉದ್ದಿ ಉದ್ದಿ ಒಂದು ತಟ್ಟೆ ಮೇಲೆ ಹಾಕ್ತ ಇದ್ದೆ ಅವೋ ಒಂದ್ರು ಮೇಲೆ ಒಂದು ಒಂದ್ರು ಮೇಲೆ ಒಂದು ಹಾಕಿದ್ರಿಂದ ಅಂಟಿಕೊಂಡಗ್ಗೆ ಇದ್ವು  ನಾನು ಅಷ್ಟು ಗಮನಿಸಿರಲಿಲ್ಲ. ಕಣ್ಣು ಮತ್ತೆ ಟೈಮ್ ಕಡೆ ಹೋಯ್ತು ಆಗಲೇ 10:30 ಆಗಿತ್ತು ಹೊಟ್ಟೆ ಹಸಿವು ಜಾಸ್ತಿ ಆಗ್ತಾನೆ ಇತ್ತು.

     ಮುಂದೆ ಉದ್ದಿದ್ದ ಚಪಾತಿಗಳನ್ನ ಹಂಚಿನಲ್ಲಿ ಬೇಯಿಸಬೇಕು ಅಂತ ಹಂಚು ಗ್ಯಾಸ್ ಮೇಲೆ ಇಟ್ಟು ಒಂದೊಂದೇ ಚಪಾತಿ ಬೇಯಿಸೋಕೆ ತಯಾರಾದೆ ಚಮಚದಿಂದ ಹಂಚ ಮೇಲೆ ಎಣ್ಣೆ ಹಾಕೋದು ಕೈಗೆ ಸಿಕ್ಕ ದೇಶಗಳನ್ನ ಹಂಚ ಮೇಲೆ ಹಾಕಿ ಬೇಯಿಸ್ತ ಹೋದೆ ಸ್ವಲ್ಪ ಹೊತ್ತಿಗೆ ವಾಸನೆ ಬರ್ತಾ ಇತ್ತು ಅವಾಗ ನನಗೆ ಅನಿಸ್ತು ಈಗ ಚಪಾತಿ ಬೆಂದಿದೆ ತಿರುಗಿಸಿ ಹಾಕಬೇಕು ಅಂತ ತಿರುಗಿಸಿ ಹಾಕ್ದೆ...... ಏನು ಜಾದು ಮಾಡ್ತು ರೀ ಆ ಹಂಚು ಬಿಳಿ ಇದ್ದ ಚಪಾತಿನೆಲ್ಲಾ ನನ್ನ ಕೂದ್ಲುಗಿಂತ ಕಪ್ಪುಗೆ ಮಾಡಿಬಿಟ್ಟಿತ್ತು ಅದು ಕಪ್ಪು ಆಗೋದಿರ್ಲಿ ಅವನೆಲ್ಲ ಬೇಯಿಸೋ ಅಷ್ಟರಲ್ಲಿ ನನ್ನ ಕೈ ಎಷ್ಟು ಸಲ ಸುಟ್ಟು ಹೋಗಿತ್ತೋ ಲೆಕ್ಕ ಇಲ್ಲಾ ಹಸಿವು ಬೇರೆ ತಾಳೋಕೆ ಆಗ್ತಾ ಇರ್ಲಿಲ್ಲ ಮತ್ತೆ ಟೈಮ್  ನೋಡಿಕೊಂಡೆ ಆಗಲೇ ಸರಿಯಾಗಿ ೧೨.೦೦ ಆಗಿತ್ತು ಮೊಬೈಲ್ ನಲ್ಲಿ "ಆಹಾ ಭಾಗ್ಯವೇ ಇದು ಎಂತ ಸಮಯವೂ" ಅಶ್ವಥ್ ಅವರು ಹಾಡ್ತಾ ಇದ್ರೂ ನನ್ನ ಭಾಗ್ಯದ ಕಡೆ ಒಮ್ಮೆ ಯೋಚಿಸಿ ಇದೆಲ್ಲ ಬೇಕಾಗಿತ್ತಾ ನನಗೆ ಹೋಟೆಲ್ ಗೆ ಹೋಗಿದ್ರೆ ಆರಾಮಾಗಿ ತಿಂದು ಬರ್ತಾ ಇದ್ದೆ ಅನ್ಕೊಂಡೆ. 

