ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday, 4 October 2010

ಗೋವಿಂದನ ಗಾದೆ ಪುರಾಣ ...!





ಪಾತಿ ಕತೆ ಮುಗಿದು ಹೋಯ್ತು ಸರ್ ಬೇರೆಯೇನಾದ್ರು ಬರೀರಿ ಅಂತ ತುಂಬಾ ಫ್ರೆಂಡ್ಸ್ ಮೇಲ್ ಮಾಡಿದ್ರು ಚಾಟ್ ಮಾಡಿದ್ರು ಕಾಲ್ ಮಾಡಿ ಕೂಡ ಹೇಳಿದ್ರು ನಾನು ಅವರಿಗೆಲ್ಲ ತಾಳಿ ತಾಳಿ ಒಂದು ಮೂವತ್ತು ದಿನ ಓಡಲಿ ಆಮೇಲೆ ಏನಾದ್ರು ಬರೆಯೋಣ ಅಂತ ಹೇಳಿ ಸಮಾಧಾನ ಮಾಡಿದ್ದೆ ಈಗ ನೋಡಿ 30 ದಿನ ಆಗಿದೆ ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲಾ ಆದ್ರು ಬರಿಲೇ ಬೇಕು ಅಂತ ಇರೋ ಬರೋ ಎನರ್ಜಿನೆಲ್ಲ ಉಪಯೋಗಿಸಿ ಇದನ್ನ ಬರ್ದಿದೀನಿ ಕಾರಣ ಮೂನ್ನೆ ಯಾರೋ ನನಗೆ ಫೋನ್ ಮಾಡಿ "ಮಲ್ಟಿ ಟ್ಯಾಲೆಂಟ್ ಮಂಜು" ಅಂತ ಬಿರುದು ಕೊಟ್ರು ಅಲ್ದೆ ಯಾರೋ ಒಬ್ರು ಕಾಮೆಂಟ್ಸ್ ಕೊಡ ಹಾಕಿದ್ರು, ಈ ಕಂದಾ, ಮುದ್ದು, ಬಂಗಾರ, ಚಿನ್ನ, ರನ್ನ ಇನ್ನು ಹೇಳ್ಬೇಕು ಅಂದ್ರೆ ಪೊರ್ಕಿ, ಲೂಸು, ಮೆಂಟ್ಲು, ಪೋಲಿ ಅಂತೆಲ್ಲಾ ಕೊಟ್ಟ ಹುಡುಗೀರ ಬಿರುದುಗಳಿಗಿಂತ ಇದ್ಯಾಕೋ ಹಾರ್ಟ್ ಟಚ್ ಮಾಡ್ತು ರೀ ಅದಕ್ಕೆ ಒಂದು ಕಾನ್ಸೆಪ್ಟ್  ತಗೊಂಡು ಈ ಪುರಾಣ ಬರ್ದಿದೀನಿ. ನೀವು ಕಷ್ಟ ಪಟ್ಟಾದರು ಓದಿ ಮುಗಿಯೋ ತನಕ ಬಿಡುಬೇಡಿ ಒಂದೇ ಟೈಮ್ ಓದುಬೇಕು ಗಮನ ಇಟ್ಟು ಓದಿ ಓದುವಾಗ ಎಲ್ಲೂ ನಿಲ್ಲಿಸಬಾರ್ದು ತುಂಬಾ ಹುಷಾರು ಯಾಕಂದ್ರೆ ನಾನು ಒಂದು ನಿಮಗೆ ಪ್ರಶ್ನೆ ಕೇಳ್ತೀನಿ ಜಾಗ್ರತೆ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಇದೆ. 

     ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರಲ್ಲ ಅದು ನಿಜ ಇರ್ಬೇಕು ಕಣ್ರೀ ಆನೆ ನಡೆದದ್ದೇ ದಾರಿ ಅನ್ನೋ ಹಾಗೆ ನಮ್ಮ ಗೋವಿಂದ ನಡೆದದ್ದೇ ದಾರಿ ಯಾರು ಮಾತು ಕೇಳೋನಲ್ಲ ಅವನದೇ ಹಠ...... ಹೀಗಿರುವಾಗ ಕೆಲವೊಬ್ರು ಅವನಿಗೆ ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ ಅಂತ ಬೆನ್ನು ಹಿಂದೇ ಹೇಳ್ತಾ ಇದ್ರೂ ಅವನು ಕೇಳಿದ್ರು ಕೇಳ್ದೆ ಇರೋ ಥರ ಇರ್ತಾ ಇದ್ದಾ . ಯಾಕಂದ್ರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ? ? ? ? 

ಈಗ ನೇರವಾಗಿ ವಿಷಯಕ್ಕೆ ಬರೋಣ ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು ಅಂತ ದೊಡ್ಡವರು ಹೇಳಿದರೆ ಅಲ್ವ  ಅಲ್ದೆ  ಕೈ ಕೆಸರಾದರೆ ಬಾಯಿ ಮೊಸರು ಅಂತ ನಾನು ಚಿಕ್ಕವನಿರುವಾಗ ನಮ್ಮ ಟೀಚರ್ ಹೇಳ್ತಾ ಇದ್ರೂ  ಈಗ ನಮ್ಮ ಗೋವಿಂದ ಓದಿದ್ದು ಆಯ್ತು ಎಲ್ಲಾದ್ರು ಕೆಲಸ ಹುಡುಕೋಣ ಅಂತ ಯೋಚನೆ ಮಾಡ್ತಾ ಕೂತಿದ್ದ   ಅದೇನೋ ಹೇಳ್ತಾರಲ್ಲ ಕೆಟ್ಟು ಪಟ್ಟಣ ಸೇರು ಅಂತ ಆದರೆ ಇವನು ಇನ್ನು ಕೆಟ್ಟು ಹೋಗಿರಲಿಲ್ಲ...! ನೋಡೋಕೆ ಸಾದು ಥರ ಇದ್ದಾ, ತನ್ನ ಊರಲ್ಲಿ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ ಅವನಿಗೆ ಅದಕ್ಕೆ ಬೆಂಗಳೂರಿಗೆ ಹೋಗಿ ಏನಾದ್ರು ಮಾಡೋಣ ಅಂತ ಯೋಚನೆ ಮಾಡ್ತಾ ಇರುವಾಗಲೇ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನೋ ಹಾಗೆ ಹಾಗೋ ಹೀಗೋ ಒಬ್ಬ ಪರಿಚಯ ಆಗಿ ಗೋವಿಂದನ್ನ ಬೆಂಗಳೂರಿಗೆ ಕರ್ಕೊಂಡು ಬಂದ, ಅವ್ನೋ.... ಮಾತು ಬೆಳ್ಳಿ ಮೌನ ಬಂಗಾರ ಥರ ಹೊಸ ಜಾಗ... ಹೊಸ ಫ್ರೆಂಡ್ಸ್.... ಹೇಗೋ ಹೊಂದಿ ಕೊಂಡಿದ್ದ ಬಂದು ಸ್ವಲ್ಪ ದಿನದಲ್ಲೇ ಕೆಲಸ ಸಿಕ್ತು,  ಪಾಲಿಗೆ ಬಂದಿದ್ದು ಪಂಚಾಮೃತ ಅಲ್ವ ಸಿಕ್ಕ ಕೆಲಸ ಸರಿಯಾಗಿ ಮಾಡಿಕೊಂಡು ಹೋಗ್ತಾ ತಿಂಗಳಿಗೆ ಸರಿಯಾಗಿ ಸಂಬಳ ತಗೊಂಡು ಆರಾಮಗಿದ್ದ. ಈ ಬೆಂಗಳೂರ್ ಸಿಟಿಗೆ ಬಂದಮೇಲೆ ಅವನಿಗೆ ದುಡಿಮೆಯೇ ದುಡ್ಡಿನ ತಾಯಿ ಅನ್ನೋದು ಅರಿವಾಯ್ತು, ಅವನಾದ್ರು ಒಂದೇ ಹತ್ರ ಎಷ್ಟು ದಿನ ಅಂತ ಕೆಲಸ ಮಾಡ್ತಾನೆ ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ ಅವಂದು ಆಗಲೇ ಫುಲ್ ಕೆಲಸ ಕಲ್ತಿದ್ದ ನಯಶಾಲಿ ಆದವನು ಜಯಶಾಲಿ ಆದನು ಅಂತ  ಬೇರೆಕಡೆ ಎಲ್ಲೇ ಹೋದ್ರು ಬದುಕ್ತೀನಿ ಅನ್ನೋ ಧೈರ್ಯದಿಂದ ಬೇರೆ ಕೆಲಸಕ್ಕೆ ಸೇರ್ಕೊಂಡ. 

ರವಿ ಕಾಣದನ್ನ ಕವಿ ಕಂಡ ಅನ್ನೋ ಮಾತು ಎಷ್ಟು ನಿಜ ರೀ ಒಂದು ದಿನ ಗೋವಿಂದ ಹೊಟ್ಟೆ ತುಂಬಾ ಊಟ ಮಾಡಿ ಮಲ್ಕೊಂಡಿದ್ದ ರಾತ್ರಿ ಕನಸಲ್ಲಿ ಕಾಜೋಲ್ ಜೊತೆ ಶೂಟಿಂಗ್ ಇತ್ತು  ಐಶ್ವರ್ಯ  ಆಕಡೆ ಇಂದ ಗೋ...ಗೋ....ಗೋ... ಗೋವಿಂದಾ........... ಅಂತ ಓಡಿ ಬರ್ತಾ ಇದ್ಲು ಈ ಕಡೆ ಇಂದ ಗೋವಿಂದ .............ಐಶ್ವರ್ಯ  ಅಂತ ಓಡಿ ಬರ್ತಾ ಇದ್ದ ಇನ್ನೇನು ಇಬ್ರು ಹತ್ರ ಬಂದ್ರು ಬಂದ್ರು ಬಂದೆ ಬಿಟ್ರು ಅನ್ನೋ ಅಷ್ಟರಲ್ಲಿ  ಶಿವ ಪೂಜೆಲಿ ಕರಡಿ ಬಿಟ್ಟಂತೆ  ಅವ್ನ ಫ್ರೆಂಡ್ ಗೋವಿಂದ ಯಾಕೋ ಈ ಥರ ಕೂಗ್ತಾ ಇದೀಯ ಬೆಳಗ್ಗೆ 8 ಘಂಟೆ ಆಯ್ತು ಎದ್ದೇಳೋ ಅಂತ ಎಬ್ಬಿಸಿ ಬಿಟ್ಟ ಕಣ್ರೀ ಪಾಪ ಗೋವಿಂದನ ಕನಸು ಅಲ್ಲಿಗೆ ಮುಕ್ತಯಾ ಆಯ್ತು ಹಿಂಗಾಗಬಾರ್ದಿತ್ತು ಅಲ್ವ !  ಹೋಗ್ಲಿ ಬಿಡಿ ಅದ್ಯಾಕೆ ಈಗ ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು ನೇರ ವಿಷ್ಯಕ್ಕೆ ಬರೋಣ, ಹುಟ್ಟು ಗುಣ ಸುಟ್ರು ಹೋಗೋಲ್ಲ ಅಂತಾರೆ ಅಂತದ್ರಲ್ಲಿ ಈ ಗೋವಿಂದನಿಗೆ  ರಾತ್ರಿ ಮಲ್ಗೊವಾಗ ಒಂದು ಬೀಡಿ ಸೇದೋ ಅಭ್ಯಾಸ ಇತ್ತು ಅವತ್ತೊಂದು ದಿನ ಹೊರಗಡೆ ಹೋಗಿ ಬೀಡಿ ಸೇದೋಣ ಅಂತ ಅನ್ಕೊಂಡ ಆದ್ರೆ ತುಂಬಾ ಮಳೆ ಬರ್ತಾ ಇತ್ತು ಫ್ರೆಂಡ್ಸ್ ಎಲ್ಲಾ ಮಲ್ಕೊಂಡಿರೋದು ನೋಡಿ ತಾನು ಇದ್ದಲ್ಲೇ ಬೀಡಿ ಹಚ್ಚಿಕೊಂಡು ಸೇದುತ್ತ ಕೂತ, ಬೀಡಿ ಹಾಚ್ಚೋವಾಗಿ ಬೆಂಕಿ ಕಡ್ಡಿ ಗೀರಿ ಅದೆಲ್ಲಿ ಎಸೆದ್ನೋ ಏನೋ ಸ್ವಲ್ಪ ಹೊತ್ತಲ್ಲೇ ಇಡಿ ಮನೆಗೆ ಬೆಂಕಿ ಹತ್ತಿ ಹೋಯ್ತು ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸ್ತು ಅನ್ನೊ ಮಾತು ಜೊತೆಗಿದ್ದ ಫ್ರೆಂಡ್ಸ್ ಬಾಯಲ್ಲಿ ಬಂದ್ರು ಯಾರು ಅವನಿಗೆ ಏನು ಅನ್ಲಿಲ್ಲ ಯಾಕಂದ್ರೆ ಅವನನ್ನ ಕೆಡೋಥರ ಮಾಡಿದ್ದೆ ಅವರು. ನಾಯಿ ಬಾಲ ಯಾವತ್ತಿದ್ರೂ ಡೊಂಕು ಅಲ್ವ ಕಡ್ಡಿನ ಗುಡ್ಡ ಮಾಡೋ ಸ್ವಭಾವ ನಮ್ಮ ಗೋವಿಂದಂದು ಪಕ್ಕದ ಮನೆ ಪದ್ಮಕ್ಕನ ಮಗಳು ಕಾಲೇಜ್ ಮುಗಿಸ್ಕೊಂಡು ಬೈಕ್ ನಲ್ಲಿ ಒಬ್ಬ ಹುಡುಗನ ಜೊತೆ ಸುತ್ತೊದನ್ನ ನೋಡಿ ಸೀದಾ ಪದ್ಮಕ್ಕನ ಮನೆಗೆ ಹೋಗಿ ನಿಮ್ಮ ಮಗಳು ಇದಾಳಲ್ಲ ಅವಳು ಅದ್ಯಾರೋ ಹುಡುಗುನ್ ಜೊತೆ ಹಾಗೆ ಹೀಗೆ ಅಂತೆಲ್ಲ ಇಲ್ದೆ ಇರೋದನ್ನೆಲ್ಲ ಹೇಳಿ ಪದ್ಮಕ್ಕನ ಕೈಲಿ ನಾಯಿ ಥರ ಹೊಡಿಸ್ಕೊಂಡಿದ್ದ ಯಾಕಂದ್ರೆ ಪದ್ಮಕ್ಕನ ಮಗಳ ಜೊತೆ ಇದ್ದದ್ದು ಪದ್ಮಕ್ಕನ ಅಳಿಯ ಮಗಳಿಗೆ ಮದುವೆ ಮಾಡಿ ಇನ್ನು 3 ತಿಂಗಳು ಆಗಿರಲಿಲ್ಲ..! ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ ಇವನು ಏನಾದ್ರು ಒಂದು ಮಾಡ್ತಾ ಇರ್ತಾನೆ ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು ನಮ್ಮ ಗೋವಿಂದನಿಗೆ ಹೊಸದಲ್ಲ ಬಿಡಿ.

ಗೋವಿಂದನ ಈ ಆಟಗಳನ್ನ ನೋಡಿ ಬೆಂಗಳೂರು ಬಿಡಿಸಿ ಊರಲ್ಲಿ ಹೊಲ ಗದ್ದೆ ನೋಡ್ಕೊಂಡು ಇರು ಅಂತ ಹೇಳಿ ಅಪ್ಪ ಅಮ್ಮ ಅವನಿಗೆ ಒಂದು ಮದುವೆ ಮಾಡ್ತಾರೆ ಮದುವೆ ಆದ ಸ್ವಲ್ಪ ದಿನದಲ್ಲೇ ಹೆಣ್ಣು ಕೊಟ್ಟ ತಂದೆ ತಾಯಿ ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ ಅಂತ ಗೊತ್ತಾಗುತ್ತೆ ಹೀಗಿರುವಾಗ ಹಬ್ಬಕ್ಕೆ ಅಂತ ಹೆಂಡ್ತಿ ಜೊತೆ ಮಾವನ ಮನೆಗೆ ಹೋದ್ರೆ ಅತ್ತೆ ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಅಂತ ಮನಸ್ಸಲ್ಲೇ ಅನ್ಕೊಂಡು ಸ್ನಾನಕ್ಕೆ ಅಂತ ಬಚ್ಚಲ ಮನೆಗೆ ಕಳಿಸಿದ್ರೆ ತಾನು ಸ್ನಾನ ಮಾಡೋದು ಬಿಟ್ಟು ಹಂಚು ತಗೆದು ಪಕ್ಕದ ಮನೆಯವರು ಸ್ನಾನ ಮಾಡೋದು ನೋಡಿ ಸಿಕ್ಕು ಬಿದ್ದು ಊರೆಲ್ಲ ಸೇರಿ ಹೊಡಿಯೋಕು ಮುಂಚೆ ಹೆಂಡ್ತಿ ಕರ್ಕೊಂಡು ಹೇಳ್ದೆ ಕೇಳ್ದೆ ಊರು ಬಿಟ್ಟು ತನ್ನೂರಿಗೆ ಬಂದಿದ್ದ. ಇವನ ತರ್ಲೆಗಳನ್ನ ನೋಡಿ ನೋಡಿ ಸಾಕಾಗಿದ್ದ ಅವನ ಹೆಂಡ್ತಿಗೆ ಜೀವನ ತಾಳ ತಪ್ಪಿದ ಬಾಳು ತಾಳಲಾರದ ಗೋಳು ಆಗಿತ್ತು.

ಹಂಗು ಹಿಂಗು ಗೋವಿಂದ ಕಷ್ಟ ಪಟ್ಟು ಒಂದು ಮಗುನ ತನ್ನ ಹೆಂಡ್ತಿ ಕೈಗೆ ಕೊಟ್ಟಿದ್ದ. ಅದೋ ಗಂಡು ಮಗು ಆ ಮಗು ಬಗ್ಗೆ ಹೇಳ್ಬೇಕು ಅಂದ್ರೆ ಎಲ್ಲಾ ಗೋವಿಂದನ ಥರಾನೆ ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ ಅನ್ನೋದಕ್ಕೆ ಆ ಮಗುನೆ ಸಾಕು. ಇನ್ನು ನಮ್ಮ ಗೋವಿಂದನ ಕಂಡ್ರೆ  ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅನ್ನೋದನ್ನ ಅವನ ತಂದೆ ತಾಯಿ ಅಲ್ದೆ ಹೆಂಡ್ತಿ ಕೊಡ ನಿಜ ಮಾಡಿ ಬಿಟ್ಟಿದ್ರು ಅವನು ಬದಲಾಗೊಲ್ಲ ಅಂತ ಗೊತ್ತಿದ್ದೇ ಅವರು ಅವನಿಗೆ ಬುದ್ಧಿ ಹೇಳೋಕೆ ಹೋಗ್ತಾ ಇರ್ಲಿಲ್ಲ ಯಾಕಂದ್ರೆ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಏನೆ ಹೇಳಿದ್ರು ಉಪಯೋಗ ಇಲ್ಲಾ ಅಂತ ಸುಮ್ನೆ ಇರ್ತಾ ಇದ್ರೂ. 

ಹೋಗ್ಲಿ ಬಿಡಿ ನಿಮಗ್ಯಾಕೆ  ಆ ಮುಸಿಕಿನೊಳಗೆ ಗುದ್ದಿಸಿಕೊಳ್ಳೋ ಗೋವಿಂದನ ವಿಚಾರ ಓದಿದ್ದು ಆಯ್ತಲ್ಲ ಅವನ ಕಥೆ,  ನಾನು ನಿಮಗೆ ಮೊದ್ಲೇ ಹೇಳಿದ್ದೆ ಒಂದು ಪ್ರಶ್ನೆ ಕೇಳ್ತೀನಿ ಅಂತ ಆ ಟೈಮ್ ಬಂದಿದ್ದೆ ಈಗ ಹೇಳಿ 

1. ಈ ಪುರಾಣದಲ್ಲಿ ಒಟ್ಟು ಎಷ್ಟು ಗಾದೆಗಳು ಇವೆ ?
2. ಇಲ್ಲಿ ಇರುವ ಗಾದೆಗಳಲ್ಲಿ ಅತಿ ಚಿಕ್ಕ ಗಾದೆ ಯಾವ್ದು ?

 ಸರಿಯಾಗಿ ಹೇಳಿದ ಮೊದಲ 3 ಆತ್ಮೀಯರಿಗೆ ಸೂಕ್ತ ಬಹುಮಾನ ಇರುತ್ತೆ ಮರೆಯ ಬೇಡಿ ತ್ವರೆ ಮಾಡಿ ...!






       ನಿಮ್ಮ ಹುಡುಗ

?ದೊಡ್ಡಮನಿ.ಮಂಜು

         97424 95837

Wednesday, 8 September 2010

ಮಂಜು ಹೀಗೇನೆ ..!

ಪಂಚರಂಗಿ ಚಿತ್ರದ "ಲೈಫು ಇಷ್ಟೇನೇ" for a change
"ಮಂಜು ಹೀಗೇನೆ"



Monday, 30 August 2010

ನಾನು ಲಟ್ಟಣಿಕೆ ಮತ್ತೆ ಚಪಾತಿ..!

ದೋ ಭಾನುವಾರ ಶುದ್ಧ ಸೋಮಾರಿಗಳ ವಾರ ನಾನೋ ಮೊದ್ಲೇ ಸೋಮಾರಿ ಘಂಟೆ 11 ಆದ್ರು ಏಳೋ ದಿಲ್ಲ ಅಂತದ್ರಲ್ಲಿ ಮೊನ್ನೆ ಯಾಕೋ ಬೇಗ ಎಚ್ಚರ ಆಯ್ತು ಬೇಗ ಅಂದ್ರೆ ಎಷ್ಟು ಬೇಗ ಗೊತ್ತ ರೀ ಇನ್ನು 9 ಘಂಟೆ ಆಗಿತ್ತು ಛೇ.. ಯಾಕಪ್ಪ ಇಷ್ಟ ಬೇಗ ಎಚ್ಚರ ಆಯ್ತು ಅನ್ಕೊಂಡು ಕಣ್ಣು ಬಿಟ್ಟು ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿದು ಎದ್ದೆ, ಅವತ್ತು ನನ್ನ ಫ್ರೆಂಡ್ ರೂಮ್ ನಲ್ಲಿ ಇರ್ಲಿಲ್ಲ ಬೆಳಗ್ಗೆ ಬೆಳಗ್ಗೆನೇ ಏನೋ ವರ್ಕ್ ಇದೇ ಬರೋದು ಸಂಜೆ ಆಗುತ್ತೆ ಅಂತ ಹೋಗಿದ್ದ ಹೊಟ್ಟೆ ಯಾಕೋ ತುಂಬಾ ಹಸಿತ ಇತ್ತು ಎಲ್ಲಾ ಮುಗಿಸ್ಕೊಂಡು ಕಾಫಿ ಕುಡಿಯೋಣ ಅಂತ ಬೇಕರಿಗೆ ಹೋದೆ ಅಲ್ಲಿಂದ ಕಾಫಿ ಕುಡಿದು ಮತ್ತೆ ರೂಮ್ ಗೆ ಬಂದೆ ಸ್ನಾನ ಮಾಡೋಣ ಅಂತ ನೀರು ಕಾಯೋಕೆ ಇಡೋಣ ಅಂತಿದ್ದೆ ಹೊಟ್ಟೆ ಯಾಕೋ ತುಂಬಾನೇ ಹಸಿತ ಇತ್ತು ಹೋ ಈಗ ಸ್ನಾನ ಮಾಡೋದು ಬೇಡ ಹೋಟೆಲ್ ಗೆ ಹೋಗಿ ಏನಾದ್ರು ತಿಂದು ಬಿಟ್ಟು ಆಮೇಲೆ ಸ್ನಾನ ಮಾಡೋಣ ಅಂತ ರೂಮ್ ಬಿಟ್ಟು ಹೊರಗಡೆ ಬಂದೆ ಅದೇನ್ ತಿಳಿತೋ ಏನೋ ನನ್ನ ಬುದ್ಧಿಗೆ ಅಲ್ಲಾ ಇವತ್ತಾದ್ರೂ ಹೋಟೆಲ್ ಊಟ ಬಿಟ್ಟು ರೂಮ್ ನಲ್ಲೆ ಏನಾದ್ರು ಮಾಡಿಕೊಳ್ಳೋಣ ಅಂತ ಮನಸ್ಸು ಅನಿಸುತ್ತೆ ಅನಿಸಿದ್ಧನ ಮಾಡೋದೇ ಮಂಜು ಸ್ಟೈಲ್ ಅಲ್ವ ..! 

ಸರಿ ಏನ್ ಮಾಡೋದು ಹೊಟ್ಟೆ ಬೇರೆ ಹಸಿತ ಇದೇ ಬೇಗ ಅಗೋ ಅಂತದ್ದು ಮಾಡ್ಬೇಕು ಅಂತ ಅಂಗಡಿಗೆ ಹೋಗಿ 1 ಕೆ ಜಿ ಚಪಾತಿ ಕೊಡಿ ಅಂದೇ ಪಾಪ ಶೆಟ್ಟಿಗೆ ಬೆಳಗ್ಗೆ ಬೆಳಗ್ಗೆ ತಲೆ ಕೆಟ್ಟೋಯ್ತು ಅನಿಸುತ್ತೆ ನನ್ನ ಮಾತು ಕೇಳಿ ಆಮೇಲೆ ನಾನೇ ಸಾರೀ ಸಾರೀ ಚಪಾತಿ ಹಿಟ್ಟು ಕೊಡಿ 1 ಕೆ ಜಿ ಅಂದೇ ಆ ಆಸಾಮಿ ಏನು ಮಾತಾಡದನೆ ಕೊಟ್ರು ನಾನು ತಗೊಂಡು ಬಂದೆ ಸರಿ ಈಗ ಚಪಾತಿ ಮಾಡಬೇಕಲ ಅಂತ ಸ್ವಲ್ಪ ಚಪಾತಿ ಹಿಟ್ನ ಪಾತ್ರೆಗೆ ಹಾಕಿ ನೀರು ಹಾಕಿ ಕಲಿಸಿದೆ ನೀರು ಸ್ವಲ್ಪ ಜಾಸ್ತಿ ಆಯ್ತು ಅಂತ ಮತ್ತೆ ಹಿಟ್ಟು ಹಾಕ್ದೆ ಮತ್ತೆ ಛೆ.. ಛೆ .. ಹಿಟ್ಟು ಫುಲ್ ಗಟ್ಟಿ ಆಯ್ತು ಅಂತ ಮತ್ತೆ ನೀರು ಹಾಕಿದೆ ಹೀಗೆ ಮಾಡ್ತಾ ಮಾಡ್ತಾ ಟೈಮ್ ನೋಡಿದೆ ಆಗಲೇ 9:30 ಆಗಿತ್ತು ಹಿಟ್ನ ಚಾಕು ತಗೊಂಡು ಪೀಸ್ ಪೀಸ್ ಮಾಡಿದೆ ಅದು ೯ ಪೀಸ್ ಆಯ್ತು ಅರೆ ಒಂಬತ್ತು ಆಯ್ತಲ್ಲ ಅಂತ ಎಲ್ಲದರಲ್ಲೂ ಸ್ವಲ್ಪ ಸ್ವಲ್ಪ ತಗೊಂಡು ಮತ್ತೊಂದು ಪೀಸ್ ಮಾಡಿ ಅಲ್ಲಿಗೆ ಹತ್ತು ಪೀಸ್ ಮಾಡಿದೆ ಈಗ ಮುಂದಿನ ಕಾರ್ಯ ಪೀಸ್  ಗಳನ್ನೆಲ್ಲ ಉದ್ದುಬೇಕು ಉದ್ದೋಕೆ ಲಟ್ಟಣಿಕೆ ಮಣಿ ತಗೊಂಡೋ ಕೆಳಗಡೆ ಒಂದು ಯಾವೊದೋ ನ್ಯೂಸ್ ಪೇಪರ್  ತಗೊಂಡು ಅಗಲವಾಗಿ ಹಾಸಿ ಅದರಮೇಲೆ ಚಪಾತಿ ಮಣೆ ಇಟ್ಟೆ ( ಅಮ್ಮ ಚಪಾತಿ ಉದ್ದುವಾಗ ಚಪಾತಿ ಹಿಟ್ಟು ನೆಲದಲ್ಲಿ ಬಿಳುತ್ತೆ ಅಂತ ಆ ಥರ ಪೇಪರ್ ಹಾಕ್ತ ಇದ್ರೂ ಅದನ್ನ ನೋಡಿದ್ದ ನೆನಪು ) ಹ್ಮಂ ಮೊಬೈಲ್ ನಲ್ಲಿ ಮ್ಯೂಸಿಕ್ ಹಾಕಿದ್ದೆ ಪಲ್ಲವಿ ಅವರು " ನೀ ಇಲ್ಲದೆ ನನಗೇನಿದೆ " ಅಂತ ಹಾಡ್ತಾ ಇದ್ರೂ ಕೇಳೋಕೆ ತುಂಬಾ ಚನ್ನಾಗಿತ್ತು ಕೇಳ್ತಾ ಕೇಳ್ತಾ ಚಪಾತಿ ಉದ್ದೋಕೆ ಶುರು ಮಾಡಿದೆ. ಅವಾಗ ಟೈಮ್  ಹತ್ತು ಘಂಟೆಗೆ ಹತ್ತು ನಿಮಿಷ ಕಮ್ಮಿ ಇತ್ತು. 

ನಿಮ್ಮಾಣೆ ಕಣ್ರೀ ನಾನು ಭೂ ಪಟದಲ್ಲಿ ಯಾವ ಯಾವ ದೇಶ ಯಾವ ಯಾವ ಶೇಪ್ ನಲ್ಲಿ ಇವೆ ಅಂತ ಗೊತ್ತಿರ್ಲಿಲ್ಲ (ಭಾರತ ಶ್ರೀಲಂಕ ಬಿಟ್ಟು ) ಅದೇನು ನನ್ನ ಭಾಗ್ಯನೋ ಏನು ನಾನು ಉದ್ದಿದ ಮೊದಲ ಚಪಾತಿಯಲ್ಲಿ ಪಾಕಿಸ್ತಾನ ಎರಡನೇ ಚಪಾತಿಯಲ್ಲಿ  ಆಫ್ಘಾನಿಸ್ತಾನ ಇನ್ನೊಂದರಲ್ಲಿ ಬಾಂಗ್ಲಾದೇಶ ಮತ್ತೊಂದರಲ್ಲಿ ಅಂತು ಬಿಡಿ100% ಶ್ರೀಲಂಕಾನೇ ಆಗಿತ್ತು ಇದನೆಲ್ಲ ನೋಡಿ ಜೀವನ ಪಾವನ ಆಯ್ತು ಅನ್ಕೊಂಡೆ   ಅವನ್ನೆಲ್ಲ  ಉದ್ದಿ ಉದ್ದಿ ಒಂದು ತಟ್ಟೆ ಮೇಲೆ ಹಾಕ್ತ ಇದ್ದೆ ಅವೋ ಒಂದ್ರು ಮೇಲೆ ಒಂದು ಒಂದ್ರು ಮೇಲೆ ಒಂದು ಹಾಕಿದ್ರಿಂದ ಅಂಟಿಕೊಂಡಗ್ಗೆ ಇದ್ವು  ನಾನು ಅಷ್ಟು ಗಮನಿಸಿರಲಿಲ್ಲ. ಕಣ್ಣು ಮತ್ತೆ ಟೈಮ್ ಕಡೆ ಹೋಯ್ತು ಆಗಲೇ 10:30 ಆಗಿತ್ತು ಹೊಟ್ಟೆ ಹಸಿವು ಜಾಸ್ತಿ ಆಗ್ತಾನೆ ಇತ್ತು.

     ಮುಂದೆ ಉದ್ದಿದ್ದ ಚಪಾತಿಗಳನ್ನ ಹಂಚಿನಲ್ಲಿ ಬೇಯಿಸಬೇಕು ಅಂತ ಹಂಚು ಗ್ಯಾಸ್ ಮೇಲೆ ಇಟ್ಟು ಒಂದೊಂದೇ ಚಪಾತಿ ಬೇಯಿಸೋಕೆ ತಯಾರಾದೆ ಚಮಚದಿಂದ ಹಂಚ ಮೇಲೆ ಎಣ್ಣೆ ಹಾಕೋದು ಕೈಗೆ ಸಿಕ್ಕ ದೇಶಗಳನ್ನ ಹಂಚ ಮೇಲೆ ಹಾಕಿ ಬೇಯಿಸ್ತ ಹೋದೆ ಸ್ವಲ್ಪ ಹೊತ್ತಿಗೆ ವಾಸನೆ ಬರ್ತಾ ಇತ್ತು ಅವಾಗ ನನಗೆ ಅನಿಸ್ತು ಈಗ ಚಪಾತಿ ಬೆಂದಿದೆ ತಿರುಗಿಸಿ ಹಾಕಬೇಕು ಅಂತ ತಿರುಗಿಸಿ ಹಾಕ್ದೆ...... ಏನು ಜಾದು ಮಾಡ್ತು ರೀ ಆ ಹಂಚು ಬಿಳಿ ಇದ್ದ ಚಪಾತಿನೆಲ್ಲಾ ನನ್ನ ಕೂದ್ಲುಗಿಂತ ಕಪ್ಪುಗೆ ಮಾಡಿಬಿಟ್ಟಿತ್ತು ಅದು ಕಪ್ಪು ಆಗೋದಿರ್ಲಿ ಅವನೆಲ್ಲ ಬೇಯಿಸೋ ಅಷ್ಟರಲ್ಲಿ ನನ್ನ ಕೈ ಎಷ್ಟು ಸಲ ಸುಟ್ಟು ಹೋಗಿತ್ತೋ ಲೆಕ್ಕ ಇಲ್ಲಾ ಹಸಿವು ಬೇರೆ ತಾಳೋಕೆ ಆಗ್ತಾ ಇರ್ಲಿಲ್ಲ ಮತ್ತೆ ಟೈಮ್  ನೋಡಿಕೊಂಡೆ ಆಗಲೇ ಸರಿಯಾಗಿ ೧೨.೦೦ ಆಗಿತ್ತು ಮೊಬೈಲ್ ನಲ್ಲಿ "ಆಹಾ ಭಾಗ್ಯವೇ ಇದು ಎಂತ ಸಮಯವೂ" ಅಶ್ವಥ್ ಅವರು ಹಾಡ್ತಾ ಇದ್ರೂ ನನ್ನ ಭಾಗ್ಯದ ಕಡೆ ಒಮ್ಮೆ ಯೋಚಿಸಿ ಇದೆಲ್ಲ ಬೇಕಾಗಿತ್ತಾ ನನಗೆ ಹೋಟೆಲ್ ಗೆ ಹೋಗಿದ್ರೆ ಆರಾಮಾಗಿ ತಿಂದು ಬರ್ತಾ ಇದ್ದೆ ಅನ್ಕೊಂಡೆ. 

