ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday 16 July 2009

ಯಾರವರು ?

ಯಾರೋ ನನ್ನ ಕರೆದರು
ಕರೆದು ಕರವ ಹಿಡಿದರು
ಕರವ ಹಿಡಿದು ಅರಿವಿನೆಡೆಗೆ ತಳ್ಳಿ ದೂರವಾದರು
ಎಲ್ಲಿಯವರು ಯಾರವರು ?


ದುಗುಡವೆಲ್ಲ ತೊಳೆದರು
ನಗೆಯ ಹೊನಲ ಹರಿಸಿದರು
ನವಿಲಗರಿಯ ಮೇಲೆ ನಡೆಸಿ ಹಾಲು-ತುಪ್ಪ ಎರೆದರು
ಎಲ್ಲಿಯವರು ಯಾರವರು ?


ಬರಡು ಭೂಮಿ ನಡುವೆ ನಿಲಿಸಿ
ಫಲದ ಬೀಜಾ ಬೀತ್ತಿಸಿದರು
ನೇಗಿಲ ಹಿಡಿವ ಯೋಗಿಯಮಾಡಿ ಮಳೆಯಾಗಿ ಸುರಿದರು
ಎಲ್ಲಿಯವರು ಯಾರವರು ?


ಮುಗ್ದ ಮುಖದ ಮನಸಿನಲ್ಲಿ
ಮಡಿಲ ಮಮತೆ ತೋರಿದರು
ಒಮ್ಮೆ ಕೊಗಿ ತಿರುಗುವಲ್ಲಿ ಯಾಕೆ ಮಾಯವಾದರು
ಎಲ್ಲಿಯವರು
ಯಾರವರು ?


ಕಡಲ
ತೀರದಲ್ಲಿ ಹಿಡಿದು
ಕೈಯ ಕಾಡ ಅಡವಿಯಲ್ಲಿ
ಬಿಟ್ಟರು ಬೆಚ್ಚಿ ಕೊಗಿ ಕರೆದರೊನು ಯಾಕೆ ಕೇಳದಾದರು
ಎಲ್ಲಿಯವರು ಯಾರವರು ?

* * * * * * *

2 comments: