Wednesday 20 January 2010
Monday 18 January 2010
ಪ್ರೀತಿಕೊಂದ ಕೊಲೆ ಗಾತಿ
"ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಪ್ರೀತಿಕೊಂದ ಕೊಲೆ ಗಾತಿ ನಾ ಹೇಳೋ ಕತೆಗೆ ಸ್ಪೂರ್ತಿ"
ಪ್ರೀಯ ಓದುಗರೇ ಈ ಮೇಲಿನ ಸಾಲುಗಳನ್ನ ಕೇಳಿದ್ದೀರಾ ಅಲ್ವ !
ಆ ಸಾಲುಗಳು ಹೇಳೋವಂತೆ ಒಂದು ರೋಮಾಂಚನಕಾರಿ ಪ್ರೇಮ ಕತೆನಾ ಇವತ್ತು ನಿಮ್ಮ ಮುಂದೆ ಇಡ್ತಾ ಇದೀನಿ please hold your brain
ಒಂದಂತ್ತು ಸತ್ಯ ಈ ಕತೇನಾ ಓದಿದಮೇಲೆ ಕಟ್ಟ ಕಡೆಯದಾಗಿ ನಿಮ್ಮನ್ನ ಕಾಡೋ ಪ್ರಶ್ನೆ ಒಂದೇ ಹೀಗೂ ಉಂಟೆ . . . ?
"ಈ ಕತೆಯನ್ನ ಓದುವುದರಿಂದ ನಿಮ್ಮ ಸಮಯ ಹಾಳಾಗುತ್ತೆ ಅಂದುಕೊಳ್ಳುವವರು ದಯವಿಟ್ಟು ಇಲ್ಲಿಗೆ ಓದುವುದನ್ನ ನಿಲ್ಲಿಸಿ"
ಕತೆ ಈಗ ಪ್ರಾರಂಭ :-
ಅವನು ತುಂಬಾ ಶ್ರೀಮಂತ ಮನೆಯ ಹುಡುಗ ರಾಜ್ ಅಂತ ಅವನಿಗೆ ಅಪ್ಪಿತಪ್ಪಿ ರೋಜ ಅನ್ನೋ ಹುಡುಗಿ ಪರಿಚಯ ಆಗ್ತಾಳೆ ಆ ಪರಿಚಯ ಸ್ನೇಹ ಆಗುತ್ತೆ ಆ ಸ್ನೇಹ ಕೊನೆಗೆ ಪ್ರೀತಿಯಾಗುತ್ತೆ ರಾಜ್ ಅವಳನ್ನ ಎಷ್ಟು ಪ್ರೀತಿ ಮಾಡ್ತಾ ಇದ್ದ ಅಂದ್ರೆ ಒಂದು ನಿಮಿಷನು ಅವಳನ್ನ ಬಿಟ್ಟು ಇರ್ತ ಇರ್ಲಿಲ್ಲ, ಅವಳು ಸಹ ಅಷ್ಟೇ ರಾಜ್ ಇಲ್ದೆ ನನಗೆ ಲೋಕಾನೆ ಇಲ್ಲಾ ಅಂತಿದ್ಲು.
ಇವರ ಪ್ರೀತಿಗೆ ಮನೆಯವರು ಒಪ್ಪಿ ಒಂದು ಒಳ್ಳೆ ದಿನನೋಡ್ಕೊಂಡು ಮಧುವೆ ಮಾಡ್ಬಿಡ್ತಾರೆ ಅದು ಬೆಟ್ಟದಮೇಲೆ ಇರೋ ಶ್ರೀ ರಾಮನ ದೇವಸ್ಥಾನದಲ್ಲಿ.
ಸ್ಟೋರಿಲಿ ಟ್ವಿಸ್ಟ್
ಡಿಯರ್ ಫ್ರೆಂಡ್ಸ್ ರೋಜ ಪ್ರೀತಿ ಮಾಡಿದ್ದು ರಾಜ್ ನಾ ಅಲ್ಲಾ ಅವನ ಜೊತೆ ಇರೋ ಅವನ ಕಾರು ಬಂಗಲೆ, ಅವನ ಆಸ್ತಿನ ಅಂತ ಗೊತ್ತಾಗೋಕೆ ತುಂಬಾ ದಿನಗಳು ಬೇಕಾಗಲಿಲ್ಲ ,
ಡಿಯರ್ ಫ್ರೆಂಡ್ಸ್ ರೋಜ ಪ್ರೀತಿ ಅನ್ನೋ ನಾಟಕ ಮಾಡಿ ರಾಜ್ ನ ಯಾರು ಇಲ್ಲದ ಸಮಯನೋಡ್ಕೊಂಡು ಬೆಟ್ಟದ ತುದಿಗೆ ಕರ್ಕೊಂಡು ಹೋಗ್ತಾಳೆ ಅವನು ಅವಳನ್ನ ನೋಡ್ತಾ ಮಾತಾಡ್ತಾ ಮೈ ಮರೆತಾಗ ರೋಜ ಚೋರಿಯಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿ ಸತ್ತ ರಾಜ್ ನ ಹೆಣನ ಬೆಟ್ಟದ ತುದಿ ಇಂದ ತಳ್ಳಿ ಕಾಲು ಜಾರಿ ಬಿದ್ದ ಅಂತ ಎಲ್ಲರನ್ನು ನಂಬಿಸಿ ಬಿಡ್ತಾಳೆ ಪಾಪ ಅಷ್ಟೊಂದು ದೊಡ್ಡ ಬೆಟ್ಟದಲ್ಲಿ ಅವನ ಹೆಣ ಹುಡುಕೋಕೆ ಪೊಲೀಸರು ತುಂಬಾ ಸಾಹಸ ಪಡ್ತಾರೆ ಕಡೆಗೆ ದೊಡ್ಡ ಅರಣ್ಯ ಆದ್ರಿಂದ ಈಗಾಗಲೇ ಪ್ರಾಣಿಗಳು ದೇಹನ ತಿಂದು ಬಿಟ್ಟಿರ್ತವೆ ಅಂತ ತಮ್ಮ ಹುಡುಕಾಟ ನಿಲ್ಲಿಸಿ ಬಿಡ್ತಾರೆ.
ಡಿಯರ್ ಫ್ರೆಂಡ್ ಕಳ್ಳನ ಮನಸ್ಸು ಹುಳ್ಳು ಹುಳ್ಳುಗೆ ಅನ್ನೋಹಾಗೆ ರೋಜಳಿಗೆ ಕೊಲೆ ಮಾಡುವಾಗ ಉಟ್ಟಿದ್ದ ಅವಳ ಬಿಳಿ ಸೀರಿಯಾ ಮೇಲೆ ರಕ್ತದ ಕಲೆಗಳು ಹಾಗೆ ಇರ್ತವೆ ಯಾವ ಸೋಪ್ ಹಾಕಿ ತೊಳೋದ್ರು ಕಲೆ ಹೋಗಿರೋದಿಲ್ಲ ಕೊನೆಗೆ ಮನೇಲಿ ಕೆಲಸ ಮಾಡೋ ಮಂಜನಿಗೆ ಯಾವದಾದ್ರು ಒಳ್ಳೆ ಸೋಪ್ ಇದ್ರೆ ಹೇಳೋ ನನ್ನ ಸೀರೆ ಮೇಲೆ ತುಂಬಾ ಕಲೆಗಳಿವೆ ಅಂತ ಕೇಳ್ತಾಳೆ ಡಿಯರ್ ಫ್ರೆಂಡ್ ಸ್ಟೋರಿಲಿ ಟ್ವಿಸ್ಟ್ ಶುರುವಾಗಿದ್ದೆ ಇಲ್ಲಿಂದ,
ಮಂಜ ತಕ್ಷಣ ಒಂದು ಉಪಾಯಕೊಟ್ಟ ಅದು ಏನಂದ್ರೆ
"ಶಶಿ ಇದ್ದಲ್ಲಿ ಕೊಳೆಯ ಮಾತೆಲ್ಲಿ"
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
ಕಟ್ಟ ಕಡೆಯದಾಗಿ ನಿಮ್ಮನ್ನ ಕಾಡೋ ಪ್ರಶ್ನೆ ಒಂದೇ ಹೀಗೂ ಉಂಟೆ . . . ? ನೋಡಿ ದಾವಣಗೆರೆಯ ಒಂದು ಸೋಪ್ ಪ್ರಚಾರ ಮಾಡೋದಕ್ಕೆ ಮಂಜು ಇಷ್ಟೇಲ್ಲ ಬಿಲ್ಡ್ಅಪ್ ಕೊಡಬೇಕಿತ್ತ !!
Friday 15 January 2010
Subscribe to:
Posts (Atom)