ಅಂತು ಇಂತೂ ಚಪಾತಿ ಎಲ್ಲಾ ಬೇಯಿಸಿ ಹಂಚು ಕೆಳಗಡೆ ಇಟ್ಟು ಗ್ಯಾಸ್ ಆಫ್ ಮಾಡಿದೆ. ಚಪಾತಿ ಉದ್ದು ಮಣಿ ಲಟ್ಟಣಿಕೆ ಅಲ್ಲೇ ಬಿಟ್ಟಿದ್ದೆ ಎತ್ತಿ ಸೈಡ್ ನಲ್ಲಿ ಇಡೋಣ ಅಂತ ಮಣಿ ಲಟ್ಟಣಿಕೆನ ತಗ್ದು ಮೇಲೆ ಇಟ್ಟಿ ಮಣೆ  ಕೆಳಗಡೆ ಪೇಪರ್ ಹಸಿದ್ದೆ ಅದನ್ನು ತಗೆಯೋಣ ಅಂತ ಕೈ ಹಾಕ್ದೆ ... !  ಇದೊಂದು ಕಡಿಮೆ ಆಗಿತ್ತು ನನ್ನ ಭಾಗ್ಯಕ್ಕೆ ಆ ಪೇಪರ್ ಕೈ ನಲ್ಲಿ ತಗೊಂಡು ನೋಡ್ತೀನಿ ಶ್ರೀ ಶ್ರೀ ಶ್ರೀ ನಿತ್ಯಾನಂದ ಸ್ವಾಮಿಗಳು ಫ್ರಂಟ್ ಪೇಜ್ ನಲ್ಲಿ ಯಾರಿಗೋ ಆಶೀರ್ವಾದ ಮಾಡೋ ಸ್ಟೈಲ್ ನಲ್ಲಿ ನಿಂತಿದ್ರು ಅಲ್ಲಿಗೆ ನನ್ನ ಜನ್ಮ ಫುಲ್ ಪಾವನವಾಯ್ತು ಅನ್ಕೊಂಡು ಅದನ್ನ ಮುದುರಿ ಕಸದ ಡಬ್ಬಕ್ಕೆ ಹಾಕಿ..... ಇನ್ನೇನು ಎಲ್ಲಾ ಮುಗಿತು ಚಪಾತಿ ತಿನ್ನೋಣ ಅಂತ ಪ್ಲೇಟ್ ಗೆ ಚಪಾತಿ ಹಾಕೊಂಡೆ ಆಮೇಲೆ ಅನಿಸ್ತು ನನಗೆ "ಮಂಜಾ ನೀ ತುಸು ನೀರಲ್ಲಿ ಮುಳುಗಿಲ್ಲ ಬರೋಬ್ಬರಿ ಸಮುದ್ರದಲ್ಲೇ ಮುಳುಗಿದಿಯ ಚಪಾತಿ ಜೊತೆ ತಿನ್ನೋಕೆ ಏನಿದೆ ಅಂತ ಚಪಾತಿ ಮಾಡಿದಿಯ ಅಮ್ಮ ಕಳಿಸಿದ್ದ ಚಟ್ನಿ ಪುಡಿ ಫುಲ್ ಖಾಲಿ ಆಗಿದೆ... ಅಲ್ಲಿಗೆ ಆಗ್ಲೇ ೧೨.೨೦ ಆಗಿತ್ತು .  ಅಂಗಡಿಗೆ ಹೋಗಿ ಬಾಳೆ ಹಣ್ಣೋ ಇಲ್ಲಾ ಕಿಸ್ಸನ್ ಜಾಮೋ ತಂದು ತಿನ್ನೋಣ ಅಂತ ಮತ್ತೆ ಹೊರಗಡೆ ಹೋದೆ ನನ್ನ ಗಮನ ಮತ್ತೆ ಹೋಟೆಲ್ ಕಡೆ ಹೋಯ್ತು ಅಲ್ಲಾ ಹೋಟೆಲ್ ಗೆ ಹೋಗಿದ್ರೆ ಚಪಾತಿ ಜೊತೆ ಚಟ್ನಿ ಇಲ್ಲಾ ಪಲ್ಯ ಏನಾದ್ರು ಕೊಡ್ತಾರೆ ನಾನು ಯಾಕೆ ಪಲ್ಯ ಮಾಡ್ಕೋ ಬಾರ್ದು ಅಂತ ಅನ್ಕೊಳ್ತಾ ಇರುವಾಗ್ಲೇ ಗಾಡಿಯಲ್ಲಿ ಒಬ್ಬ ಅವರೆಕಾಯಿ.... ಅವರೆಕಾಯಿ..... ಅಂತ ಕೂಗ್ತಾ ಬರ್ತಾ ಇದ್ದ ಸರಿ ಅವರೆಕಾಯಿ ಪಲ್ಯ ಮಾಡೋಣ ಅಂತ ಆತನ ಹತ್ರ ಹೋಗಿ ೧ ಕಿಲೋ ಅವರೆಕಾಯಿ ತಗೊಂಡು ರೂಮ್ ಗೆ ಬಂದೆ, ನನಗೆ ಬೆಳಗ್ಗೆ ಯಿಂದ ಎಷ್ಟು ಹೊಟ್ಟೆ ಹಸಿದ್ರು ಸಮಾಧಾನದಿಂದ ಇದ್ದೆ ಕಣ್ರೀ ಈ ಅವರೆಕಾಯಿ ಯಾವಾಗ ತಗೊಂಡು ಬಂದನೋ ಅವಗಿಂದ ನನ್ನ ಮೇಲೆ ನನಗೆ ಸಿಕ್ಕಪಟ್ಟೆ ಕೋಪ ಬಂತು ಯಾಕೆ ಅಂತ ಗೊತ್ತ ನಾ ತಂದಿದ್ದು  ಅವರೆಕಾಯಿನ ಅದನ್ನ ಸಿಪ್ಪೆ ಬಿಡಿಸಿ ಕಾಳು ಹೊರಗೆ ತೆಗಿಬೇಕಿತ್ತು ಈಗಲೇ ಟೈಮ್ ಇಷ್ಟೊಂದು ಆಗಿದೆ ಇನ್ನು ಇದನೆಲ್ಲ ಒಂದೊಂದೇ ಬಿಡಿಸಿ ಬಿಡಿಸಿ ಪಲ್ಯ ಮಾಡೋದ್ರಲ್ಲಿ ನನ್ನ ಕತೆ ಮುಗಿತು ಅನ್ಕೊಂಡೆ.

ನಾನು ಒಂಥರಾ ಲೂಸ್ ಮಾಡಬೇಕು ಅಂದಿದ್ದನ್ನ ಮಾಡೋತನಕ ಬಿಡೋನಲ್ಲ ತ್ರಿವಿಕ್ರಮನಥರ "ಛಲ ಬಿಡದ ಮಲ್ಲ " ಅಂತಾರಲ್ಲ ಹಾಗೆ ನಿಜ ಹೇಳ್ಬೇಕು ಅಂದ್ರೆ ನನಗೆ ಸರಿಯಾಗಿ ಅನ್ನನೆ ಮಾಡೋಕೆ ಬರೋದಿಲ್ಲ ಅಂತದ್ರಲ್ಲಿ ಚಪಾತಿ ಮಾಡಿ ಪಲ್ಯ ಮಾಡ್ತಾ ಇದೀನಿ ಅಂತ ನನಗೆ ನಾನೇ ಬೆನ್ನು ತಟ್ಟಿಕೊಂಡೆ.

ಹೇಗಾದ್ರು ಮಾಡಿ ಅವರೆಕಾಯಿ ಪಲ್ಯ ಮಾಡಬೇಕಲ್ಲ ಹೇಗೆ ಮಾಡೋದು ಅಂತ ಅಮ್ಮನಿಗೆ ಕಾಲ್ ಮಾಡಿ ಕೇಳ್ದೆ 
ನಾನು :-  ಅಮ್ಮ ಅವರೆಕಾಯಿ ಪಲ್ಯ ಮಾಡ್ತಾ ಇದೀನಿ ಹೆಂಗೆ ಮಾಡೋದು 

ಅಮ್ಮ :-  ನನ್ನ ಯಾಕೆ ಕೇಳ್ತಿಯ ನಿನ್ನ ಕುಟ್ ಕುಟ್ ಫ್ರೆಂಡ್ಸ್ ಹುಡುಗಿರ್ನ ಕೇಳಬೇಕಿತ್ತು ಹೇಳಿಕೊಡ್ತ ಇದ್ರೂ ( ಕುಟ್ ಕುಟ್ ಅಂದ್ರೆ ಆರ್ಕುಟ್ ಫ್ರೆಂಡ್ಸ್ ಅಂತ, ಅಮ್ಮ  ಹಾಗೆ ಹೇಳೋಕು ಒಂದು  ಕಾರಣ ಇದೇ ಇದೇ ಥರ ನಾನು ಅಡುಗೆ ಮಾಡ್ಬೇಕು ಅಂತ ನನ್ನ ಆರ್ಕುಟ್ ಗೆಳತಿಗೆ ಕಾಲ್ ಮಾಡಿ ಕೇಳಿ ಹೇಗೆ ಮಾಡೋದು ಅಂತ ಕಲ್ತಿದ್ದೇ ಅದನ್ನ ಅಮ್ಮನಿಗೆ ಹೇಳಿದ್ದೆ ಅದಕ್ಕೆ ಹಾಗೆ ಹೇಳಿದ್ರು ) ನಾನೇನು ಮಾತಾಡಲಿಲ್ಲ ಸುಮ್ನೆ ಇದ್ದೆ ಅಷ್ಟರಲ್ಲೇ ಅಮ್ಮನೇ ಹೇಗೆ ಮಾಡ್ಬೇಕು ಅಂತ ಹೇಳಿ, ಊಟ ಮಾಡಿ ಮತ್ತೆ ಕಾಲ್ ಮಾಡು ಅಂತನು ಹೇಳಿದ್ರು ಆ ಥರ ಯಾಕೆ ಹೇಳಿದರೋ ಗೊತ್ತಿಲ್ಲ ನಾನು ಹ್ಮಂ ಹ್ಮಂ ಅಂದು ಕಾಲ್ ಕಟ್ ಮಾಡಿ ಟೈಮ್ ನೋಡಿದೆ 1 ಘಂಟೆ ಇನ್ನು ಆಗಿರಲಿಲ್ಲ ಅನ್ನೋ ಸಮಾಧಾನ ಇನ್ನು ಹದಿನೈದು ನಿಮಿಷ ಕಳುದ್ರೆ 1 ಘಂಟೆ ಆಗುತ್ತೆ ಅನ್ನೋ ಆತಂಕದಲ್ಲೇ ಇದ್ದೆ ನನ್ನ ಮೊಬೈಲ್ ನಲ್ಲಿ "ಬದುಕು ಮಾಯೆಯ ಮಾಟ" ಅನ್ನೋ ಹಾಡು ಅಶ್ವಥ್ ಅವರು ಹಾಡ್ತಾನೆ ಇದ್ರೂ ನಾನು ಕೇಳ್ತಾ ಕೇಳ್ತಾ ಅವರೆಕಾಯಿಗಳನ್ನ ಬಿಡುಸ್ತ ಹೋದೆ ಬೆರಳುಗಳಿಗೆ ಸ್ವಲ್ಪ ಕಷ್ಟ ಆದ್ರು ಕಷ್ಟ ಪಟ್ಟು ಬಿಡಿಸಿದೆ.

ಮೇಲೆ ಕೈಗೆ ಈರುಳ್ಳಿ ತಗೊಂಡೆ ಹೆಚ್ಚೋಕೆ ತಯಾರಾದೆ ಒಂದೇ ಒಂದು ಈರುಳ್ಳಿ ಅರ್ಧ ಭಾಗ ಮಾಡಿದ್ದು ಅಸ್ಟೇ ಕಣ್ರೀ ಅಷ್ಟರಲ್ಲಿ ನನ್ನ ಕಣ್ಣುಗಳು ಧಾರಾಕಾರವಾಗಿ ಮಳೆ ಥರ ಕಣ್ಣಿರು ಸುರುಸ್ತ ಇತ್ತು  ಅಶ್ವಥ್ ಅವರಿಗೂ ನನ್ನ ಪಾಡು ನೋಡೋಕೆ ಆಗದೆ "ಆಕಾಶ ಬಿಕ್ಕುತ್ತಿದೆ" ಅಂತ ಹಾಡು ಚೇಂಜ್ ಮಾಡಿ ಬಿಟ್ರು  ನಾನು ಹಾಗೋ ಹೀಗೋ ಎಲ್ಲಾ ಹೆಚ್ಚಿಬಿಟ್ಟು ಅಮ್ಮ ಹೇಳಿದ ಹಾಗೆ ಮಾಡ್ತಾ ಹೋದೆ ಅಲ್ಲಿಗೆ ಪಲ್ಯ ತಯಾರ್ ಆಯ್ತು ಟೈಮ್ ಆಗಲೇ 1:30 ಸರಿಯಾಗಿ ಆಗಿತ್ತು ಅಬ್ಬಾ ಎಲ್ಲಾ ಮುಗಿತು ಇನ್ನೇನು ಊಟ ಮಾಡೋಣ ಅಂತ ತಟ್ಟೆಗೆ ಚಪಾತಿ ಹಾಕೊಂಡು ಪಲ್ಯ ಹಾಕೊಂಡು ಇನ್ನೇನು ತಿನ್ನಬೇಕು ಅನ್ನೋ ಅಷ್ಟ್ರಲ್ಲಿ ಅಮ್ಮ ಹೇಳಿದ್ದ ಮಾತು ನೆನಪಾಯ್ತು "ಊಟ ಮಾಡಿ ಮತ್ತೆ ಕಾಲ್ ಮಾಡು...!" ಯಾಕೋ ಸ್ವಲ್ಪ ಭಯ ಆಯ್ತು ಅದ್ರು ಏನು ಆಗಿದ್ದು ಅಗ್ಲಿಯ ಅಂತ ತುತ್ತು ಬಾಯಿಯಲ್ಲಿ ಇಟ್ಟೆ ಸಿಕ್ಕಾಪಟ್ಟೆ ಖಾರ ಸ್ವಲ್ಪನು ಉಪ್ಪು ಇರ್ಲಿಲ್ಲ ಅಡುಗೆ ಮಾಡೋ ಸಡಗರದಲ್ಲಿ ಉಪ್ಪು ಹಾಕೋದೇ ಮರ್ತಿದ್ದೆ. ಹೇಗೋ ಊಟ ಮಾಡಿ ಮೇಲೆ ಎದ್ದು ತಟ್ಟೆನೆಲ್ಲ ಸೈಡ್ನಲ್ಲಿ ಇಟ್ಟೆ.. ಅಷ್ಟ್ರಲ್ಲಿ  ನಿದ್ದೆ ಎಳಿತ ಇತ್ತು ಹಾಗೆ ಹಾಸಿಗೆ ಮೇಲೆ ಮಲಕೊಂಡೆ...! 

ಎಷ್ಟೋ ಹೊತ್ತಾದ್ ಮೇಲೆ ಕಣ್ಣು ಬಿಟ್ಟೆ ಟೈಮ್ ನೋಡಿಕೊಂಡೆ ಆಗಲೇ ಸಂಜೆ ಆಗಿತ್ತು ಅಬ್ಬಾ ಬಡ ಜೀವ ಬದುಕಿದೆ ಇನ್ನು ಅನ್ಕೊಂಡು ಮೇಲೆ ಎದ್ದೆ ಎದ್ರುಗಡೆ ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿಬೇಕು ಅನಿಸಿದರು ಬೆಳಗ್ಗೆ ಒನ್ ಟೈಮ್ ಮುಗಿದಿದ್ಕೆ ಜೀವನ ಪೂರ್ತಿ ಮರೆದೆ ಇರೋ ಅನುಭವಾಗಿದೆ ಅನ್ಕೊಂಡು ಮುಗಿಲಿಲ್ಲ 

ಗ್ಯಾಸ್ ಪಕ್ಕ ಇದ್ದ ಲಟ್ಟಣಿಕೆ, ಮಣಿ ಮತ್ತೆ ಉಳಿದ್ದಿದ ಚಪಾತಿಗಳು ನನ್ನ ನೋಡಿ ನಗ್ತಾ ಇವೆ ಅನಿಸಿದರು ನನಗು ಅವಕ್ಕೂ ಸಂಬಂಧನೆ ಇಲ್ಲಾ ಅನ್ಕೊಂಡು ಮೊಬೈಲ್ ನಲ್ಲಿ ಸಾಂಗ್ ಹಾಕ್ದೆ ಪಲ್ಲವಿ ಮೇಡಂ ಮತ್ತೆ ಇಂಪಾಗಿ ಹಾಡೋಕೆ ಶುರು ಮಾಡಿದ್ರು "ನೀನಿಲ್ಲದೆ ನನಗೇನಿದೆ ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ"



ನಿಮ್ಮ ಹುಡುಗ
?ದೊಡ್ಡಮನಿ.ಮಂಜು
        97424 95837

Tuesday, 15 June 2010

I MISS YOU

ಓದುವ ಮುನ್ನ:-
ನನ್ನ ಕಲ್ಪನೆಗೆ ಬಣ್ಣ ತುಂಬಿ ಈ ಕತೆ ಹುಟ್ಟೋಕೆ ಕಾರಣರಾದ ಆರ್ಕುಟ್ ಗೆಳತಿ ಶಿಲ್ಪ ಗೆ ತುಂಬ ಥ್ಯಾಂಕ್ಸ್ ಹೇಳ್ತಾ ಇದೀನಿ.
"ಹೂ ಬಾಡಿ ಹೋಗುತ್ತೆ ಅಂತ ಗೊತ್ತಿದ್ರು
ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ
ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ
ಇನ್ನು ಏನು ಅರಿಯದ ಪುಟ್ಟ ಹೃದಯದ
ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ"