ಅಂತು ಇಂತೂ ಚಪಾತಿ ಎಲ್ಲಾ ಬೇಯಿಸಿ ಹಂಚು ಕೆಳಗಡೆ ಇಟ್ಟು ಗ್ಯಾಸ್ ಆಫ್ ಮಾಡಿದೆ. ಚಪಾತಿ ಉದ್ದು ಮಣಿ ಲಟ್ಟಣಿಕೆ ಅಲ್ಲೇ ಬಿಟ್ಟಿದ್ದೆ ಎತ್ತಿ ಸೈಡ್ ನಲ್ಲಿ ಇಡೋಣ ಅಂತ ಮಣಿ ಲಟ್ಟಣಿಕೆನ ತಗ್ದು ಮೇಲೆ ಇಟ್ಟಿ ಮಣೆ  ಕೆಳಗಡೆ ಪೇಪರ್ ಹಸಿದ್ದೆ ಅದನ್ನು ತಗೆಯೋಣ ಅಂತ ಕೈ ಹಾಕ್ದೆ ... !  ಇದೊಂದು ಕಡಿಮೆ ಆಗಿತ್ತು ನನ್ನ ಭಾಗ್ಯಕ್ಕೆ ಆ ಪೇಪರ್ ಕೈ ನಲ್ಲಿ ತಗೊಂಡು ನೋಡ್ತೀನಿ ಶ್ರೀ ಶ್ರೀ ಶ್ರೀ ನಿತ್ಯಾನಂದ ಸ್ವಾಮಿಗಳು ಫ್ರಂಟ್ ಪೇಜ್ ನಲ್ಲಿ ಯಾರಿಗೋ ಆಶೀರ್ವಾದ ಮಾಡೋ ಸ್ಟೈಲ್ ನಲ್ಲಿ ನಿಂತಿದ್ರು ಅಲ್ಲಿಗೆ ನನ್ನ ಜನ್ಮ ಫುಲ್ ಪಾವನವಾಯ್ತು ಅನ್ಕೊಂಡು ಅದನ್ನ ಮುದುರಿ ಕಸದ ಡಬ್ಬಕ್ಕೆ ಹಾಕಿ..... ಇನ್ನೇನು ಎಲ್ಲಾ ಮುಗಿತು ಚಪಾತಿ ತಿನ್ನೋಣ ಅಂತ ಪ್ಲೇಟ್ ಗೆ ಚಪಾತಿ ಹಾಕೊಂಡೆ ಆಮೇಲೆ ಅನಿಸ್ತು ನನಗೆ "ಮಂಜಾ ನೀ ತುಸು ನೀರಲ್ಲಿ ಮುಳುಗಿಲ್ಲ ಬರೋಬ್ಬರಿ ಸಮುದ್ರದಲ್ಲೇ ಮುಳುಗಿದಿಯ ಚಪಾತಿ ಜೊತೆ ತಿನ್ನೋಕೆ ಏನಿದೆ ಅಂತ ಚಪಾತಿ ಮಾಡಿದಿಯ ಅಮ್ಮ ಕಳಿಸಿದ್ದ ಚಟ್ನಿ ಪುಡಿ ಫುಲ್ ಖಾಲಿ ಆಗಿದೆ... ಅಲ್ಲಿಗೆ ಆಗ್ಲೇ ೧೨.೨೦ ಆಗಿತ್ತು .  ಅಂಗಡಿಗೆ ಹೋಗಿ ಬಾಳೆ ಹಣ್ಣೋ ಇಲ್ಲಾ ಕಿಸ್ಸನ್ ಜಾಮೋ ತಂದು ತಿನ್ನೋಣ ಅಂತ ಮತ್ತೆ ಹೊರಗಡೆ ಹೋದೆ ನನ್ನ ಗಮನ ಮತ್ತೆ ಹೋಟೆಲ್ ಕಡೆ ಹೋಯ್ತು ಅಲ್ಲಾ ಹೋಟೆಲ್ ಗೆ ಹೋಗಿದ್ರೆ ಚಪಾತಿ ಜೊತೆ ಚಟ್ನಿ ಇಲ್ಲಾ ಪಲ್ಯ ಏನಾದ್ರು ಕೊಡ್ತಾರೆ ನಾನು ಯಾಕೆ ಪಲ್ಯ ಮಾಡ್ಕೋ ಬಾರ್ದು ಅಂತ ಅನ್ಕೊಳ್ತಾ ಇರುವಾಗ್ಲೇ ಗಾಡಿಯಲ್ಲಿ ಒಬ್ಬ ಅವರೆಕಾಯಿ.... ಅವರೆಕಾಯಿ..... ಅಂತ ಕೂಗ್ತಾ ಬರ್ತಾ ಇದ್ದ ಸರಿ ಅವರೆಕಾಯಿ ಪಲ್ಯ ಮಾಡೋಣ ಅಂತ ಆತನ ಹತ್ರ ಹೋಗಿ ೧ ಕಿಲೋ ಅವರೆಕಾಯಿ ತಗೊಂಡು ರೂಮ್ ಗೆ ಬಂದೆ, ನನಗೆ ಬೆಳಗ್ಗೆ ಯಿಂದ ಎಷ್ಟು ಹೊಟ್ಟೆ ಹಸಿದ್ರು ಸಮಾಧಾನದಿಂದ ಇದ್ದೆ ಕಣ್ರೀ ಈ ಅವರೆಕಾಯಿ ಯಾವಾಗ ತಗೊಂಡು ಬಂದನೋ ಅವಗಿಂದ ನನ್ನ ಮೇಲೆ ನನಗೆ ಸಿಕ್ಕಪಟ್ಟೆ ಕೋಪ ಬಂತು ಯಾಕೆ ಅಂತ ಗೊತ್ತ ನಾ ತಂದಿದ್ದು  ಅವರೆಕಾಯಿನ ಅದನ್ನ ಸಿಪ್ಪೆ ಬಿಡಿಸಿ ಕಾಳು ಹೊರಗೆ ತೆಗಿಬೇಕಿತ್ತು ಈಗಲೇ ಟೈಮ್ ಇಷ್ಟೊಂದು ಆಗಿದೆ ಇನ್ನು ಇದನೆಲ್ಲ ಒಂದೊಂದೇ ಬಿಡಿಸಿ ಬಿಡಿಸಿ ಪಲ್ಯ ಮಾಡೋದ್ರಲ್ಲಿ ನನ್ನ ಕತೆ ಮುಗಿತು ಅನ್ಕೊಂಡೆ.