ಅರೆ ಮಲೆನಾಡಿನ ಚಿಕ್ಕ ಊರು ಆ ಊರಲ್ಲಿ ಇದದ್ದು ಕೇವಲ ಬೆರಳೆಣಿಕೆ ಅಷ್ಟು ಜನ ಅದ್ರಲ್ಲಿ ಊರಿನ ಶ್ರೀಮಂತ ತಂದೆ ಒಬ್ಬನ ಮಗಳೇ ನವ್ಯ ಆ ಊರಿನ ಪಕ್ಕದಲ್ಲೇ ಇರೋ ಚಿಕ್ಕ ಹಳ್ಳಿಯ ಮದ್ಯಮ ವರ್ಗದ ತಾಯಿ ಒಬ್ಬಳ ಮಗ ಮನು,

ಮನು ಮತ್ತು ನವ್ಯ ತುಂಬಾ ದಿನಗಳಿಂದ ಒಳ್ಳೆ ಫ್ರೆಂಡ್ಸ್ ಹೀಗೆ ಗೆಳತನ ಮುಂದುವರೆದು ಒಳ್ಳೆ ಪ್ರೇಮಿಗಳು ಆಗ್ತಾರೆ ಒಬ್ಬರನ್ನ ಬಿಟ್ಟು ಒಬ್ರು ಇರೋದಿಲ್ಲ ಪ್ರತಿ ದಿನ ಸಂಜೆ ಊರಿಂದ ಸ್ವಲ್ಪ ದೂರ ಇರೋ ಬೆಟ್ಟದಲ್ಲೇ ಅವರಿಬ್ಬರ ಭೇಟಿ ಮನು ಮನೆಯಲ್ಲಿ ಅವನ ತಾಯಿ ಬಿಟ್ರೆ ಬೇರೆ ಯಾರು ಇಲ್ಲಾ ಮನು ಆಗ್ಲೇ ತನ್ನ ತಾಯಿಗೆ ನವ್ಯಳ ಬಗ್ಗೆ ಹೇಳಿ ಮದುವೆಗೆ ಒಪ್ಪಿಗೆ ತಗೊಂಡಿರ್ತನೆ ಆದ್ರೆ ನವ್ಯಳಗೆ ತಾಯಿರೋದಿಲ್ಲ ಎಲ್ಲಾನು ತಂದೇನೆ ಸ್ವಲ್ಪ ಕಟು ಹೃದಯದವರು ಅಲ್ದೆ ತುಂಬಾ ಶ್ರೀಮಂತ ಅನ್ನೋ ಅಹಂ ಬೇರೆ ಹಾಗಾಗಿ ನವ್ಯ ಯಾವತ್ತು ಮನು ಬಗ್ಗೆ ತನ್ನ ಲವ್ ಬಗ್ಗೆ ತಂದೆ ಹತ್ರ ಹೇಳಿರಲಿಲ್ಲ ತಾಯಿ ಇಲ್ದೆ ಬೆಳೆದ ನವ್ಯ ತನ್ನ ತಂದೆ ಎದ್ರುಗೆ ನಿಂತು ಮಾತಾಡೋಕೆ ಹೆದ್ರುತ ಇದ್ಲು

(ಸಂಜೆ ಒಂದರ ಬೆಟ್ಟದ ಮೇಲೆ)

ನವ್ಯ : ಲೋ ನಾನು ಹೇಳೋದು ಕೇಳ್ತಿಯ ಸ್ವಲ್ಪ ..!

ಮನು : ಕೇಳ್ತಾನೆ ಇದಿನಲ್ಲ ಇನ್ನು ಏನು ಕೇಳಬೇಕು ಇಲ್ಲಿಂದ ಬಿಳ್ಬೇಕಾ ..?

ನವ್ಯ : ಲೋ ಗೂಬೆ ನಾನು ಬಿಳು ಅಂತ ಹೇಳಿದ್ನಾ ! ಸ್ವಲ್ಪ ಮುಂದೆ ಹೋಗು ಕೈಗೆ ಸಿಗುತ್ತೆ ..!

ಮನು : ಇನ್ನು ಮುಂದೆ ಹೋದ್ರೆ ಅಷ್ಟೇ ನನ್ನ ಕತೆ, ಕಾಲು ಜಾರಿ ಬಿದ್ರೆ ನನ್ನ ಮುಳೇನು ಸಿಗೋಲ್ಲ

ನವ್ಯ : ನಿನಗೆ ಮೂಳೆ ಬೇರೆ ಇದೇನಾ ... ?

ಮನು : ಏನ್ ಜೋಕ್ ಮಾಡ್ತಾ ಇದಿಯಾ, ಈ ಚಿಕ್ಕ ಹೂವಿಗೋಸ್ಕರ ನಾನು ಪ್ರಾಣನು ಲೆಕ್ಕಿಸದೆ ಈ ಬೆಟ್ಟದ ತುದಿಗೆ ಬಂದಿದೀನಿ ನೀನು ನೋಡಿದ್ರೆ ಜೋಕ್ ಮಾಡ್ತಾ ಇದಿಯಾ ..!

ನವ್ಯ : ಹೇ ಇಲ್ಲಾ ಕಣೋ ಸುಮ್ನೆ ತಮಾಷೆ ಮಾಡ್ತಾ ಇದ್ದೆ ಬೇಗಾ ತಗೊಂಡು ಬಾರೋ

ಮನು : ತಾಳು ಬಂದೆ

ನವ್ಯ : ಹುಷಾರು ಕಣೋ

ಮನು : ಉಫ್ ..... ಸುಸ್ತಾಯ್ತು ಕಣೆ ತಗೋ ಹೂವು :)

ನವ್ಯ : ತುಂಬಾ ಥ್ಯಾಂಕ್ಸ್ ಕಣೋ

ಮನು : ಅಷ್ಟೇನಾ .. ?

ನವ್ಯ : ಇನ್ನೇನು ಹೇಳ್ಬೇಕು ?

ಮನು : ಅಲ್ಲಾ ನಾನು ನೀನು ಕೇಳ್ದೆ ಅಂತ ಕಷ್ಟ ಪಟ್ಟು ಹೂವು ತಂದು ಕೊಟ್ಟಿದೀನಿ ಬೇರೆ ಏನಾದ್ರು ಹೇಳ್ಬೇಕು ಅನಿಸ್ತ ಇಲ್ವಾ !

ನವ್ಯ : ಐ ಲವ್ ಯೌ ಅಂತ ಹೇಳಬೇಕಿತ್ತ .. ?

ಮನು : ನಿನಗೆ ಅಷ್ಟೊಂದು ಧೈರ್ಯ ಇಲ್ಲಾ ಬಿಡು

ನವ್ಯ : ಲೇ. . . . ಲೂಸ್ ........ ಧೈರ್ಯ ಇಲ್ದನೆ ನಿನ್ನ ಲವ್ ಮಾಡಿದ್ನ ನಾನು.. ?

ಮನು : ಒಂದು ಸಾರಿ ಐ ಲವ್ ಯೌ ಅಂತ ಹೇಳೋಕೆ ಒಂದು ಘಂಟೆ ಟೈಮ್ ತಗೊಂಡಿದ್ದೆ ನೀನು ನೆನಪಿದೆನಾ ....

ನವ್ಯ : ಹೌದು ಕಣೋ ನೀನು ಜೊತೆ ಇದ್ರೆ ನನಗೆ ಮಾತೆ ಹೊರಡಲ್ಲ ನಿನ್ನ ಜೊತೆ ಹೀಗೆ ಸುಮ್ನೆ ಕುತುಕೊಳ್ಳೋಣ ಅನಿಸುತ್ತೆ ನಾನು ನಿನ್ನಿಂದ ಎಲ್ಲಿ ದೂರ ಆಗ್ತಿನೋ ಅನ್ನೋ ಭಯ ಆದ್ರೆ ಒಂದು ನಿಜ ಕಣೋ ನಿನ್ನ ಬಿಟ್ಟು ಮಾತ್ರ ಬಾಳೋದಿಲ್ಲ ಹೇಗಾದ್ರು ಮಾಡಿ ಅಪ್ಪನ ಒಪ್ಪಿಸಿ ನಿನ್ನೆ ಮಧುವೆ ಆಗ್ತೀನಿ... :)

ಮನು : ಆಗ್ತೀನಿ ಅಲ್ಲಾ ಆಗೇ ಆಗ್ತೀನಿ ಅಂತ ಹೇಳು :)

ನವ್ಯ : ಆಯ್ತು ಬಿಡೋ ಲೋ.. ಒಂದು ವಿಷಯ ಕೇಳ್ಲ .. ?

ಮನು : ಹ್ಮ ಕೇಳು ಡಿಯರ್ ?

ನವ್ಯ : ಆಕಸ್ಮಾತ್ ನಾನೇನಾದ್ರು ನಿನ್ನ ಬಿಟ್ಟು ಬೇರೆ ಯಾರನಾದ್ರು ಮದುವೆ ಆದ್ರೆ ನೀನು ಏನೋ ಮಾಡ್ತಿಯ ? ? ?

ಮನು : ನಾನೇನು ಮಾಡ್ಲಿ ನಾನು ಬೇರೆಯಾರ್ನಾದ್ರು ಮಧುವೆ ಆಗ್ತೀನಿ ಸಿಂಪಲ್ :)

ನವ್ಯ : ಅಯ್ಯೋ ಅಷ್ಟೇನಾ ನಾನೆಲ್ಲೋ ನನ್ನ ನೆನಪಲ್ಲಿ ಬಾಟಲಿ ಹಿಡ್ಕೊಂಡು ರೋಡ್ ರೋಡ್ ಅಲಿತಿಯ ಅನ್ಕೊಂಡಿದ್ದೆ

ಮನು : ಸರಿ ಸರಿ ಬಾ ಟೈಮ್ ಆಯ್ತು ಹೋಗೋಣ ನಿಮ್ಮ ಅಪ್ಪ ಕಾಯ್ತಾ ಇರ್ತಾರೆ ನಿನಗೆ ಯಾವಗಲು ತಮಾಷೇನೆ

ನವ್ಯ : ತಮಾಷೆ ಅಲ್ಲಾ ಕಣೋ ನಿಜವಾಗಲು ಕೇಳ್ತಾ ಇದೀನಿ ಹೇಳೋ ? ಹೋಗ್ಲಿ ನಾನು ನನ್ನ ಮದುವೆಗೆ ನಿನ್ನ ಇನ್ವೈಟ್ ಮಾಡಿದ್ರೆ ಏನ್ ಅಂತ ವಿಶ್ ಮಾಡ್ತಿಯ ..?

ಮನು : ಒಳ್ಳೆ ಸಹವಾಸ ಅಯ್ತಲ್ವೆ ನಿಂದು ! ನನ್ನಿಂದ ಮಿಸ್ ಆದ ಈ ಮಿಸ್ ಗೆ ಏನು ವಿಶ್ ಮಾಡ್ಲಿ ಐ ಮಿಸ್ ಯೌ ಡಿಯರ್ ಅಂತೀನಿ ಅಸ್ಟೇ ..!

ನವ್ಯ : ಅಷ್ಟೇನಾ .. ?

ಮನು : ಮತ್ತೇನು ಹೇಳ್ಬೇಕು ಎಲ್ಲಾ ಆದಮೇಲೆ ?

ನವ್ಯ : ನಾನೆಲ್ಲೋ ನನ್ನ ಸಿಕ್ಕಾಪಟ್ಟೆ ಬೈದು ಮಧುವೆ ಮನೇಲಿ ಗಲಾಟೆ ಮಾಡ್ತಿಯ ಅನ್ಕೊಂಡಿದ್ದೆ ಹ್ಹ ಹ್ಹ ಹ್ಹ ಹ್ಹ

ಮನು : ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ

ನವ್ಯ : ಈಗ ಆ ಹಳೆ ಫಿಲ್ಮ್ ಡೈಲಾಗ್ ಬೇಕಾ ನಿನಗೆ ..?

ಮನು : ಅಂದ್ರೆ ನಾನು ಯಾವ್ದೋ ಫಿಲ್ಮ್ ಡೈಲಾಗ್ ಹೇಳ್ತಾ ಇದೀನಿ ಅಂತನಾ.. ?

ನವ್ಯ : ಸುಮ್ನೆ ತಮಾಷೆ ಮಾಡ್ದೆ ಕಣೋ ನಿನ್ನ ಬಿಟ್ಟು ಒಂದು ನಿಮಿಷನು ಇರೋಕೆ ಆಗೋಲ್ಲ ನನಗೆ, ಐದು ವರ್ಷದಿಂದ ಲವ್ ಮಾಡ್ತಾ ಇದೀನಿ ಅದು ಹೇಗೆ ಬೇರೆ ಮಧುವೆ ಆಗ್ತೀನಿ ಹೇಳು ..? ಅಪ್ಪನ್ನ ಬಿಟ್ಟು ಬೇಕಾದ್ರೂ ಬರ್ತೀನಿ ನಿನ್ನ ಬಿಟ್ಟು ಮಾತ್ರ ಹೋಗೋಲ್ಲ ನನ್ನಾಣೆ :) ಇವತ್ತು ತುಂಬಾ ನಿನ್ನ ನೋಯಿಸಿಬಿಟ್ಟೆ ಅನಿಸುತ್ತೆ ಬಾ ಹೋಗೋಣ ಟೈಮ್ ಆಯ್ತು !

( ಮಧ್ಯ ರಾತ್ರಿ )

ನವ್ಯ : ಹಲೋ ಮನು ಏನೋ ಮಾಡ್ತಾ ಇದೀಯ

ಮನು : ಎಲ್ಲಾ ಲೈಟ್ ಆಫ್ ಮಾಡಿಕೊಂಡು ರಾ..ರಾ...ಸರಸಕು ರಾ...ರಾ. ಸಾಂಗ್ ಗೆ ಡಾನ್ಸ್ ಮಾಡ್ತಾ ಇದೀನಿ

ನವ್ಯ : ಲೋ... ಗೂಬೆ ತಮಾಷೆ ಮಾಡ್ಬೇಡ್ವೋ

ಮನು : ತಮಾಷೆ ನಾನ್ ಮಾಡ್ತಾ ಇದಿನ ನಿನ್ ಮಾಡ್ತಾ ಇದೀಯ ಅಲ್ಲಾ ಮಧ್ಯ ರಾತ್ರಿ ಕಾಲ್ ಮಾಡಿ ಏನ್ ಮಾಡ್ತಾ ಇದೀಯ ಅಂತ ಕೇಳ್ತಿಯಲ್ಲ ರಾತ್ರಿ ಏನ್ ಮಾಡ್ತಾರೆ ..?

ನವ್ಯ : ಏನಾದ್ರು ಮಾಡು ನನಗೀಗ ಆ ಹೂವು ಬೇಕು ಅಷ್ಟೇ

ಮನು : ಯಾವ್ ಹೂವು ಡಿಯರ್ ?

ನವ್ಯ : ಅದೇ ಸಂಜೆ ನೀನು ಆ ಬೆಟ್ಟದ ತುದಿಗೆ ಹೋಗಿ ತಗೊಂಡು ಬಂದಲ್ಲ ಅದು ಕಣೋ

ಮನು : ಅದನ್ನ ಅವಗ್ಲೆ ಕೊಟ್ನಲ್ಲ ನವ್ಯ

ನವ್ಯ : Sorry ಕಣೋ ನಾನು ನಿನ್ನ್ನ ಜೊತೆ ಮಾತಾಡ್ತಾ ಅದನ್ನ ಅಲ್ಲೇ ಬಿಟ್ಟು ಬಿಟ್ಟೆ ಲೋ ಪ್ಲೀಸ್ ಕಣೋ ನನಗೆ ಅದು ಬೇಕು ಹೇಗಾದ್ರು ಮಾಡಿ ತಗೊಂಡು ಬಾರೋ

ಮನು : ಆಯ್ತು ಬೆಳಗ್ಗೆ ತಗೊಂಡು ಬಂದು ಕೊಡ್ತೀನಿ ಈಗ ಮಲ್ಕೋ

ನವ್ಯ : ಲೋ ನನಗೆ ಈಗಲೇ ಬೇಕು ಕಣೋ ನನಗೋಸ್ಕರ ಅಷ್ಟು ಮಾಡಲ್ವ ಪ್ಲೀಸ್ ಕಣೋ ನೀನು ಇಷ್ಟೇನಾ ನಿನ್ನ ಲವ್.

ಮನು : ಹೇ ಚಿನ್ನು ನನ್ನ ಲವ್ ಮೇಲೆ ನಿನಗೆ ಡೌಟಾ ತಾಳು ಇನ್ನೊಂದು ಘಂಟೆಲಿ ಆ ಹೂವು ನಿನ್ನ ಕೈಯಲ್ಲಿ ಇರುತ್ತೆ

( ಮನು ಫೋನ್ ಸ್ವಿಚ್ ಆಫ್ ಮಾಡ್ತಾನೆ )

ನವ್ಯ : ಹಲೋ... ಹಲೋ... ಮನು ನಾನು ಸುಮ್ನೆ ಹೇಳ್ದೆ ಕಣೋ ಹಲೋ...

*

*

*

*

ಸ್ವಲ್ಪ ಸಮಯದ ನಂತರ ಮನು ಮತ್ತೆ ನವ್ಯಗೆ ಫೋನ್ ಮಾಡ್ತಾನೆ

ನವ್ಯ : ಹಲೋ ಏನೋ ಮದ್ಯ ರಾತ್ರಿ ನಿಂದು

ಮನು : ಹೂವು ಬೇಕು ಅಂದೆಲ್ಲ ತಗೊಂಡು ಬಂದಿದೀನಿ ನಿಮ್ಮ ಮನೆ ಹತ್ರದಲ್ಲೆ ಇದೀನಿ ಬಾ ಅಂದ್ರೆ ಮನೆ ಗೆ ಬರ್ತೀನಿ

ನವ್ಯ : ಲೋ ಗೂಬೆ ಇಷ್ಟೊತ್ತಲ್ಲಿ ಯಾಕೋ ಮನೆಗೆ ಬರ್ತೀಯ, ಅಪ್ಪ ನೋಡಿದ್ರೆ ಕಷ್ಟ ಕಣೋ ಹೂವು ಬೇಕಾದ್ರೆ ಬೆಳಗ್ಗೆ ತಗೋತೀನಿ ಈಗ ಹೋಗು.......
ನಾನೇನು ಸುಮ್ನೆ ತಮಷೆ ಮಾಡೋಕೆ ಹೇಳ್ದೆ ಅದನ್ನೇ ನೀನು ನಿಜ ಅನ್ಕೊಂಡು ಇಷ್ಟೊತ್ತಲ್ಲಿ ಆ ಬೆಟ್ಟಕ್ಕೆ ಹೋಗಿದಿಯಲ್ಲ ಏನ ಹುಚ್ಚನೋ ನೀನು

ಮನು : ನಿಜ ಕಣೆ ನಾನು ಹುಚ್ಚನೆ ನಿನ್ನ್ನ ಲವ್ ನಲ್ಲಿ ಬಿದ್ದಿರೋ ದೊಡ್ಡ ಹುಚ್ಚ, ನೀನು ನನಗೆ ನಿನ್ನ ಲವ್ ಇಷ್ಟೇನಾ ಅಂತ ಕೇಳ್ದೆ ಅಲ್ವ ಅದಕ್ಕೆ ನನ್ನ ಲವ್ ಏನು ಅಂತ ಗೊತ್ತಾಗಲಿ ಅಂತ ತಗೊಂಡು ಬಂದೆ, ಪರವಾಗಿಲ್ಲ ನಿನ್ನು ಮಲ್ಕೋ ನಾನು ಬೆಳಗ್ಗೆನೇ ಕೊಡ್ತೀನಿ

ನವ್ಯ : ಓಕೆ ಬೈ ಕಣೋ ಹುಷಾರಾಗಿ ಹೋಗು ಹೋಗ್ತಾ ರಸ್ತೆ ಸರಿ ಇಲ್ಲಾ ಮಳೆ ಬೇರೆ ಬರೋಹಾಗಿದೆ

ಮನು : ನಿನ್ನ ಮುಂದೆ ಆ ಮಳೆ ಯಾವ ಲೆಕ್ಕ ಬಿಡು..... ಸರಿ ನಿನ್ ಮಲ್ಕೋ

ನವ್ಯ : I Miss you da

ಮನು : No chance ನಾನು ಯಾವಾಗಲು ನಿನ್ನ ಜೊತೇನೆ ಇರ್ತೀನಿ ಆರಾಮಾಗಿ ನಿದ್ದೆ ಮಾಡು

ನವ್ಯ : Really I Miss You da... .... ... ಹಲೋ... ಹಲೋ... ಮನು

ಮನು : ಒಹ್ ಬ್ಯಾಟರಿ ಲೋ ಸ್ವಿಚ್ ಆಫ್

ಮನು ಅಲ್ಲಿಂದ ಮನೆಗೆ ಹೋಗಬೇಕಾದ್ರೆ ಮಳೆ ಬರ್ತಾ ಇರುತ್ತೆ ಅಲ್ದೆ ರಸ್ತೆ ಹಾಳಾಗಿರುತ್ತೆ ಬೈಕ್ನಾ ಹೆಡ್ ಲೈಟ್ ಬೇರೆ ಕೆಡುತ್ತೆ ನಡು ರಾತ್ರಿ ಕತ್ತಲಲ್ಲಿ ದಾರಿನೇ ಕಾಣತ ಇರೋದಿಲ್ಲ ಮನೆ ಮುಟ್ಟೋಕೆ ಇನ್ನು ೧ ಕಿ.ಲೋ.ಮೀಟರ್ ಇರುತ್ತೆ ಅದರಲ್ಲೂ ಹೇಗೋ ಮನೆ ಸೇರ್ಕೊಳ್ಳೋಣ ಅಂತ ನಿದಾನಕ್ಕೆ ಬೈಕ್ ನಲ್ಲಿ ಹೋಗ್ತಾ ಇರುವಾಗ ನೋಡ್ತಾ ನೋಡ್ತಾನೆ ಹಿಂದಿಂದ ಒಂದು ಲಾರಿ ಬಂದು ಮನು ಬೈಕ್ ಮೇಲೆ ಹಾದು ಹೋಗುತ್ತೆ.....! ! !.... ? ? ?


ಮನುಗೆ ಆಕ್ಸಿಡೆಂಟ್ ಆಗಿರೋ ವಿಷಯ ನವ್ಯಗೆ ಗೊತ್ತಾಗಿದ್ದೆ ತಡ ನೋಡ್ಬೇಕು ಅಂತ ತುಂಬಾ ಪ್ರಯತ್ನ ಪಡ್ತಾಳೆ ಆದ್ರೆ ಮನೆಯಲ್ಲಿ ಇವಳ ಮನುನ ವಿಷಯ ತಿಳಿದು ನವ್ಯಗೆ 2 ದಿನದಲ್ಲೇ ಬಲವಂತವಾಗಿ ಬೇರೆ ಒಬ್ಬನ ಜೊತೆ ಮಧುವೆ ಮಾಡಿ ಬಿಡ್ತಾರೆ, ಮನಸ್ಸು ಒಪ್ಪದೆ ಇದ್ರೂ ಅಪ್ಪನ ಮಾತಿಗೆ ಹೆದರಿ ಮದುವೆ ಆಗ್ತಾಳೆ.

ಆದ್ರು ಮನಸ್ಸು ಎಲ್ಲೋ ಒಂದು ಕಡೆ ಪ್ರತಿ ನಿಮಿಷನು I MissYou ಮನು ಅಂತ ನಿಟ್ಟುಸಿರು ಬಿಡ್ತಾ ಇರುತ್ತೆ ! ಬಿಡ್ಲೇ ಬೇಕು ಅಲ್ವ !

*

*

*

*

*

*

( ಐದು ವರ್ಷಗಳ ನಂತರ )


ಮನು ಅದೇ ಬೆಟ್ಟದ ಮೇಲೆ ಏನೋ ಯೋಚನೆ ಮಾಡ್ತಾ ಕುತಿರ್ತನೆ ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ದುಃಖನಾ ಯಾರಿಗೂ ಹೇಳ್ದೆ ಒಬ್ಬನೇ ನೋವು ಅನುಭವಿಸುತ್ತ ಹುಚ್ಚನ್ ಥರ ಆಗಿರ್ತಾನೆ, ತನ್ನ ತಾಯಿ ಒಬ್ಬಳನ್ನ ಬಿಟ್ಟು ಯಾರ್ ಜೋತೆನು ಮಾತಾಡೋಕೆ ಇಷ್ಟ ಪಡೋಲ್ಲ ತಾನಾಯ್ತು ತನ್ನ ಕೆಲಸ ಆಯ್ತು ಆದ್ರೆ ಸ್ವಲ್ಪ ದಿನಗಳ ಹಿಂದೇ ಅವ್ಳು ಇವನ ಬಿಟ್ಟು ಹೋದ್ಲು,

ಪ್ರತಿ ಸಂಜೆ ಈ ಬೆಟ್ಟಕ್ಕೆ ಬರೋದು ಮಾತ್ರ ಮರಿಥ ಇರ್ಲಿಲ್ಲ ತನಗೆ ಸಾಕಾಗೋ ತನಕ ಇಲ್ಲಿ ಕೂತು ಒಬ್ನೇ ಕಣ್ಣೀರ್ ಹಾಕ್ತ ಇರ್ತಾನೆ ಆಮೇಲೆ ಮನೆಗೆ ಎದ್ದು ಹೋಗ್ತಾನೆ ಹೀಗಿರುವಾಗ ಒಂದು ದಿನ ಮನು ಬೆಟ್ಟದ ಮೇಲೆ ಕಣ್ಣು ಮುಚ್ಚಿ ಕುಳ್ತಿರ್ತನೆ ಯಾರು ಹಿಂದಲಿಂದ ಬಂದು ಒಂದು ಪುಟ್ಟ ಕೈಗಳು ಅವನ ಕಣ್ಣು ಮುಚ್ಚುತ್ತವೆ. ಆ ಕೈಗಳ ಸ್ಪರ್ಶದಿಂದ ಮತ್ತೆ ಮನುಗೆ ಜೀವ ಬಂದಂತೆ ಭಾಸವಾಗುತ್ತೆ ಆ ಕೈಗಳನ್ನ ಹಿಡಿದು ತಿರುಗಿ ನೋಡಿದಾಗ ಅವನಿಗೆ ತುಂಬಾ ಆಶ್ಚರ್ಯ ಆಗುತ್ತೆ ಪರಿಚಯನೇ ಇರದೆ ಇರೋ ಒಂದು ಮುದ್ದಾದ ಚಿಕ್ಕ ಮಗು ಇವನಿಗೆ ಆ ಮುಖನ ಎಲ್ಲೋ ನೋಡಿದ ನೆನಪು ಆ ಮಗುನ ತನ್ನ ಹತ್ರ ಕರ್ದು . . .

ಮನು : ಯಾರು ಕಂದಾ ನೀನು ? ನಿನ್ನ ಹೆಸರೇನು ?

ಮಗು : ಅಂಕಲ್ ನಾನು ಪ್ರೀತಿ ಅಂತ

ಮನು : (ಅಕ್ಕ ಪಕ್ಕ ನೋಡಿ) ಒಹ್ ಈ ಬೆಟ್ಟದಮೇಲೆ ಹೇಗೆ ಬಂದೆ ಯಾರು ಜೊತೆಗೆ ಇಲ್ವಾ

ಮಗು : ಇಲ್ಲಾ ಅಂಕಲ್ ನಾನು ಮಮ್ಮಿ ಡ್ಯಾಡಿ ಜೊತೆ ಬಂದಿದ್ದೆ ಅವರೆಲ್ಲ ಆ ಕಡೆ ದೇವಸ್ತಾನಕ್ಕೆ ಹೋದ್ರು

ಮನು : ಮತ್ತೆ ನೀನ್ಯಾಕೆ ಇಲ್ಲಿಗೆ ಬಂದೆ ಹಾಗೆಲ್ಲ ಅಮ್ಮನ ಬಿಟ್ಟು ಬರ್ತರ

ಮಗು : ಅಲ್ಲಿ ನೋಡಿ ಆ ಹೂ ಕಾಣುತ್ತ ಇದೆಯಲ್ಲ ಅದನ್ನ ನಾನು ದ್ಯದಿಗೆ ಕಿತ್ತು ಕೊಡು ಅಂದೇ ಹ್ಹ ಹ್ಹ ಹ್ಹ ಡ್ಯಾಡಿ ಬೆತ್ತ ಹತ್ತೋಕೆ ಆಗ್ದನೆ ಹೆದರಿಕೊಂಡು ನನಗೆ ಬೈದ್ರು ಅದಕ್ಕೆ ನಾನು ಗೊತ್ತಿಲ್ಲದಂತೆ ಇಲ್ಲಿಗೆ ಬಂದೆ ಅಂಕಲ್ ಅಂಕಲ್ ನಿವಾದ್ರು ಆ ಹುವುನಾ ತಂದು ಕೊಡ್ತೀರ ನನಗೆ ಅದು ಬೇಕು ಇಲ್ಲಾಂದ್ರೆ ನಾನೇ ಹೋಗಿ ತಗೋತೀನಿ

ಮನು : ಹೇ ನಿಂತ್ಕೋ ಪುಟ ನಾನೇ ತಂದು ಕೊಡ್ತೀನಿ ಬಾ ಇಲ್ಲಿಯ

ಮಗು : ನಿಜವಾಗಲು ತಂದು ಕೊಡ್ತಿರಾ.... ಪ್ರಾಮಿಸ್ ಹಾಕಿ

ಮನು : ನಿಜ ಕಂದಾ ಹೂಬಾಡಿ ಹೋಗುತ್ತೆ ಅಂತ ಗೊತ್ತಿದ್ರು ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ ಇನ್ನು ಏನು ಅರೆಯದು ಪುಟ್ಟ ಹೃದಯದ ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ

( ಮನು ಮೇಲಕ್ಕೆ ಏಳಲಾರದೆ ಎದ್ದು ಕುಂಟುತ್ತ ಹೂವು ಕೀಳಲು ಹೋಗ್ತಾನೆ )

ಮಗು : ಅಂಕಲ್ ನಿಮ್ ಕಾಲಿಗೆ ಏನಾಗಿದೆ ಯಾಕ ಕುಂಟುತ್ತಾ ಇದಿರಾ

ಮನು : ಅದಾ 5 ವರ್ಷದ ಹಿಂದೇ ರಾತ್ರಿ ಬೈಕ್ ಅಲ್ಲಿ ಬರುವಾಗ ಆಕ್ಸಿಡೆಂಟ್ ಆಗಿ ಹೀಗಾಗಿದೆ ಎಲ್ಲಾ ಹಣೆ ಬರಹ

ಮಗು : ಅಂಕಲ್ ನನಗೆ ಹೂವು ಬೇಡ ನೀವು ಹೇಗೆ ಅಷ್ಟೊಂದು ತುದಿಗೆ ಹೋಗ್ತಿರಾ ನನಗೆ ಭಯ ಆಗುತ್ತೆ

ಮನು : ಹ್ಹ ಹ್ಹ ಹ್ಹ ನನ್ನ ನಡೆಯೋದು ನೋಡಿ ನೀನು ಹಾಗೆ ಹೇಳ್ತಾ ಇದೀಯ ನನಗೆ ಗೊತ್ತು ನನಗೆ ಆ ಬೆಟ್ಟದ ತುದಿ ಹೊಸದೇನು ಅಲ್ಲಾ ನೀನು ಇಲ್ಲೇ ಇರು ಕಂದಾ ನಾನು ಆ ಹೂವುನ ತಗೊಂಡು ಬರ್ತೀನಿ

ಮಗು : ಅಂಕಲ್ ಬೇಡ ಅಂಕಲ್ ಪ್ಲೀಸ್

(ಮಗುನಿನ ಮಾತು ಗಮನಕ್ಕೆ ಕಿವಿಗೆ ಹಾಕೊಲ್ದಾನೆ ಮನು ಹೂವಿಗಾಗಿ ಬೆಟ್ಟದ ತುದಿಗೆ ಹೋಗಿ ಹೂವುನಾ ಕಿತ್ತು ಕೈಯಲ್ಲಿ ಇಟ್ಕೊಂಡು ಇಳಿಯುವಾಗ ಕಾಲು ಜಾರಿ ಪ್ರಪಾತಕ್ಕೆ ಬಿಳೋ ಅಷ್ಟರಲ್ಲಿ ಮತ್ತೆ ಮಗು ಕುಗುತ್ತೆ

ಮಗು : ಅಂಕಲ್ I MISS YOU ಅಂಕಲ್

ಮನುಗೆ ನಾನು ಬದುಕ್ತೀನಿ ಅನ್ನೋ ನಂಬಿಕೇನೆ ಕಳ್ಕೊಂಡು ಇರ್ತಾನೆ ಮಗುವಿನ I MISS YOU ಅನ್ನೋ ಮಾತು ಕೆಲ್ದಾಕ್ಷಣ ತಾನು ಬದುಕಬೇಕು ಅಂದಕೊಂಡು ಹಾಗೂ ಹೀಗೆ ಕಷ್ಟ ಪಟ್ಟು ಮೇಲೆ ಬರ್ತಾನೆ ಬದುಕ್ತು ಬಡಪಾಯಿ ಜೀವ ಅಂತ ನಗು ಮುಖದಲ್ಲಿ ಮಗು ಕಡೆ ನೋಡ್ತಾನೆ ಸುತ್ತಲು ಸಾಯುವಾಗ ಬಂದು ಕಾಪಾಡದೆ ಇರೋ ಜನ ಅದ್ಯಾವುದರ ಅರಿವಿಲ್ಲದೆ ಮಗುವನ್ನೇ ಹುಡುಕುತ್ತ ಇರೋ ಕಣ್ಣುಗಳು.......