ನಾನು ಒಂಥರಾ ಲೂಸ್ ಮಾಡಬೇಕು ಅಂದಿದ್ದನ್ನ ಮಾಡೋತನಕ ಬಿಡೋನಲ್ಲ ತ್ರಿವಿಕ್ರಮನಥರ "ಛಲ ಬಿಡದ ಮಲ್ಲ " ಅಂತಾರಲ್ಲ ಹಾಗೆ ನಿಜ ಹೇಳ್ಬೇಕು ಅಂದ್ರೆ ನನಗೆ ಸರಿಯಾಗಿ ಅನ್ನನೆ ಮಾಡೋಕೆ ಬರೋದಿಲ್ಲ ಅಂತದ್ರಲ್ಲಿ ಚಪಾತಿ ಮಾಡಿ ಪಲ್ಯ ಮಾಡ್ತಾ ಇದೀನಿ ಅಂತ ನನಗೆ ನಾನೇ ಬೆನ್ನು ತಟ್ಟಿಕೊಂಡೆ.

ಹೇಗಾದ್ರು ಮಾಡಿ ಅವರೆಕಾಯಿ ಪಲ್ಯ ಮಾಡಬೇಕಲ್ಲ ಹೇಗೆ ಮಾಡೋದು ಅಂತ ಅಮ್ಮನಿಗೆ ಕಾಲ್ ಮಾಡಿ ಕೇಳ್ದೆ 
ನಾನು :-  ಅಮ್ಮ ಅವರೆಕಾಯಿ ಪಲ್ಯ ಮಾಡ್ತಾ ಇದೀನಿ ಹೆಂಗೆ ಮಾಡೋದು 

ಅಮ್ಮ :-  ನನ್ನ ಯಾಕೆ ಕೇಳ್ತಿಯ ನಿನ್ನ ಕುಟ್ ಕುಟ್ ಫ್ರೆಂಡ್ಸ್ ಹುಡುಗಿರ್ನ ಕೇಳಬೇಕಿತ್ತು ಹೇಳಿಕೊಡ್ತ ಇದ್ರೂ ( ಕುಟ್ ಕುಟ್ ಅಂದ್ರೆ ಆರ್ಕುಟ್ ಫ್ರೆಂಡ್ಸ್ ಅಂತ, ಅಮ್ಮ  ಹಾಗೆ ಹೇಳೋಕು ಒಂದು  ಕಾರಣ ಇದೇ ಇದೇ ಥರ ನಾನು ಅಡುಗೆ ಮಾಡ್ಬೇಕು ಅಂತ ನನ್ನ ಆರ್ಕುಟ್ ಗೆಳತಿಗೆ ಕಾಲ್ ಮಾಡಿ ಕೇಳಿ ಹೇಗೆ ಮಾಡೋದು ಅಂತ ಕಲ್ತಿದ್ದೇ ಅದನ್ನ ಅಮ್ಮನಿಗೆ ಹೇಳಿದ್ದೆ ಅದಕ್ಕೆ ಹಾಗೆ ಹೇಳಿದ್ರು ) ನಾನೇನು ಮಾತಾಡಲಿಲ್ಲ ಸುಮ್ನೆ ಇದ್ದೆ ಅಷ್ಟರಲ್ಲೇ ಅಮ್ಮನೇ ಹೇಗೆ ಮಾಡ್ಬೇಕು ಅಂತ ಹೇಳಿ, ಊಟ ಮಾಡಿ ಮತ್ತೆ ಕಾಲ್ ಮಾಡು ಅಂತನು ಹೇಳಿದ್ರು ಆ ಥರ ಯಾಕೆ ಹೇಳಿದರೋ ಗೊತ್ತಿಲ್ಲ ನಾನು ಹ್ಮಂ ಹ್ಮಂ ಅಂದು ಕಾಲ್ ಕಟ್ ಮಾಡಿ ಟೈಮ್ ನೋಡಿದೆ 1 ಘಂಟೆ ಇನ್ನು ಆಗಿರಲಿಲ್ಲ ಅನ್ನೋ ಸಮಾಧಾನ ಇನ್ನು ಹದಿನೈದು ನಿಮಿಷ ಕಳುದ್ರೆ 1 ಘಂಟೆ ಆಗುತ್ತೆ ಅನ್ನೋ ಆತಂಕದಲ್ಲೇ ಇದ್ದೆ ನನ್ನ ಮೊಬೈಲ್ ನಲ್ಲಿ "ಬದುಕು ಮಾಯೆಯ ಮಾಟ" ಅನ್ನೋ ಹಾಡು ಅಶ್ವಥ್ ಅವರು ಹಾಡ್ತಾನೆ ಇದ್ರೂ ನಾನು ಕೇಳ್ತಾ ಕೇಳ್ತಾ ಅವರೆಕಾಯಿಗಳನ್ನ ಬಿಡುಸ್ತ ಹೋದೆ ಬೆರಳುಗಳಿಗೆ ಸ್ವಲ್ಪ ಕಷ್ಟ ಆದ್ರು ಕಷ್ಟ ಪಟ್ಟು ಬಿಡಿಸಿದೆ.