ಮಗು ಯಾರನ್ನೋ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದೆ ಹತ್ತಿರ ಹೋಗಿ ಕೈಯಲ್ಲಿರೋ ಹೂ ಕೊಡೋಣ ಅಂತ ನಿಧಾನವಾಗಿ ಇಳಿದು ಬರ್ತಾನೆ ಅಷ್ಟರಲ್ಲಿ ಮಗು ಮನು ಹತ್ರ ಓಡಿ ಬಂದು ಅಪ್ಪಿಕೊಂಡು ಅಳುತ್ತೆ

ಮನು : ತಗೋ ಕಂದಾ ಹೂ

ಮಗು : ನಿಮಗೇನು ಆಗಿಲ್ಲ ಅಲ್ವ ! sorry ಅಂಕಲ್

ಮನು : ಇಲ್ಲಾ ಕಂದಾ ಏನು ಆಗಿಲ್ಲ ತಗೋ ಈ ಹೂ ನಾ



ಅಷ್ಟರಲ್ಲಿ ಆ ಮಗುವಿನ ತಾಯಿ ಓಡಿ ಒಮ್ಮೆ ಮನು ನಾ ನೋಡ್ತಾಳೆ ಮೊದ್ಲು ಮೊದ್ಲು ಕಣ್ಣುಗಳು ಅವನನ್ನ ಗುರುತಿಸದೆ ಇದ್ರೂ ಮನಸ್ಸು ಮಾತ್ರ ಅವನ ಗುರುತು ಹಿಡಿದು ಕಣ್ಣಲ್ಲಿ ನೀರು ತುಂಬಿಕೊಂಡು ದುಃಖದಲ್ಲಿ ಮನು ಹೇಗಿದಿಯೋ ಏನೋ ಹೇಗಾಗಿದಿಯಲ್ಲೋ ನನ್ನ ಕ್ಷಮಿಸಿ ಬಿಡೋ ನಾನು ನಿನಗೆ ಮೋಸ ಮಾಡಿದ್ಯೇ ...ಅಂತ ಒಂದೇ ಸಮನೆ ಅವನ ಕೈ ಹಿಡಿದು ಅಳ್ತಾ ಇರುವಾಗ ನವ್ಯಳ ಗಂಡ ಬಂದು ಮಗುನ ಎತ್ತಿಕೊಂಡು ಪಕ್ಕದಲ್ಲೇ ನಿಲ್ತಾನೆ

ಮನು : ಹೇ... ನವ್ಯ ನೀನು ಇಲ್ಲಿ...... ಅಂತು ಬಂದ್ಯಲ್ಲಾ ನನ್ನ ನೋಡೋಕೆ........
ಸಾಯೋಕು ಆಗದೆ ಬದುಕೊಕು ಆಗದೆ ಪ್ರತಿ ಕ್ಷಣನು ನಿನ್ನ ನೆನಪಲ್ಲೇ ಕೊರುಗ್ತಾ ಇದ್ದೆ ಮೋಸ ನಿನ್ ಮಾಡ್ಲಿಲ್ಲ ನಮ್ಮ ಲೈಫ್ ನಲ್ಲಿ ಆ ವಿಧಿ ಮಾಡ್ತು ಅಷ್ಟರಲ್ಲಿ ನವ್ಯಳ ಗಂಡ ಬಂದು ಭುಜದ ಮೇಲೆ ಕೈ ಇಟ್ಟು ನವ್ಯ ಹೋಗೋಣ್ವಾ ಅಂತ ಕರಿತನೆ ನವ್ಯನ್ನ ನೋಡ್ತಾ ನೋಡ್ತಾ ಮನು ಮಾತು ನಿಲ್ಲಿಸಿ ಸುಮ್ನಾಗ್ತಾನೆ ಈ ಕಡೆ ಮಗು ಒಂದೇ ಸಮನೆ ಅಳ್ತಾ ಇರುತ್ತೆ ಕಣ್ಣಲ್ಲಿ ನೀರು ತುಂಬಿಕೊಡು ಸುತ್ತುಗಟ್ಟಿದ ಜನ ಆಗಲೇ ನವ್ಯ ಗೆ ಮನು ಆಡಿದ್ದ ಮಾತುಗಳು ನೆನಪಾಗ್ತವೆ "ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ" ಅದನ್ನೇ ನೆನಪು ಮಾಡಿಕೊಳ್ತಾ ಮಾಡಿಕೊಳ್ತಾ ನವ್ಯಳ ಹೃದಯಾ ಬಡಿತ ನಿಲ್ಲುತ್ತೆ ಹಾಗೆ ಕಣ್ಣು ಮುಚ್ಚುತಾಳೆ


ಹೌದು ನವ್ಯಗೆ ಹೃದಯ ಸಂಭಂಧಿ ಕಾಯಿಲೆ ಇತ್ತು ತನ್ನ ಪ್ರಿತಿಬಗ್ಗೆ ಗಂಡ ಹತ್ರ ಎಲ್ಲಾ ಹೇಳಿಕೊಂಡಿದ್ಲು ಅದಕ್ಕೆ ಮನು ಸಿಗಬಹುದು ಒಂದು ಸರಿ ನೋಡ್ಬೇಕು ಅಂತಾನೆ ಗಂಡನೇ ಜೊತೆ ಸುಮಾರು ಐದು ವರ್ಷಗಳ ನಂತರ ಇಲ್ಲಿಗೆ ಬಂದಿದ್ಲು


ಹಾಗಾದ್ರೆ ಇಲ್ಲಿ ಮಿಸ್ ಆಗಿದ್ದು ಯಾರು ?

ಮಿಸ್ ಮಾಡಿಕೊಂಡಿದ್ದು ಯಾರು ?

ಅಮರ ಪ್ರೇಮ ಅಂದ್ರೆ ಇದೇನಾ ?

ನಿಜವಾದ ಪ್ರೀತಿ ಸಾವಲ್ಲೇ ಕೊನೆ ಕಾಣುತ್ತ ?

ಕೊನೆ ಏನು ಕಾಣುತ್ತೋ ಬಿಡುತ್ತೋ ಗೊತ್ತಿಲ್ಲ ಈ ಸ್ಟೋರಿ ಓದಿದ ನಿಮಗೆ ನಿಮ್ಮ ಕಣ್ಣಿನಲ್ಲಿರೋ ಒಂದು ಹನಿಯಾದ್ರು ಕೆನ್ನೆ ಮೇಲೆ ಜಾರಿ ಕೊನೆ ಕಂಡೆ ಕಾಣುತ್ತೆ ಯಾಕಂದ್ರೆ ನಿಮಗೂ ಹೃದಯ ಇದೇ ಅಲ್ವ !


ನಿಮ್ಮ ಹುಡುಗ
?ದೊಡ್ಡಮನಿ.ಮಂಜು

Thursday, 1 April 2010

ರಾ... ರಾ... ನಾಗವಲ್ಲಿಯ ಬುರುಡೆ ಪತ್ತೆ ಆದದ್ದು ಹೀಗೆ !


ಯಾರು ಈ ನಾಗವಲ್ಲಿ ?
ನೀವು ಅನ್ಕೊಂಡಿರೋ ರೀತಿ ನಾಗವಲ್ಲಿ ಕೇವಲ ಆಪ್ತ ಮಿತ್ರ ಅಥವಾ ಆಪ್ತ ರಕ್ಷಕ ಸಿನಿಮಾದ ಕತೆಯಲ್ಲಿ ಬರೋ ಕೇವಲ ಒಂದು ಪಾತ್ರ ಅಲ್ಲಾ !
ನಾಗವಲ್ಲಿ ಅನ್ನೋ ಪದನೆ ಅದ್ಬುತ ಇನ್ನು ಆ ದಂತ ಕತೆ ಕೇಳಿದ್ರೆ ಮೈ ನವಿರೆಳುತ್ತೆ !

ನಾಗವಲ್ಲಿಯ ನೆಲೆ ಎಲ್ಲಿ ?
ನಾಗವಲ್ಲಿ ಬಗ್ಗೆ ಆಪ್ತ ರಕ್ಷಕ ಸಿನಿಮಾ ನೋಡಿದ ದಿನದಿಂದ ಇಲ್ಲಿಯವರೆಗೂ ತುಂಬಾ ಕಾಡ್ತಾ ಇದ್ದ ಈ ನಾಗವಲ್ಲಿ ಯಾರು ಅಂತ ಪ್ರತಿ ಬಾರಿನು ಏನಾದ್ರು ಹೊಸದಾಗಿ ಮಾಡಿಬೇಕು ಅಂತ ಅನ್ಕೊಳ್ತಿದ್ದ ನನಗೆ ಆಪ್ತ ರಕ್ಷಕ ಸಿನಿಮಾ ನೋಡಿ ಬಂದ ಮೇಲೆ ನಾನು ಶುರು ಮಾಡಿದ್ದೆ ನಾಗವಲ್ಲಿಯ ನೆಲೆ ಎಲ್ಲಿ ?

ನಾನು ನನ್ನ ಫ್ರೆಂಡ್ಸ್ ಜೊತೆ ತಮಿಳುನಾಡಿನ "ನಾಗವೆಳು" ಅನ್ನೋ ಒಂದು ಹಳ್ಳಿಗೆ ಹೋಗಿದ್ವಿ ಅಲ್ಲಿ ಕೆಲವು ಮಾಹಿತಿಗಳು ಸಿಕ್ಕವು ಒತ್ತು ಒಂದು ಹದಿನೈದು ಬಾರಿ ನಾವು ಆ ಗ್ರಾಮಕ್ಕೆ ಬೇಟಿ ನಿಡಿದ್ವಿ, ಅಲ್ಲಿ ಒಬ್ಬರ ಮನೆಯಲ್ಲಿ ನಮಗೆ ನಾಗವಲ್ಲಿಯ ಮಾಹಿತಿ ಇರೋ ಪ್ರಾಚಿನ ಪುಸ್ತಕ ಸಿಕ್ತು ಅದನ್ನ ಅವರಿಂದ ಕೇಳಿ ತಗೆದು ಕೊಂಡು ಬಂದು ಸ್ಟಡಿ ಮಾಡೋಣ ಅಂದ್ರೆ ಅದು ಸಂಪೂರ್ಣವಾಗಿ ತಮಿಳು ಮಿಶ್ರಿತ ಸಂಸ್ಕೃತದಲ್ಲಿ ಇತ್ತು ಆಗ ಅದನ್ನ ನನಗೆ ಪರಿಚಯ ಇದ್ದ ಒಬ್ಬ ತಮಿಳು ವಿಶ್ವವಿದ್ಯಾಲಯದ ಕುಲಪತಿ ಡಾ!. ಎ.ಪ. ಮುರುಕನರಂ ಮೂರ್ತಿ ಅವರ ಹತ್ರ ಹೋಗಿ ಎಲ್ಲವನ್ನು ಕನ್ನಡಕ್ಕೆ ಅನುವಾದ ಮಾಡಿಸಿಕೊಂಡು ಬಂದ್ವಿ ಅದಕ್ಕೆ ನಾವು ತಗೊಂಡಿದ್ದು ಒಂದೂವರೆ ತಿಂಗಳು.

ನಂತರ ನಾನು ನನ್ನ ಜೊತೆ 4 ಜನ ಹಾಗೆ ಹವ್ಯಾಸಿ ಪತ್ರಕರ್ತ ರಮೇಶ್ ಅವರ ಜೊತೆ "ನಾಗವೆಳು" ಗ್ರಾಮಕ್ಕೆ ಮತ್ತೆ ಹೋದ್ವಿ ಅಲ್ಲಿಂದ 15 ಕಿ.ಮೀಟರ್ ಕಾಲು ನಡೆಗೆಯಲ್ಲಿ ಹೋದ್ರೆ ನಮಗೆ ಸಿಕ್ಕಿದ್ದು ಒಂದು ಆಲದ ಮರ ಅಲ್ಲಿ ಸ್ವಲ್ಪ ಕೂತುಕೊಂಡು ವಿಶ್ರಾಂತಿ ತಗೊಂಡು ಮತ್ತೆ ಹೊರಟ್ವಿ ಆಗ್ಲೇ ಸಂಜೆ ಆಗಿತ್ತು ಕೈಯಲ್ಲಿ ಎರಡು ಟಾರ್ಚ್ ಬಿಟ್ರೆ ಬೇರೇನೂ ಇರ್ಲಿಲ್ಲ ಹೋಗ್ತಾ ಹೋಗ್ತಾ ಕತ್ತಲಗಿದ್ದೆ ಗೊತ್ತೇ ಆಗ್ಲಿಲ್ಲ. ತುಂಬಾ ಸುಸ್ತಾಗಿತ್ತು ಅದಕ್ಕೆ ನಾವು ಅವತ್ತು ಅಲ್ಲೇ ಉಳಿದುಕೊಳ್ಳೋಣ ಅಂತ ಯಾವದಾದ್ರು ಒಂದು ಒಳ್ಳೆ ಪ್ಲೇಸ್ ನೋಡ್ತಾ ಇದ್ವಿ ಮಹಾನ್ ಬುದ್ದಿವಂತರು ಕಾಡಲ್ಲಿ ಹೋಗಿ ಒಳ್ಳೆ ಪ್ಲೇಸ್ ಗೆ ಸರ್ಚ್ ಮಾಡ್ತಾ ಇದ್ವಿ :) ಕಾಡು ಬೇರೆ ನಮ್ಮ ಮನೆ ಹತ್ರ ಯಾವದಾದ್ರು ನಾಯಿ ಬೊಗಳಿದರೆ ಹೆದರಿಕೊಳ್ಳೋ ನಾನು ಆ ಕಾಡ್ನಲ್ಲಿ ನರಿಗಳು ಕೂಗೋದು ಗೂಬೆಗಳ ಸದ್ದು ಎಲ್ಲ ಕೇಳಿ ಕೇಳಿ ಮನಸ್ಸನಲ್ಲಿ ಅನ್ಕೊಳ್ತಾ ಇದ್ದೆ ಮಂಜ ಇದೆಲ್ಲ ನಿನಗೆ ಬೇಕಾಗಿತ್ತಾ ಅಂತ ಮನೆಗೆ ಗೊತ್ತಾದ್ರೆ ನನ್ನ ಕತೆ ಅಷ್ಟೇನೆ ಹೇಗೋ ಬಂದಿದಿವಿ ಜೀವಂತವಾಗಿ ಊರಿಗೆ ಸೇರಿದರೆ ಸಾಕು ಅನಿಸ್ತ ಇತ್ತು ! ಹಾಗೋ ಹೀಗೋ ಹೇಗೋ ನಮ್ಮ ರಮೇಶ್ ಕಣ್ಣಿಗೆ ಒಂದು ಮನೆ ಕಾಣ್ತು ಅಬ್ಬಾ ಏನ್ ಧೈರ್ಯ ಅಂತಿರ ಅವಂದು ತನ್ನ ಕೈಯಲ್ಲಿ ಇದ್ದ ಕ್ಯಾಮರ ಹೊರ ತೆಗೆದು ಫೋಟೋ ತಗಿತಾ ಆ ಮನೆ ಹತ್ರ ಹೋಗ್ತಾ ಇದ್ದ ನಾವು ಅವನ ಹಿಂದೇ ಹೋಗ್ತಾ ಇದ್ವಿ ಅಂತು ಇಂತೂ ಮನೆ ಹತ್ರ ಬಂದ ಮೇಲೆ ನಮಗೆ ಗೊತ್ತಾಗಿದ್ದು ನಾವು ಬರಬೇಕಾದ ಪ್ಲೇಸ್ ಗೆ ಆಗಲೇ ಬಂದಿದಿವಿ ಅಂತ !

ಅಲ್ಲಿ ತನಕ ಇಲ್ದೆ ಇರೋ ಹೆದರಿಕೆ ಆ ಮನೆ ಹತ್ರ ಹೋದ ಮೇಲೆ ನಮಗೆ ಶುರುವಾಯ್ತು ಕತೆ ಕವನ ಬರಕೊಂಡು ಹಾಯಾಗಿದ್ದೆ ಈ ಹಾಳು ಐಡಿಯಾ ಕೊಟ್ಟು ನಾನು ಹಾಳಾದೆ ಅಂತ ಗುನುಗುತ್ತಾ ರಮೇಶನ ಹಿಂದೇ ಹಿಂದೇ ಹೋದೆ ಇನ್ನೇನು ಬಾಗಿಲ ಒಳಗೆ ಹೋಗ್ಬೇಕು ಅಷ್ಟರಲ್ಲಿ ಒಳಗಡೆ ಇಂದ ಯಾವ್ದೋ ಪಕ್ಷಿ ಹಾರಿ ಹೋಯ್ತು ಅಬ್ಬಾ ಎದೆ ಹಾಗೆ ಜಲ್ಲ ಅಂತು.

ನಾಗವಲ್ಲಿಯ ಬುರುಡೆ ಪತ್ತೆ ಆದದ್ದು ಹೀಗೆ !
ಹಾಗೂ ಹೀಗೋ ಒಳಗಡೆ ಹೋದ್ವಿ ರಮೇಶ್ ಎಲ್ಲ ಫೋಟೋ ತಗಿತಾ ಇದ್ದ ಮನೆ ಎಷ್ಟು ಚನ್ನಾಗಿತ್ತು ಅಂದ್ರೆ ಅರಮನೆ ಥರ ಇತ್ತು ಒಳಗಡೆ ಎಲ್ಲ ಆಮೇಲೆ ಗೊತ್ತಾಗಿದ್ದು ಇದು ನಾಗವೆಳು ರಾಜ್ಯದ ರಾಜನ ಅರಮನೆ ಅಂತ ನಾವು ಅನ್ಕೊಂಡ ರೀತಿ ಅಲ್ಲಿ ಏನು ಇರ್ಲಿಲ್ಲ ಆ ಮನೆಯ ಪ್ರತಿ ಒಂದು ಕೋಣೆಯನ್ನು ಬಿಡದೆ ಹುದುಕಿದ್ವಿ ಏನು ಸಿಗ್ಲಿಲ್ಲ ! ತುಂಬಾ ನಿರಾಸೆ ಆಯ್ತು ಬೆಳಗ್ಗೆ ಆಗಿದ್ದೆ ಗೊತ್ತಾಗ್ಲಿಲ್ಲ ನಮಗೆ ! ಆಗ ಬೆಳಗ್ಗೆ 4 ಇರ್ಬೇಕು ಅನಿಸುತ್ತೆ ನಾನು ಸ್ವಲ್ಪ ಅರಮನೆಯಾ ಪಕ್ಕದಲ್ಲಿ ಒಂದು ಚಿಕ್ಕ ಗೋರಿ ಥರ ಇತ್ತು ಅದನ್ನ ನೋಡೋಣ ಅಂತ ಬಂದ ಅದ್ರ ಮೇಲೆ ಅರ್ಥ ಆಗದ ಭಾಷೆಯಲ್ಲಿ ಏನೇನೊ ಬರೆದಿತ್ತು ಅದನ್ನೆಲ್ಲ ಫೋಟೋ ತಗೊಂಡು ಆಮೇಲೆ ಆ ಗೋರಿ ಉಳಗೆ ಏನಿದೆ ಅಂತ ಗೋರಿನಾ ಒಡೆದು ಬಿಟ್ಟ್ವಿ ಅಬ್ಬಾ ಭಯಾನುಕರ ನನೆಗೆ ನೋಡೋಕೆ ಆಗದೆ ಎದ್ದು ಬಿಟ್ಟು ದೊರ ಬಂದೆ ರಮೇಶ ಅದೇನೋ ಫೋಟೋ ತಗೊಂಡ, ಆಮೇಲೆ ಗೊತ್ತಾಯ್ತು ಇದು ನಾಗವಲ್ಲಿ ಆಸ್ತಿಪಂಜರ ಅಂತ ಅಲ್ದೆ ತಲೆಬುರುಡೆ ಬೇರೆ ತಗೊಂಡು ತನ್ನ ಬ್ಯಾಗ್ ನಲ್ಲಿ ಹಾಕ್ಕೊಂಡ ಅದನ್ನ ನೀವು ನೋಡಲಿ ಅಂತ ಆ ಫೋಟೋ ತಗೊಂಡು ಬಂದಿದೀನಿ ನೋಡಿ !


ಅಲ್ದೆ ಅದ್ರಲ್ಲಿ ನಮಗೆ ಒಂದು ತಾಳೆ ಗರೆ ಇತ್ತು ಅದ್ರಲ್ಲಿ ಒಂದು ವಾಕ್ಯ ಬರದಿತ್ತು ಅದೇನಪ್ಪ ಅಂದ್ರೆ

ವಿಶೇಷ ಸೂಚನೆ :- ಕೆಲವೊಮ್ಮೆ ನಿಮಗೆ ಆ ವಾಕ್ಯಗಳು ಕಾಣದೆ ಇದ್ದಾರೆ ದಯವಿಟ್ಟು ನಿಮ್ಮ ಕೀ ಬೋರ್ಡ್ ನಾ ctrl + A ಒತ್ತಿ ನೋಡಿ ಕಾಣುತ್ತೆ
!

!

!

!

!

!

!

!

!

!

!

!

!

!

!

!

!

!

!

!

!

!
"ಇದುವರೆಗೂ ನಾನು ಓದಿದ ಕತೆ ಕೇವಲ ಕಾಲ್ಪನಿಕ ! ಮತ್ತು ನಾನು ಸಂಪೂರ್ಣವಾಗಿ ಏಪ್ರಿಲ್ ಫೂಲ್ ಆಗಿದ್ದೇನೆ ಎಂದು ಈ ಮೊಲಕ ಘೋಷಿಸುತ್ತಿದ್ದೇನೆ"




Happy & Prosperous fools day
ಇಂತಿ ನಿಮ್ಮ
ಮಂಜು ದೊಡ್ಡಮನಿ

Thursday, 25 February 2010

"ಭಾವನೆಗಳ ಒಡತಿ ನನ್ನ ಮುದ್ದು ಗೆಳತಿ"




ಹೌದು ಈ ಜೀವನ ಅನ್ನೂದು ಎರಡು ಕಂಬಿಗಳ ಮೇಲೆ ಚಲಿಸೋ ರೈಲಿನತರಹ, ನಮ್ಮ ನಮ್ಮ ನಿಲ್ದಾಣ ಬರುವ ತನಕ ನಾವು ಕಾಯ್ಲೆ ಬೇಕು ಅಷ್ಟರೊಳಗೆ ನಮಗೆ ಎಷ್ಟೊಂದು ಅನುಭವಗಳಾಗಿರುತ್ತವೆ ಆಲ್ವಾ ! ಈ ಪಯಣದಲ್ಲಿ ಎಷ್ಟೋ ತಿರುವುಗಳು ಸಿಗ್ತವೆ, ಎಷ್ಟೋ ಜನ ಬಂದು ಇಳಿದು ಕಣ್ಮರೆಯಾಗಿ ಹೋಗ್ತಾರೆ ಅವೆಲ್ಲ ಒಂದು ಸಣ್ಣ ನೆನಪು ಅನ್ನಬಹುದು ಆದ್ರೆ ಈ ರೈಲು ಬಂಡಿಯಾ ಪಯಣದಲ್ಲಿ ಪರಿಚಯವಾಗಿ ಈ ಮನಸ್ಸಿನಲ್ಲಿ ಶಾಶ್ವತ ವಾಗಿ ಉಳಿದು ಕೊನೆಗೆ ಒಂದು ದಿನ ಈ ಬಿಳಿ ಹಾಳೆ ಮೇಲೆ ಅವರ ನೆನಪುಗಳನ್ನ ನನ್ನ ಈ ಕೈ ಗಳಿಂದ ದಾಖಲಿಸುವಂತೆ ಮಾಡ್ತಾರಲ್ಲ ಅಂತಹ ಒಬ್ಬ ಗೆಳತಿನ ನಾ ಹೇಗೆ ಮರೆಯಲಿ, No,Never ಸಾಧ್ಯವಿಲ್ಲದ ಮಾತು. ಆ ಗೆಳತಿನ ಮರೆಯೋದಕ್ಕೆ ಆಗೋಲ್ಲ ಏಕೆಂದರೆ ಅವಳು ನನ್ನ ನೆನಪಿನ ಮಡಿಲಲ್ಲಿ ನೆನಪಾಗಿ ಉಳಿದಿದ್ದಾಳೆ.

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"

ನಿಜಾ, ನಾನು ಹೇಳ್ತಾ ಇರೋದು ನನ್ನ ನೆನಪುಗಳ ಮಡಿಲಲ್ಲಿ ಕೇವಲ ನೆನಪಾಗಿ ಉಳಿದಿರೋ ನನ್ನ ಗೆಳತಿ ಒಬ್ಬಳ ಬಗ್ಗೆ, ಗೆಳತಿ ಅಂದಾಕ್ಷಣ ದಿನಗಳ, ತಿಂಗಳುಗಳ ಅಥವಾ ವರ್ಷಗಳಿಂದ ಪರಿಚಯವಿರುವ ಗೆಳತಿಯ ಬಗ್ಗೆ ನಾ ಹೇಳ್ತಾ ಇಲ್ಲ, ಅವಳು ಅಮೂಲ್ಯವಾದ ಕೆಲವೇ ಕಲವು ಘಂಟೆಗಳ ಗೆಳತಿಯ ಬಗ್ಗೆ,
ಅಂದು ಭಾನುವಾರ, ಆಫೀಸ್ನಲ್ಲಿ ಎರಡು ದಿನ ರಜಾ ಹಾಕಿ ನಾನು ಬೆಂಗಳೂರಿನಿಂದ ದಾವಣಗೆರೆಗೆ ಬೆಳಗ್ಗೆ 6 ಘಂಟೆಯಾ ರೈಲಿಗೆ ಹೋಗ ಬೇಕಿತ್ತು , ಹೇಗೋ ರೈಲ್ವೆ ಸ್ಟೇಷನ್ ತಲುಪಿ ಕ್ವೀ ನಲ್ಲಿ ಟಿಕೆಟ್ ತೆಗೆದುಕೊಂಡು ಪ್ಲಾಟ್ ಫಾರ್ಮ್ ಗೆ ಬರುವಷ್ಟರಲ್ಲಿ ರೈಲ್ ಹೊರಟ್ಟಿತ್ತು ತಕ್ಷಣವೇ ನನ್ನ ಕಾಲುಗಳು ಸಕ್ರಿಯಗೊಂಡು ಓಡಲಾರಂಬಿಸಿದವು ಧೈರ್ಯಮಾಡಿ ಹತ್ತೇ ಬಿಟ್ಟೆ, ನಾನು ಹತ್ತುವುದನ್ನೇ ನೋಡುತ್ತಿದ್ದ ಕೆಲವರು ಹತ್ತಿದ ಮೇಲೆ ಸ್ವಲ್ಪ ಬುದ್ದಿವಾದ ಹೇಳಿದರು ಆ ಬುದ್ದಿವಾದದ ಮಾತುಗಳು ಇಷ್ಟೇ "ಚಲಿಸುವ ರೈಲುಗಾಡಿಯನ್ನು ಹತ್ತ ಬಾರದು" ಅಂತ, ಎಷ್ಟೇ ಅಗಲಿ ಆ ಮಾತುಗಳನ್ನು ಹೇಳಿದವರು ನನಗಿಂತ ಹಿರಿಯರು ಅಲ್ಲದೆ ನನ್ನ ಹಿತೈಷಿಗಳೆಂದುಕೊಂಡು ನಮ್ರತೆಯಿಂದ ಇನ್ನು ಮುಂದೆ ಈ ಥರ ತಪ್ಪು ಮಾಡೋದಿಲ್ಲ ಎಂದು ಹೇಳುತ್ತಾ ಬೋಗಿಯ ಒಳಗೆ ನುಸುಳಿದೆ, ಓಡಿ ಬಂದ ರಭಸಕ್ಕೆ ನನ್ನ ಬಾಯಲ್ಲಾ ಒಣಗಿ ಬಾಯಾರಿಕೆ ಯಾಗಿತ್ತು, ನೀರಿಗಾಗಿ ಬ್ಯಾಗಗೆ ಕೈ ಹಾಕಿ ವಾಟರ್ ಬಾಟಲ್ ತೆಗೆದುಕೊಂಡು ನೀರು ಕುಡಿಯೋಣವೆಂದು ಬಾಟಲ್ ಎತ್ತಿದೆ ಕಣ್ಣು ಮುಚ್ಚಿ ಮೊರ್ನಾಲ್ಕು ಗುಟುಕು ನೀರು ಕುಡಿದು ಒಂದು ನಿಮಿಷ ಅಕ್ಕ ಪಕ್ಕ ಕಣ್ಣಾಡಿಸಿದೆ ಆಗಲೇ ನನ್ನ ಬುದ್ಧಿಗೆ ಅರಿವಾಗಿದ್ದು ನಾನು ಹತ್ತಿರುವುದು ರೆಸೆರ್ವೇಶನ್ ಕೋಚ್ ಅಂತ ತಕ್ಷಣ ಕೈಯಲ್ಲಿದ್ದ ಬಾಟಲನ್ನು ಬ್ಯಾಗಿಗೆ ಹಾಕಿಕೊಂಡು ರೈಲಿನ ಬಾಗಿಲ ಬಳಿ ಹೋಗಿ ನಿಂತೆ ಅಷ್ಟರಲ್ಲಿ ಮಲ್ಲೇಶ್ವರಂ ಸ್ಟಾಪ್ ಬಂತು ಅಲ್ಲಿಂದ ಇಳಿದು ಕೊಂಡು ಹಿಂದಿನ ಜನರಲ ಕೋಚ್ ನಲ್ಲಿ ಹತ್ತಿಕೊಂಡೆ.
ಅದೇನೋ ಗಾದೆ ಇದೆಯಲ್ಲ "ಪಾಪಿ ಸಮುದ್ರಕ್ಕೊದ್ರು ಮೊಳಕಾಲ್ಮಠ ನೀರು" ಅಂದಂಗೆ ಆ ಬೋಗಿಯಲ್ಲಿ ಒಂದು ಸೀಟು ಖಾಲಿ ಇರ್ಲಿಲ್ಲ , ಏನ್ ಮಾಡೋದು ಪಾಲಿಗೆ ಬಂದಿದ್ದು ಪಂಚಾಮೃತ ಅನ್ನಕೊಂಡು ಬೋಗಿ ಒಳಗೆ ಹೋದೆ ಕೊನೇಲಿ ಒಂದೇ ಒಂದು ಸೀಟು ಖಾಲಿ ಇತ್ತು ಅಬ್ಬಾ ಅಂತು ಇಂತೂ ಸೀಟು ಸಿಕ್ತಲ್ಲ ಅಂತ ಖುಷಿಯಿಂದ ಹೋಗಿ ಕೂತುಕೊಂಡೆ, ಪಕ್ಕ ತಿರುಗಿ ನೋಡಿದೆ ನನ್ನ ಪಕ್ಕ ಒಂದು ಹುಡುಗಿ ಕೊತಿದ್ಲು, ನನಗೆ ಈ ಹುಡುಗಿರನ್ನ ಕಂಡ್ರೆ ಸ್ವಲ್ಪ ಸಂಕೋಚ ಹೇಗೋ ಅರ್ಜೆಸ್ಟ್ ಮಾಡ್ಕೊಂಡು ಕೂತುಕೊಂಡೆ, ಟೈಮ್ ಪಾಸ್ಗೆ ಅಂತ ತುಂಬಾ ದಿನಗಳ ಮೇಲೆ ಒಂದು ಕನ್ನಡ ನ್ಯೂಸ್ ಪೇಪರ್ ತಗೊಂಡಿದ್ದೆ ಅದನ್ನ ತೆಗೆದು ಓದುತ್ತ ಕುಳಿತೆ, ಯಾವ ಪೇಜ್ ನಲ್ಲಿ ನೋಡಿದ್ರು ಬರಿ ಕೊಲೆ, ಸುಲಿಗೆ,ದರೋಡೆ ಬಿಟ್ರೆ ಈ ಹಾಳು ರಾಜಕಾರಣದ ಬಗ್ಗೆನೇ ಇತ್ತು ಯಾಕೋ ಓದೋಕೆ ಇಂಟರೆಸ್ಟ್ ಬರಲಿಲ್ಲ ಆ ಪೇಪರ್ ನ ಎದರುಗಡೆ ಸೀಟಿನ ಕಂಬಿಯಲ್ಲಿ ಸಿಗಸಿ ಹಾಗೆ ಕಣ್ಣು ಮುಂಚಿಕೊಂಡು ಕೂತೆ, ಎಲ್ಲೋ ಯಾರೋ ಮಾತನಾಡಿಸಿದ ಹಾಗೆ ಆಯ್ತು , ರಾತ್ರಿ ಊರಿಗೆ ಹೋಗೋ ಸಡಗರದಲ್ಲಿ ನಿದ್ದೆ ಸರಿಯಾಗಿ ಮಾಡಿರಲಿಲ್ಲ ಹಾಗಾಗಿ ನಿದ್ದೆ ಬೇರೆ ಎಳಿತಾ ಇತ್ತು ಅಷ್ಟೊಂದು ಗಮನಕ್ಕೆ ತೆಗೆದುಕೊಳ್ಳಲಿಲ್ಲ, ಮತ್ತದೇ ಧ್ವನಿ "If You don't mind" ನಾನು ನಿಮ್ಮ ಪೇಪರ್ ಓದ ಬಹುದ ಅಂತ ನನ್ನ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಕೇಳಿದ್ಲು, ನನಾದ್ರು ಹೇಗೆ ಇಲ್ಲ ಅನ್ಲಿ ಹುಡುಗಿ ಬೇರೆ ಈ ಮನಸು ಕರಗಿ ನೀರಾಗಿ ಬಿಡ್ತು " ಅಯ್ಯೋ ಪೇಪರ್ ತಾನೇ ತಗೊಳ್ಳಿ " ಅಂತ ನಾನೇ ಎತ್ತಿ ಕೊಟ್ಟು ಮತ್ತೆ ಕಣ್ಣು ಮುಚ್ಚಿ ಕುಳಿತೆ ನಿದ್ದೆ ಹೇಗೆ ಬಂತೋ ಗೊತ್ತಿಲ್ಲ ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು ಆ ಹುಡುಗಿ ಇನ್ನು ಪೇಪರ್ ಓದುತ್ತಾನೆ ಇದ್ಲು "ದುಡ್ಡು ಕೊಟ್ಟು ತಗೊಂಡ ನಾನೇ ಓದ್ಲಿಲ್ಲ ಇವಳೇನು ಓದುತ್ತಿದ್ದಳಪ್ಪ" ಅಂತ ಮನಸ್ಸಿನಲ್ಲೇ ಅನ್ಕೊಂಡು ಆಕಳಿಸಿದೆ ಅಷ್ಟರಲ್ಲಿ ಆ ಹುಡುಗಿ ಏನ್ ಸರ್ ನಿದ್ದೆ ಆಯ್ತಾ ಅಂತ ಕೇಳ್ತಾ ಪೇಪರ್ ಮಡಚಿ ನನ್ನ ಕೈಗೆ ಕೊಟ್ಟು ಥ್ಯಾಂಕ್ಸ್ ಹೇಳಿದ್ಲು ಆಗ ನಾನು ಪ್ರತಿಯಾಗಿ ಆಯ್ತು ಮೇಡಂ ನಿಮ್ಮದು ನಿದ್ದೆ ಆಯ್ತಾ ಅಂತ ಕೇಳಿದೆ? ಆ ಹುಡುಗಿಗೆ ಸ್ವಲ್ಪ ಗಲಿಬಿಲಿ ಆಯ್ತು ಅನಿಸುತ್ತೆ, ನಂತರ ನಗ್ತಾ ಹ್ಹೋ..... ಆಯ್ತು ನಿನ್ನೆ ರಾತ್ರಿ ಅಂತ ಹೇಳಿದ್ಲು ನಾನು ಮತ್ತೇನು ಮಾತನಾಡ್ಲಿಲ್ಲಾ ಆಗ ನೀವು ತುಂಬಾ ಚನ್ನಾಗಿ ಕಾಮಿಡಿ ಮಾಡ್ತೀರಾ ಕಣ್ರೀ ಅಂದ್ಲು, ನಾನು ಕಾಮಿಡಿ ಎಲ್ಲಿ ಮಾಡ್ದೆ ಅಂದೆ. ಮತ್ತೆ ಇನ್ನೆನ್ರಿ ನಾವು ಯಾರನ್ನಾದ್ರು ಊಟ ಆಯ್ತಾ ಅಂತ ಕೇಳಿದ್ರೆ ಹ್ಹೋ ,,,,,, ಆಯ್ತು ನಿಮ್ಮದು ಆಯ್ತಾ ಅಂತ ಕೇಳ್ತಾರೆ ಆದರೆ ನಿಮಗೆ ನಿದ್ದೆ ಆಯ್ತಾ ಅಂತ ಕೇಳಿದ್ರೆ ನಿಮ್ಮದು ಆಯ್ತಾ ಅಂತ ಕೇಳ್ತಿರಲ್ಲ ಅದು ಕಾಮಿಡಿ ಅಲ್ವ! ನನಗೆ ನಗುನೆ ತಡೆಯೋಕೆ ಅಗ್ತಾ ಇಲ್ಲಾ ಅಂತ ಒಂದೇ ಉಸಿರಿನಲ್ಲಿ ಹೇಳಿ ಬಿಟ್ಲು. ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಪರಿಚಯ ನನ್ನ ಬಗ್ಗೆ ಆ ಹುಡುಗ ಎಲ್ಲಾ ತಿಳಿದುಕೊಂಡಳು ನಾನು ಏನ್ ಮಾಡ್ತಾ ಇದೀನಿ?, ಎಲ್ಲಿರೋದು?,ಯಾವ ಊರು? ಅಷ್ಟೇ ಏಕೆ ನನ್ನ ಮನೇಲಿ ಯಾರ್ಯರು ಇದ್ದಾರೆ? ಅಂತ ಕೇಳಿ ತಿಳಿದು ಕೊಂಡಳು ಅವಳ ಅಷ್ಟೋ ಪ್ರೆಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು ಸುಸ್ತಾಗಿ ಬಿಟ್ತು, ಅಲ್ಲಿತನಕ ಅವಳನ್ನ ಅಷ್ಟೊಂದು ಸರಿಯಾಗಿ ನೋಡಿರಲಿಲ್ಲ ಅವಳ ಮುಖದಲ್ಲಿ ಎಷ್ಟೋ ಮುಗ್ದತೆ ಇತ್ತು ಅಂದ್ರೆ " ಬಿಳಿ ಇರೋದೆಲ್ಲ ಹಾಲು ಅಂತ ನಂಬಿರೋ ಮಗುವಿನ ಮನಸ್ಸು " ಅಂತಹ ಮನಸ್ಸಲ್ಲಿ ಎಲ್ಲೋ ಒಂದು ಕಡೆ ಹೇಳಲಾರದಷ್ಟು ದುಃಖ ತುಂಬಿದೆ ಅಂತ ಅವಳ ಮುಖವನ್ನು ದೃಷ್ಟಿಸಿ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಯಾರನ್ನು ನಾನು ಅವರ ಜೀವನದ ಬಗ್ಗೆ ಕೇಳಿದವನು ಅಲ್ಲ ಆದ್ರೆ ಅವತ್ತೆಕು ನನ್ನ ಮನಸ್ಸು ತಡೆಯಲಿಲ್ಲ ನಾನೇ ಕೇಳಿಬಿಟ್ಟೆ