ಮೇಲೆ ಕೈಗೆ ಈರುಳ್ಳಿ ತಗೊಂಡೆ ಹೆಚ್ಚೋಕೆ ತಯಾರಾದೆ ಒಂದೇ ಒಂದು ಈರುಳ್ಳಿ ಅರ್ಧ ಭಾಗ ಮಾಡಿದ್ದು ಅಸ್ಟೇ ಕಣ್ರೀ ಅಷ್ಟರಲ್ಲಿ ನನ್ನ ಕಣ್ಣುಗಳು ಧಾರಾಕಾರವಾಗಿ ಮಳೆ ಥರ ಕಣ್ಣಿರು ಸುರುಸ್ತ ಇತ್ತು  ಅಶ್ವಥ್ ಅವರಿಗೂ ನನ್ನ ಪಾಡು ನೋಡೋಕೆ ಆಗದೆ "ಆಕಾಶ ಬಿಕ್ಕುತ್ತಿದೆ" ಅಂತ ಹಾಡು ಚೇಂಜ್ ಮಾಡಿ ಬಿಟ್ರು  ನಾನು ಹಾಗೋ ಹೀಗೋ ಎಲ್ಲಾ ಹೆಚ್ಚಿಬಿಟ್ಟು ಅಮ್ಮ ಹೇಳಿದ ಹಾಗೆ ಮಾಡ್ತಾ ಹೋದೆ ಅಲ್ಲಿಗೆ ಪಲ್ಯ ತಯಾರ್ ಆಯ್ತು ಟೈಮ್ ಆಗಲೇ 1:30 ಸರಿಯಾಗಿ ಆಗಿತ್ತು ಅಬ್ಬಾ ಎಲ್ಲಾ ಮುಗಿತು ಇನ್ನೇನು ಊಟ ಮಾಡೋಣ ಅಂತ ತಟ್ಟೆಗೆ ಚಪಾತಿ ಹಾಕೊಂಡು ಪಲ್ಯ ಹಾಕೊಂಡು ಇನ್ನೇನು ತಿನ್ನಬೇಕು ಅನ್ನೋ ಅಷ್ಟ್ರಲ್ಲಿ ಅಮ್ಮ ಹೇಳಿದ್ದ ಮಾತು ನೆನಪಾಯ್ತು "ಊಟ ಮಾಡಿ ಮತ್ತೆ ಕಾಲ್ ಮಾಡು...!" ಯಾಕೋ ಸ್ವಲ್ಪ ಭಯ ಆಯ್ತು ಅದ್ರು ಏನು ಆಗಿದ್ದು ಅಗ್ಲಿಯ ಅಂತ ತುತ್ತು ಬಾಯಿಯಲ್ಲಿ ಇಟ್ಟೆ ಸಿಕ್ಕಾಪಟ್ಟೆ ಖಾರ ಸ್ವಲ್ಪನು ಉಪ್ಪು ಇರ್ಲಿಲ್ಲ ಅಡುಗೆ ಮಾಡೋ ಸಡಗರದಲ್ಲಿ ಉಪ್ಪು ಹಾಕೋದೇ ಮರ್ತಿದ್ದೆ. ಹೇಗೋ ಊಟ ಮಾಡಿ ಮೇಲೆ ಎದ್ದು ತಟ್ಟೆನೆಲ್ಲ ಸೈಡ್ನಲ್ಲಿ ಇಟ್ಟೆ.. ಅಷ್ಟ್ರಲ್ಲಿ  ನಿದ್ದೆ ಎಳಿತ ಇತ್ತು ಹಾಗೆ ಹಾಸಿಗೆ ಮೇಲೆ ಮಲಕೊಂಡೆ...! 

ಎಷ್ಟೋ ಹೊತ್ತಾದ್ ಮೇಲೆ ಕಣ್ಣು ಬಿಟ್ಟೆ ಟೈಮ್ ನೋಡಿಕೊಂಡೆ ಆಗಲೇ ಸಂಜೆ ಆಗಿತ್ತು ಅಬ್ಬಾ ಬಡ ಜೀವ ಬದುಕಿದೆ ಇನ್ನು ಅನ್ಕೊಂಡು ಮೇಲೆ ಎದ್ದೆ ಎದ್ರುಗಡೆ ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿಬೇಕು ಅನಿಸಿದರು ಬೆಳಗ್ಗೆ ಒನ್ ಟೈಮ್ ಮುಗಿದಿದ್ಕೆ ಜೀವನ ಪೂರ್ತಿ ಮರೆದೆ ಇರೋ ಅನುಭವಾಗಿದೆ ಅನ್ಕೊಂಡು ಮುಗಿಲಿಲ್ಲ 

ಗ್ಯಾಸ್ ಪಕ್ಕ ಇದ್ದ ಲಟ್ಟಣಿಕೆ, ಮಣಿ ಮತ್ತೆ ಉಳಿದ್ದಿದ ಚಪಾತಿಗಳು ನನ್ನ ನೋಡಿ ನಗ್ತಾ ಇವೆ ಅನಿಸಿದರು ನನಗು ಅವಕ್ಕೂ ಸಂಬಂಧನೆ ಇಲ್ಲಾ ಅನ್ಕೊಂಡು ಮೊಬೈಲ್ ನಲ್ಲಿ ಸಾಂಗ್ ಹಾಕ್ದೆ ಪಲ್ಲವಿ ಮೇಡಂ ಮತ್ತೆ ಇಂಪಾಗಿ ಹಾಡೋಕೆ ಶುರು ಮಾಡಿದ್ರು "ನೀನಿಲ್ಲದೆ ನನಗೇನಿದೆ ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ"



ನಿಮ್ಮ ಹುಡುಗ
?ದೊಡ್ಡಮನಿ.ಮಂಜು
        97424 95837