ನಗುವ ಮೊಗದ ಹೊವಲ್ಲಿ
ಮಾತು ಮಾತಿಗೂ ಯಾಕಿಷ್ಟು ಅಸಮದಾನ !
ಕೇಳು ಗೆಳತಿ ಹೇಳಬೇಕೆ
ನಾನು ಏನಾದರು ಸಮಾದಾನ !
ಹೇಳಿಕೊಳ್ಳೋ ಅಂತ ದುಃಖ ಏನು ಇಲ್ಲ, ಎಲ್ಲ ಹೆಣ್ಣಿಗೆ ಈ ವಯಸ್ಸಲ್ಲಿ ಎದುರಾಗೋ ಒಂದು ದೊಡ್ಡ ಸಮಸ್ಯೆ ನನಗು ಈಗ ಎದುರಾಗಿದೆ ಅದರಲ್ಲೂ ಈ ಮದ್ಯಮ ವರ್ಗದ ಜನರಿಗೆ ಈ ಸಮಸ್ಯೆ ಬರಬಾರದು ಅಂತ ಹೇಳಿ ಸ್ವಲ್ಪ ಹೊತ್ತು ಸುಮ್ಮನೆ ಕೂತಳು, ಮತ್ತೆ ನಾನು ಮಾತನಾಡಿದೆ ಏನಾದ್ರೂ ಮನೆಯಲ್ಲಿ ತೊಂದ್ರೆ ಇದೇನಾ ? ಸಮಸ್ಯೆ ಅಂದ್ರೆ ಯಾವರೀತಿಯದು ? ಅಂತ ಕೇಳಿದೆ, ಆಗಲೇ ಬಿಚಿಟ್ಟಿದ್ದು ನನ್ನ ಗೆಳತಿ ತನ್ನ ಭಾವನೆಗಳ ಒಳ ನೋವನ್ನ

ಗೆಳತಿ : ನಾನು ಇನ್ನು ಓದುತ್ತ ಇದೀನಿ ಅಕ್ಕನಿಗೆ ಈಗಾಗಲೇ ಮಧುವೆ ಮಾಡಿ ಎರಡು ವರ್ಷಗಳಾಯ್ತು ನನಗೆ ಒಬ್ಬಳು ತಂಗಿ ಬೇರೆ ಇದಾಳೆ ಇನ್ನು ಚಿಕ್ಕವಳು ಮನೆಯಲ್ಲಿ ಅಪ್ಪ ಅಮ್ಮ ಎಲ್ಲರು ಚನ್ನಾಗಿದಿವಿ. ಆದ್ರೆ ,,,,,!!!

ನಾನು : ಆದ್ರೆ ಇನ್ನೇನು ಎಲ್ಲ ಚನ್ನಾಗಿದ್ದಿರ ಇಲ್ಲಿ ಸಮಸ್ಯೆ ಆದರು ಏನು ?

ಗೆಳತಿ : ಮಧುವೆ............... ಮಧುವೆ............. ಇದೆ ಒಂದು ದೊಡ್ಡ ಸಮಸ್ಯೆ ಆಗಿದೆ ರೀ

ನಾನು ಮೊದ್ಲೇ ತಲೆಯಲ್ಲಿ ಹುಳ ಬಿಟ್ಕೊಂಡಿದ್ದೆ ಇವಳು ಹೇಳಿದ್ದು ಕೇಳಿ ನನಗೆ ಚನ್ನಾಗಿದ್ದ ತಲೆ ಗಿರಗಿರ ಅಂತ ತಿರಗ್ತಾ ಇತ್ತು ! ಅಲ್ಲ ರೀ ನಮ್ಮೂರಲ್ಲಿ ಎಲ್ಲ ಹುಡುಗಿರು ಮಧುವೆ ಅಂದ್ರೆ ಎಷ್ಟು ಖುಷಿಯಾಗಿರ್ತರೆ ನಿಮಗೇನ್ರಿ ಆಗಿದೆ ಮಧುವೇನೆ ಒಂದು ಸಮಸ್ಯೆ ಅಂತಿರಲ್ಲ ಯಾಕೆ ಹುಡುಗ ಚನ್ನಾಗಿಲ್ವ ?

ಗೆಳತಿ : ಹಾಗಲ್ಲ ರೀ ಹುಡುಗ ಚನ್ನಾಗಿದನೆ ಆದ್ರೆ ನಾನು ಇನ್ನು ಓದು ಬೇಕು ಅನ್ಕೊಂಡಿದ್ದೇನೆ ಆದ್ರೆ ನಮ್ಮ ಮನೇಲಿ ಎಲ್ಲರು ನನ್ನ ಮಧುವೆ ಬಗ್ಗೆನೇ ಯೋಚನೆ, ಈ ತಂದೆ ತಾಯಿಗಳೇ ಇಷ್ಟು ಮಗಳು ವಯಸ್ಸಿಗೆ ಬಂದ್ಲು ಅಂದ್ರೆ ಸಾಕು ಮೊದ್ಲು ಯೋಚನೆ ಮಾಡೋದೇ ಮಧುವೆ ಬಗ್ಗೆ , ನಮ್ಮ ಭಾವನೆಗಳಿಗೆ ಇಲ್ಲಿ ಬೆಲೆ ಇಲ್ಲ, ಒಂದು ರೀತಿ ಇದರಲ್ಲಿ ಅವರದು ತಪ್ಪೇನು ಇಲ್ಲ ಎಲ್ಲ ಈ ಬಡತನ. ಅದಕ್ಕೆ ಹೇಳಿದ್ದು ಹುಟ್ಟಿದ್ದರೆ ಈ ಮದ್ಯಮ ವರ್ಗದಲ್ಲಿ ಹುಟ್ಟುಬಾರ್ದು ಒಂದುವೇಳೆ ಹುಟ್ಟಿದ್ರು ಹೆಣ್ಣಾಗಿ ಮಾತ್ರ ಹುಟ್ಟುಬಾರ್ದು (ಕಣ್ಣಿನಲ್ಲಿ ತಡೆಯಲಾಗದ ಕಣ್ಣಿರು) ನಾನು ಹೋಗ್ಲಿ ಬಿಡಿ ಇದೆಲ್ಲ ಸಾಮಾನ್ಯ ಅಂತ ಸಮಾದಾನ ಮಾಡಿದೆ.

ಜೀವನ ಒಂದು ತೊಗುಯ್ಯಲೇ
ಮರೆಯಬೇಡಮ್ಮ
ಬಾಳಲಿ ಕದನ ನಿಲ್ಲದ ಪಯಣ
ತಾಳ್ಮೆ ಬೇಕಮ್ಮ !

ಇದು ನೆನ್ನೆ ಮೊನ್ನೆಯ ಸಮಸ್ಯೆ ಅಲ್ಲ ಯಾವಾಗ ಹೆಣ್ಣು ಈ ಭೂಮಿ ಮೇಲೆ ಕಾಲಿಟ್ಲೋ ಅಂದಿನಿಂದ ಇಂದಿನಹೊರೆಗೂ ಈ ಬಡತನ, ವರದಕ್ಷಿಣೆ, ಕಣ್ಣಿರು ಅವಳ ಬೆನ್ನ ಹಿಂದೇನೆ ಬಂದಿದೆ ಅಲ್ವ ! ಇಲ್ಲಿ ನಾನಾದರು ಬರಿ ಮಾತುಗಳಿಂದ ಸಮಾದಾನ ಮಾಡಿ ಸಾಂತ್ವನ ಹೇಳ ಬಹುದು ಆದ್ರೆ ಈ ಸಮಸ್ಯೆ ಅನ್ನೋ ಸಮಸ್ಯೆಗಳನ್ನ ಕೊನೆಗಾಣಿಸೋಕೆ ಆ ಬ್ರಮ್ಹನಿಂದಲೂ ಆಗೋಲ್ಲ ಅನಿಸುತ್ತೆ ಅಲ್ವ !

ಕೈಯಲಿದ್ದ ಕರ್ಚಿಪ್ ನಿಂದ ಕಣ್ಣಿರನ್ನು ಒರೆಸಿಕೊಂಡು ನನ್ನ ಆ ಮುದ್ದು ಗೆಳತಿ ಮತ್ತೆ ಮಾತನಾಡ ತೊಡಗಿದಳು. ಅದೇನೋ ಗೊತ್ತಿಲ್ಲ ಕಣ್ರೀ ನಿಮ್ಮ ನೋಡಿದ ತಕ್ಷಣ ನನ್ನ ಎಲ್ಲ ನೋವಗಳನ್ನ ನಿಮ್ಮ ಜೊತೆ ಶೇರ್ ಮಾಡ್ಕೊಬೇಕು ಅನಿಸಿತ್ತು ಅದಕ್ಕೆ ಎಲ್ಲ ನಿಮ್ಗೆ ಹೇಳ್ತಾ ಇದೀನಿ ಈ ಥರನಾದ್ರು ನಾನು ನನ್ನ ಭಾವನಗಳನ್ನ ನಿಮ್ಮ ಜೊತೆ ಹಂಚಿಕೊಂಡು ನನ್ನ ದುಃಖನ ಕಡಿಮೆ ಮಾಡಿಕೊಳ್ತಾ ಇದೀನಿ ಏನು ತಪ್ಪು ತಿಳ್ಕೊಬೇಡಿ ಅಂದ್ಲು ಅಷ್ಟರಲ್ಲಿ ಅವಳ ಸ್ಟಾಪ್ ಬಂತು ಕೈಯಲ್ಲಿ ಬ್ಯಾಗ್ ತಗೊಂಡು ಇಳಿದಳು ರೈಲ್ ಹೊರೋಡೋಕೆ ಇನ್ನು ಟೈಮ್ ಇತ್ತು ಅದಕ್ಕೆ ಜೊತೆಗೆ ನಾನು ಇಳಿದೆ ಮತ್ತೆ ಯಾವಾಗ್ ಸಿಗ್ತಿರ ಅಂತ ಕೇಳ್ದೆ ಅವಳು "ನನ್ನ ಕಡೆ ಒಮ್ಮೆ ನೋಡಿ ಮಂಜು ನೀವು ಯಾರು ಏನು ಅಂತ ಗೊತ್ತಿಲ್ಲ ಆದ್ರೆ ನಿನ್ನಂತ ಒಳ್ಳೆ ಹುಡುಗ ನನಗೆ ಸಿಗ್ತನೋ ಇಲ್ವೋ ! ನಿನಗೆ ಮಾತ್ರ ಒಳ್ಳೆ ಹುಡುಗಿ ಸಿಗ್ಲಿ ನಿಮ್ಮನ್ನ ನೋಡೋ ಋಣ ಇತ್ತು ಅಂದ್ರೆ ಮತ್ತೆ ನಾವಿಬ್ರು ಸಿಕ್ಕೆ ಸಿಗ್ತಿವಿ " ಅಮ್ಮನ್ನ ಚನ್ನಾಗಿ ನೋಡಿಕೊಳ್ಳಿ ನಿಮ್ಮ ಜೊತೆ ಕಳೆದ ಈ ಕೆಲವು ಕ್ಷಣಗಳು ನನ್ನ ಜೀವನ ಇರೋತನಕ ಮರೆಯೋಲ್ಲ (ನಿಲ್ಲದ ಕಣ್ಣಿರು). ಅಷ್ಟರಲ್ಲಿ ರೈಲ್ ಹೊರಡ್ತು ನನಗೆ ರೈಲ್ ಹತ್ತೋ ಮನಸ್ಸಿರಲಿಲ್ಲ ಕೈ ಕುಲಕಿ ಶುಭಕೋರಿ ಮತ್ತೆ ಮೆಲ್ಲನೆ ದ್ವನಿಯಲ್ಲಿ "ನೀವು ಎಲ್ಲೇ ಇದ್ರೂ ಚನ್ನಗಿರಿ ನಿಮ್ಮ ಮುಂದಿನ ಜೀವನ ಇನ್ನು ಚನ್ನಗಿರುತ್ತೆ " ದೇವರು ನಿಮ್ಮನ್ನ ಕಾಪಾಡ್ತಾನೆ ಅಂದೇ ರೈಲ್ ಹೋಗ್ತಾನೆ ಇತ್ತು ನಾನು ಇನ್ನು ಅವಳನ್ನೇ ನೋಡ್ತಾ ನಿಂತಿದ್ದೆ ಆಗ ಆ ಗೆಳತಿ ತನ್ನ ಕೈಯಲ್ಲಿದ ಬ್ಯಾಗ್ ಬಿಟ್ಟು ನನ್ನ ಕೈ ಹಿಡಿದು ರೈಲ್ ಹೋಗ್ತಾ ಇದೇ ಬೇಗ ಹತ್ತಿ ಅಂತ ನನ್ನ ತಳ್ಳಿದ್ಲು........

ಅದೇ ಕೊನೆ ನಾನು ಆ ಗೆಳತಿನ ನೋಡಿದ್ದು ಇಲ್ಲಿಗೆ ಒಂದುವರೆವರ್ಷ ಆಯ್ತು ಅನಿಸುತ್ತೆ ಆ ಗೆಳತಿ ಹೇಳಿದಂಗೆ ಮತ್ತೆ ಅವಳನ್ನ ನೋಡೋ ಋಣ ಬರುತ್ತಾ .................... ? ? ? ಬಂದೆ ಬರುತ್ತೆ ಅಂತ ಹೇಳ್ತಾ ಇದೇ ನನ್ನ ಮನಸ್ಸೂ ಅದಕ್ಕೆ ಇದುವರೆಗೂ ನಾನು ಅದೇ ರೈಲ್ ಗೆ ಹೋಗ್ತಾ ಇರ್ತೀನಿ ಒಂದಲ್ಲ ಒಂದು ದಿನ ಆ ಋಣ ಕೊಡಿ ಬಂದ್ರೆ ಅದೇ ರೈಲ್ ನಲ್ಲಿ ಅದೇ ಬೋಗಿನಲ್ಲಿ "ಅವಳ ಗಂಡನ ಜೊತೆ ನನ್ನ ಮುದ್ದು ಗೆಳತಿ ಕೈಯಲ್ಲೊಂದು ಮಗು" ನೋಡೇ ನೋಡ್ತೀನಿ ಇದು ಅವಳ ಕನಸ್ಸು ನನ್ನ ಕನಸ್ಸು ಕೊಡ ನಮ್ಮಿಬ್ಬರ ಸ್ನೇಹಮಯ ಕನಸು ನನಸು ಆಗುತ್ತೆ ಅಲ್ವ !

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"
ಎಲ್ಲೇ ಇರು ಹೇಗೆ ಇರು ಚನ್ನಾಗಿರು
ಇಂತಿ ನಿನ್ನ ಕೆಲವೇ ಕೆಲವು ಘಂಟೆಗಳ
ಗೆಳೆಯ ನಿನ್ನ ಸ್ನೇಹದ ಸೇವಕ
ದೊಡ್ಡಮನಿ.ಎಂ.ಮಂಜು.